ಶಿವಮೊಗ್ಗ: ಫೆ.23ರಂದು ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ನಡೆಯಲಿರುವ ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿ ಸಮಾರಂಭದ ಹಿನ್ನೆಲೆಯಲ್ಲಿ ನಗರದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ರವೀಂದ್ರ ನಗರದ ಶ್ರೀಗಣಪತಿ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಯಕ್ಷಗಾನ ತಂಡಗಳ ಮುಖ್ಯಸ್ಥರು, ಕಲಾವಿದರು, ಸಂಘಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡು ಸಮಾರಂಭ ಯಶಸ್ವಿಯಾಗಲು ತಮ್ಮ ಸಲಹೆ ನೀಡಿದರು.
ಶಿವಮೊಗ್ಗೆಗೆ ಪ್ರಥಮವಾಗಿ ಬಂದಿರುವ ಅವಕಾಶದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಲ್ಲದೇ ವಿಚಾರ ವಿನಿಮಯ ಮಾಡಿದರು. ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗ್ಡೆ ಮತ್ತು ಅಕಾಡೆಮಿ ಸದಸ್ಯ ಲಕ್ಷ್ಮೀನಾರಾಯಣ ಕಾಶಿ ಹಾಗೂ ಅಕಾಡೆಮಿ ರಿಜಿಸ್ಟಾರ್ ಶಿವರುದ್ರಪ್ಪ ನವರು ಸಭೆಯಲ್ಲಿ ಭಾಗವಹಿಸಿ ಸಮಾರಂಭ ಯಶಗೊಳಿಸಲು ಶಿವಮೊಗ್ಗ ಜನತೆಯ ಸಹಕಾರ ಕೋರಿದರು.
Discussion about this post