ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳಿಗೆ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಂಡಿದ್ದು, ಸಣ್ಣ ಪುಟ್ಟ ಚಿಕಿತ್ಸೆಗಳ ನಂತರ ಗುಣಮುಖರಾಗಿದ್ದಾರೆ ಎಂದು ಶ್ರೀಮಠ ಸ್ಪಷ್ಟನೆ ನೀಡಿದೆ.
ಈ ಕುರಿತಂತೆ ಸ್ಪಷ್ಟೀಕರಣದ ನೀಡಿರುವ ವೈದ್ಯ ವೇಣುಗೋಪಾಲ್ ಶ್ರೀಸಂಸ್ಥಾನದವರು ಕ್ಷೇಮವಾಗಿದ್ದು, ಶಿಷ್ಯ ಭಕ್ತರು ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಶ್ರೀಮಠದ ಶಿಷ್ಯ ಭಕ್ತರ ಆಗ್ರಹ, ಹಿರಿಯ ಕಾರ್ಯಕರ್ತರ ವಿಜ್ಞಾಪನೆ ಹಾಗೂ ವೈದ್ಯರ ಸಲಹೆಯನ್ನು ಮನ್ನಿಸಿ, ಶ್ರೀಸಂಸ್ಥಾನದವರು ಸಿದ್ದಾಪುರದ ಭಾನ್ಕುಳಿ ಮಠದ ಬದಲಾಗಿ ಗಿರಿನಗರದ ಶಾಖಾ ಮಠದಲ್ಲಿ ಮಠೀಯ ಪದ್ಧತಿಯಂತೆ ಚಾತುರ್ಮಾಸ್ಯ ವ್ರತದೀಕ್ಷೆಯನ್ನು ಕೈಗೊಳ್ಳುತ್ತಿದ್ದಾರೆ.
ಕಿಡ್ನಿ ಸ್ಟೋನ್ ಹೊರತಾಗಿ ಶ್ರೀಗಳಿಗೆ ಬೇರೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇರುವುದಿಲ್ಲ. ಈ ಕುರಿತಾಗಿ ಯಾವುದೇ ವದಂತಿಗಳಿಗೆ ಕಿವಿಗೊಡಬೇಕಾದ ಅವಶ್ಯಕತೆ ಇಲ್ಲ, ಶ್ರೀಗಳು ಆರೋಗ್ಯದಿಂದಿದ್ದು ಭಕ್ತರು ಆತಂಕ ಪಡಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Discussion about this post