No Result
View All Result
SWR Mysuru Division Excels with Record Passenger Revenue and Strong Commercial Growth
English Articles

SWR Mysuru Division Excels with Record Passenger Revenue and Strong Commercial Growth

by ಕಲ್ಪ ನ್ಯೂಸ್
April 2, 2026
0

Kalpa Media House  |  Mysuru | The Mysuru Division has recorded an exceptional performance during the financial year 2025–26, achieving...

Read moreDetails
SWR to run special trains for Good Friday, Easter rush

Summer Special Train Between Tiruchchirappalli & SMVT Bengaluru

April 2, 2026
PESITM hosts Mock CET 2026 to Strengthen KCET Preparation

PESITM hosts Mock CET 2026 to Strengthen KCET Preparation

March 31, 2026
India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

March 30, 2026
SWR to run special trains for Good Friday, Easter rush

SWR to run special trains for Good Friday, Easter rush

March 30, 2026
  • Advertise With Us
  • Grievances
  • About Us
  • Contact Us
Friday, April 3, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಧರ್ಮ ಸೂಕ್ಷ್ಮ: ಹುಟ್ಟಿದ ಮಗುವನ್ನು 40 ದಿನ ದೇಗುಲಕ್ಕೆ ಯಾಕೆ ಕರೆದುಹೋಗುವಂತಿಲ್ಲ ಗೊತ್ತಾ?

ಹುಟ್ಟಿದ ಮಗುವಿಗೆ ಮೊದಲ ಸಂಸ್ಕಾರ ಜಾತಕರ್ಮ, ನಂತರದ್ದು ಅನ್ನ ಪ್ರಾಶನ, ನಂತರ ವಿದ್ಯಾರಂಭ. ಇಲ್ಲಿಂದ ಮುಂದೆ ಗಂಡು ಮಗುವಿಗೊಂದು ರೂಪದ ಸಂಸ್ಕಾರ, ಹೆಣ್ಣು ಮಗುವಿಗೊಂದು ರೂಪದ ಸಂಸ್ಕಾರಗಳು.

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
February 13, 2019
in Army
0
ಧರ್ಮ ಸೂಕ್ಷ್ಮ: ಹುಟ್ಟಿದ ಮಗುವನ್ನು 40 ದಿನ ದೇಗುಲಕ್ಕೆ ಯಾಕೆ ಕರೆದುಹೋಗುವಂತಿಲ್ಲ ಗೊತ್ತಾ?
Share on FacebookShare on TwitterShare on WhatsApp

ಜನನ ಕೌಮಾರ್ಯ, ಯವ್ವನ, ವೃದ್ಧಾಪ್ಯ, ಮರಣ ಇದು ಪ್ರಕೃತಿ ಸಹಜ ಧರ್ಮ. ಈ ಜನನದಿಂದ ಮರಣಗಳವರೆಗಿನ ರೀತಿನೀತಿಯು ಸಂಸ್ಕಾರಗಳ ಆಧಾರದಲ್ಲೇ ನಿರ್ಧಾರಿತವಾಗುತ್ತದೆ. ನಿರ್ಣಯ ಸಿಂದು ಮುಂತಾದ ಪುರಾತನ ಗ್ರಂಥಗಳಲ್ಲಿ ಪೂರ್ವ ಶೋಡಶ ಮತ್ತು ಉತ್ತರ ಶೋಡಶ ಸಂಸ್ಕಾರಗಳನ್ನು ಹೇಳಿದೆ. ಪೂರ್ವ ಶೋಡಶಗಳಲ್ಲಿ ಜನನಾತ್ ಪೂರ್ವ ಗರ್ಭ ಸಂಸ್ಕಾರಗಳಿವೆ. ಪುಂಸವನ, ಸೀಮಂತ ಇತ್ಯಾದಿಗಳೆಲ್ಲ ಗರ್ಭ ಸಂಸ್ಕಾರಗಳಾಗುತ್ತದೆ.

ಕೊನೆಯ ಹಂತ ಜನನ. ಜನಿತ ಶಿಶುವಿಗೆ ಹತ್ತು ದಿನಗಳ ಜನನ ಶೌಚಾದಿಗಳು ಕಳೆದ ಮೇಲೆ ಜಾತಕರ್ಮ ಸಂಸ್ಕಾರಗಳಾಗಬೇಕು. ಅಂದರೆ ಇದನ್ನು ವೈಜ್ಞಾನಿಕ ಪರಿಭಾಷೆಗಳಲ್ಲಿ Processing ಎನ್ನಬಹುದು. ಇದರ ಆಧಾರದಲ್ಲಿ ಮುಂದಿನ ಜೀವನ ಕ್ರಮಗಳು ನಿರ್ಧಾರಿತವಾಗುತ್ತದೆ.


ಮಗು ಹುಟ್ಟಿದ ಮೇಲೆ ಜನನಿಯೇ ಆ ಶಿಶುವಿಗೆ ಮೊದಲ ಗುರು. ಆಕೆಯಿಂದಲೇ ಮೊದಲ ಸಂಸ್ಕಾರಗಳಾಗುತ್ತದೆ. ಮಗುವಿನ ಸ್ವಾಸ್ಥ್ಯಕ್ಕಾಗಿ ಆಹಾರ ನಿಯಮ, ಮಗುವಿನ ಬೆಳವಣಿಗೆಗಳಿಗಾಗಿ ಮಗುವಿಗೆ ನಿತ್ಯ ತೈಲಾಭ್ಯಾಂಗ, ಮಗುವಿನ ಅಂಗಾಂಗ ಮರ್ಧನ ಇತ್ಯಾದಿ ಅನೇಕ ರೀತಿಯ ಕ್ರಿಯೆಗಳು ಮಗುವಿನ ಬೆಳವಣಿಗೆಗೆ ಪೂರಕವಾದ ಕಾರ್ಯಗಳಾಗುತ್ತದೆ. ಇದು ಲೌಕಿಕ ಶರೀರದ ಬೆಳವಣಿಗೆಗಳಾದರೆ, ಅಲೌಕಿಕ(ಮನಸ್ಸಿಗೆ ಬೇಕಾಗುವ ಕ್ರಿಯೆ) ಗಳಿವೆ. ಇದನ್ನು ಧರ್ಮ ಶಾಸ್ತ್ರದಲ್ಲಿ ವಿವರಿಸಿದೆ.

ಹುಟ್ಟಿದ ಮಗುವಿಗೆ ಮೊದಲ ಸಂಸ್ಕಾರ ಜಾತಕರ್ಮ, ನಂತರದ್ದು ಅನ್ನ ಪ್ರಾಶನ, ನಂತರ ವಿದ್ಯಾರಂಭ. ಇಲ್ಲಿಂದ ಮುಂದೆ ಗಂಡು ಮಗುವಿಗೊಂದು ರೂಪದ ಸಂಸ್ಕಾರ, ಹೆಣ್ಣು ಮಗುವಿಗೊಂದು ರೂಪದ ಸಂಸ್ಕಾರಗಳು. ಈ ಎರಡೂ ಲಿಂಗಗಳ ಶಿಶುವಿಗೆ ದೇವತಾ ವಿಚಾರದಲ್ಲಿ ಇನ್ನೊಂದು ನಡೆ ಬಹಳ ಪ್ರಾಮುಖ್ಯತೆಯ ಧರ್ಮವೊಂದಿದೆ. ಇದು ಮಗುವಿನ ಎಲ್ಲಾ ಸಂಸ್ಕಾರಗಳ ಧಾರಣಾ ಶಕ್ತಿಯನ್ನು ಹೆಚ್ಚಿಸುವಂತಹದ್ದು. ಸಾಮಾನ್ಯ ಕೆಲವರಿಗೆ ಇದರ ಬಗ್ಗೆ ಗೊತ್ತಿರುವುದಿಲ್ಲ. ಹತ್ತು ದಿನಗಳ ಬಳಿಕ ಶುದ್ಧ ಕ್ರಿಯೆಗಳು ಮುಗಿದ ಬಳಿಕ ದೇವಸ್ಥಾನಕ್ಕೆ ಹೋಗಿ ಬರುವುದು ವಾಡಿಕೆಯಾಗಿದೆ. ಗರ್ಭದಲ್ಲಿ ಶಿಶುವಿಗೆ ಏಳು ತಿಂಗಳಾದನಂತರ ದಂಪತಿಗಳು ದೇವಸ್ಥಾನಗಳ ಧ್ವಜಸ್ಥಂಭ ದಾಟಿ ಒಳಗೆ ಹೋಗುವಂತಿಲ್ಲ. ಯಾವುದೇ ಯಜ್ಞ, ಪೂಜಾ ಕಾರ್ಯದಲ್ಲಿ ಯಜಮಾನಿಕೆ ಮಾಡುವಂತಿಲ್ಲ. ಇದನ್ನು ಗರ್ಭದೀಕ್ಷೆ ಎನ್ನುತ್ತಾರೆ. ಪ್ರಸವಾನಂತರ ಶುದ್ಧವಾದ ಬಳಿಕವೇ ಹೋಗಬಹುದಾದರೂ ತಾಯಿಗೆ ದೇವಸ್ಥಾನ ಪ್ರವೇಶಕ್ಕೆ ಕಾಲ ಪಕ್ವ ಆಗಬೇಕಾದರೆ ಮಗು ಜನಿಸಿದಲ್ಲಿಂದ 40 ದಿನ ಕಾಯಬೇಕು. ಕೆಲವೊಮ್ಮೆ 24 ದಿನವೂ ಸಾಕೆಂದೂ ಹೇಳಿದೆ. ಇದನ್ನು ರೂಢಿ ಭಾಷೆಯಲ್ಲಿ ನಲವತ್ತು ನೀರು ಎಂದಿದೆ. ಈ ನಲವತ್ತು ಸ್ನಾನದ ಬಳಿಕವೇ ಮಂದಿರದೊಳಗಿನ ಧ್ವಜಸ್ಥಂಭ ದಾಟಿ ದೇವರ ದರ್ಶನ ಪಡೆಯಬೇಕು ಮತ್ತು ಪ್ರಸಾದ ಸ್ವೀಕರಿಸಬೇಕು. ಮೊದಲಬಾರಿಗೆ ಮಗುವಿನೊಂದಿಗೇ ಹೋಗಬೇಕು. ನಂತರ ಒಬ್ಬರೇ ಹೋಗುವುದಕ್ಕಡ್ಡಿ ಇಲ್ಲ.

ಯಾಕೆ ಮೊದಲ ಬಾರಿಗೆ ಮಗುವಿನೊಂದಿಗೆ ಹೋಗಬೇಕು? ಯಾಕೆ ಶೌಚ ಮುಗಿದ ಮಾರನೆಯ ದಿನ ಹೋಗಬಾರದು?
ತಾಯಿಗೆ ಸಾಮಾನ್ಯ ನಲವತ್ತು ದಿನಗಳವರೆಗೆ ಸ್ರಾವ ಇರುತ್ತದೆ ಎಂಬುದು ಮೊದಲ ಕಾರಣ. ತಾಯಿ ಮಗುವನ್ನು ಬಿಟ್ಟು ಹೋಗಬಾರದು ಎಂಬುದೂ ಒಂದು ಕಾರಣ. ಮಗುವಿನೊಂದಿಗೆ ಹೋಗಿ ದೇವರ ತೀರ್ಥಪ್ರಸಾದ ಸ್ವೀಕರಿಸಲೇಬೇಕು. ಆದರೆ ನಲವತ್ತು ದಿನಕ್ಕೆ ಮುಂಚೆ ಮಗುವಿಗೆ ಸ್ಥನ್ಯ ಪಾನವಲ್ಲದೆ ಬೇರೇನೂ ಪಾನ ಮಾಡಿಸುವ ಹಾಗಿಲ್ಲ. ಯಾಕೆಂದರೆ ಮಗುವಿನ ಅನ್ನ ನಾಳವು ಪುಷ್ಪದ ಕುಸುಮಗಳಷ್ಟೇ ಮೆದುವಾಗಿರುತ್ತದೆ. ಆ ಸಮಯದಲ್ಲಿ ತೀರ್ಥ ಪ್ರಸಾದ ಸೇವಿಸಿದರೆ ಅಪಾಯಗಳೇ ಹೆಚ್ಚು. ಅಂದರೆ ದೇವಸ್ಥಾನಕ್ಕೆ ಹೋದರೆ ತೀರ್ಥ ಸೇವನೆ ಮಾಡದೆ ಬರುವಂತಿಲ್ಲ. ಮಾಡಿದರೆ ಶಿಶುವಿನ ದೇಹದ ರಚನೆಯೊಳಗಿನ ವ್ಯವಸ್ಥೆಗೆ ಉಪದ್ರವಾಗಬಹುದು. ಶಿಶುವನ್ನು ಬಿಟ್ಟು ದೇವಸ್ಥಾನಕ್ಕೆ ತಾಯಿಯೊಬ್ಬಳೇ ಹೋಗುವಂತಿಲ್ಲ. ಇದಕ್ಕಾಗಿ ನಲವತ್ತು ದಿನ ಹೋಗಲೇಬಾರದು ಎಂಬ ವಾಡಿಕೆಯಾಯ್ತು.

ಮಗುವಿಗೆ ಮೊದಲ ಅನ್ನ ಪ್ರಾಶನವೇ ದೇವರ ಪ್ರಸಾದ. ನಲವತ್ತು ದಿನಕ್ಕೆ ಮುಂಚೆ ಪ್ರಾಶನ ಮಾಡಿಸುವಂತಿಲ್ಲ. ಒಟ್ಟಿನಲ್ಲಿ ಶಿಶುವನ್ನು ಬಿಟ್ಟು ಪ್ರಥಮ ಬಾರಿ ದೇವಸ್ಥಾನಕ್ಕೆ ಹೋಗುವಂತಿಲ್ಲ. ಹೋದರೆ ಪ್ರಸಾದ ಸ್ವೀಕರಿಸದೆ ಬರುವಂತಿಲ್ಲ. ಪ್ರಸಾದ ಸ್ವೀಕರಿಸಿದರೆ ಮಗುವಿಗೆ ಅಪಥ್ಯವಾಗುತ್ತದೆ. ಹಾಗಾಗಿ ನಲವತ್ತು ದಿನಗಳ ನಂತರವೇ ಹೋಗಬೇಕು ಎಂಬ ನಿಯಮವಿರುವುದು.


ಹೆಚ್ಚಿನವರಿಗೆ ಈ ವಿಚಾರ ಗೊತ್ತಿಲ್ಲ. ಅಕಾಲದಲ್ಲಿ ಮಗುವಿಗೆ ದೇವರ ದರ್ಶನ, ಅಲ್ಲಿನ ರಷ್ಮಿಗಳ ಗ್ರಹಣ(Vibration) ತೊಂದರೆಯಾಗಬಹುದು. ಇದು ನೇರ ಮೆದುಳಿಗೆ ಪರಿಣಾಮ ಬೀರಬಹುದು. ಮುಂದೆ ಆ ಮಗು ಸಂಸ್ಕಾರ ಹೀನತೆಯನ್ನೋ, ಅಡ್ಡದಾರಿ ಹಿಡಿಯುವಂತೆಯೋ ಆಗಬಹುದು ಎಂಬುದನ್ನು ಪ್ರಾಜ್ಞರುಗಳು ಅನುಭವ ಪೂರ್ವಕ ಸಂಶೋಧನೆ ನಡೆಸಿ ವಿಧಿವಿಧಾನಗಳ ನಿಯಮವನ್ನು ರೂಢಿಸಿಕೊಂಡರು.

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: Anna PrashanaBorn BabyCultureKannada ArticlePrakash AmmannayaReligion sensitiveTempleVibrationಅನ್ನ ಪ್ರಾಶನಜಾತಕರ್ಮ ಸಂಸ್ಕಾರಧರ್ಮ ಸೂಕ್ಷ್ಮಪ್ರಕಾಶ್ ಅಮ್ಮಣ್ಣಾಯಸಂಸ್ಕಾರ
Share198Tweet124Send
Previous Post

ಶ್ರೇಷ್ಠ ಸಂಸದೀಯ ಪಟು ಅಟಲ್ ಜೀ ಭಾವಚಿತ್ರ ಸಂಸತ್’ನಲ್ಲಿ ಅನಾವರಣ

Next Post

ಚಿತ್ರೀಕರಣದಲ್ಲಿ ಕಿರಿಕ್ ಹುಡುಗನ ‘ಮೀಟೂ’ ಕಾಂಟ್ರೊವರ್ಸಿ! ನಟಿ ಯಾರು?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಚಿತ್ರೀಕರಣದಲ್ಲಿ ಕಿರಿಕ್ ಹುಡುಗನ ‘ಮೀಟೂ’ ಕಾಂಟ್ರೊವರ್ಸಿ! ನಟಿ ಯಾರು?

ಚಿತ್ರೀಕರಣದಲ್ಲಿ ಕಿರಿಕ್ ಹುಡುಗನ 'ಮೀಟೂ' ಕಾಂಟ್ರೊವರ್ಸಿ! ನಟಿ ಯಾರು?

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಶಿವಮೊಗ್ಗ | ರೈನ್ ಬೋ ಸ್ಕಿನ್ ಹೇರ್ ಕ್ಲಿನಿಕ್’ನಲ್ಲಿ ಕಾಸ್ಮೆಟಿಕ್ ಗೈನಕಾಲಜಿ ವಿಭಾಗ ಉದ್ಘಾಟನೆ

ಶಿವಮೊಗ್ಗ | ರೈನ್ ಬೋ ಸ್ಕಿನ್ ಹೇರ್ ಕ್ಲಿನಿಕ್’ನಲ್ಲಿ ಕಾಸ್ಮೆಟಿಕ್ ಗೈನಕಾಲಜಿ ವಿಭಾಗ ಉದ್ಘಾಟನೆ

April 3, 2026
ಮೊಬೈಲ್’ನಿಂದ ದೂರವಿದ್ದು ಸುಂದರ ಬಾಲ್ಯ ಸವಿಯಿರಿ | ಎಸ್.ಎಲ್. ಅಶ್ವತ್ಥ್ ಕರೆ

ಮೊಬೈಲ್’ನಿಂದ ದೂರವಿದ್ದು ಸುಂದರ ಬಾಲ್ಯ ಸವಿಯಿರಿ | ಎಸ್.ಎಲ್. ಅಶ್ವತ್ಥ್ ಕರೆ

April 3, 2026
ವಾಸ್ತವತೆಯ ವಿಮರ್ಶಿಸುವ ಕುತೂಹಲ ಬೆಳೆಸಿಕೊಳ್ಳಿ | ನಾರಾಯಣ ರಾವ್

ವಾಸ್ತವತೆಯ ವಿಮರ್ಶಿಸುವ ಕುತೂಹಲ ಬೆಳೆಸಿಕೊಳ್ಳಿ | ನಾರಾಯಣ ರಾವ್

April 3, 2026
ಸರಕು ಸಾಗಣೆ, ಆದಾಯ ವೃದ್ಧಿಯಲ್ಲಿ ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗ ಮೈಲಿಗಲ್ಲು ದಾಖಲೆ

ಸರಕು ಸಾಗಣೆ, ಆದಾಯ ವೃದ್ಧಿಯಲ್ಲಿ ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗ ಮೈಲಿಗಲ್ಲು ದಾಖಲೆ

April 2, 2026
2025–26ನೇ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆ ಗಳಿಸಿದ ಒಟ್ಟು ಆದಾಯವೆಷ್ಟು ಗೊತ್ತಾ?

2025–26ನೇ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆ ಗಳಿಸಿದ ಒಟ್ಟು ಆದಾಯವೆಷ್ಟು ಗೊತ್ತಾ?

April 2, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL