ಕಲ್ಪ ಮೀಡಿಯಾ ಹೌಸ್ | ಸಾಗರ |
ದಿನದಿಂದ ದಿನಕ್ಕೆ ಏರುತ್ತಿರುವ ಉಷ್ಣತೆಯಿಂದಾಗಿ ಮಲೆನಾಡ ಸಾಂಪ್ರದಾಯಿಕ ಬೆಳೆ ಅಡಿಕೆಗೆ ಕುತ್ತು ಬಂದಿದೆ. ಭವಿಷ್ಯದಲ್ಲಿ ಆಪತ್ತು ಎದುರಿಸುವ ರೈತನಿಗೆ ಪರ್ಯಾಯ ಬೆಳೆ ಅನಿವಾರ್ಯವಾಗಿದೆ.
ಇಂತಹ ಸಂದರ್ಭದಲ್ಲಿ ಪರ್ಯಾಯ ಹಾದಿ ಕಂಡುಕೊಂಡ ಕೃಷಿಕರು ಬಹುಪಯೋಗಿ ಬಿದಿರು ಬೆಳೆಯತ್ತ ಮುಖ ಮಾಡಿದ್ದಾರೆ.
ತಾಲ್ಲೂಕು ಮುಂಡಿಗೆಸರದ ಪ್ರಸನ್ನ, ರಾಮಮೂರ್ತಿ, ರಾಜಗೋಪಾಲ್ ಈ ಕುರಿತು ಮುಂಡಿಗೆಸರದಲ್ಲಿ ನಡೆದ ಬಿದಿರು ಪ್ರಾತ್ಯಕ್ಷಿಕೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಹಲವಾರು ವಿಭಿನ್ನ ಬೆಳೆಗಳ ಪ್ರಯೋಗಕ್ಕೆ ಮುಂದಾಗಿರುವ ಅಡಿಕೆ ಬೆಳೆಗಾರರಿಗೆ ನಷ್ಟವೇ ಅಧಿಕ. ಈಚೆಗೆ ಭವಿಷ್ಯದಲ್ಲಿ ಆದಾಯ ತರುವ ಬೆಳೆಯ ಶೋಧ ಕಾರ್ಯದಲ್ಲಿ ಬಿದಿರು ಈ ಸ್ಥಾನ ತುಂಬಬಲ್ಲದು ಎಂಬ ಭರವಸೆಯಿಂದ ಬಿದಿರು ಬೆಳೆಗೆ ಮುಂದಾಗಿದ್ದೇವೆ. ಅತಿ ಹೆಚ್ಚು ರೈತರು ಬೆಳೆಬೆಳೆಯುವ ಮೂಲಕ ನಮ್ಮದೆ ಆದ ಸ್ವಾವಲಂಬಿ ಎಥನಾಲ್ ತಯಾರಿ, ಸ್ವಂತ ಮಾರುಕಟ್ಟೆ ಮೂಲಕ ಯಶಸ್ಸು ಸಾಧಿಸಬಹುದು ಎಂಬ ನಂಬಿಕೆ ಇದೆ. ಇಂತಹ ಮಹತ್ವಾಕಾಂಕ್ಷೆಯ ಯೋಜನೆಯನ್ನು ನಮ್ಮವರೆ ಆದ ಸಾರ ಸಂಸ್ಥೆಯವರು ಆಸಕ್ತಿ ತೋರಿರುವುದು ಬಿದಿರು ಬೆಳೆಗಾರರಿಗೆ ವರದಾನವಾಗಲಿದೆ ಎಂದು ಬಿದಿರು ಬೆಳೆಗಾರ ಪ್ರಸನ್ನ ಹುಣಸೆಕೊಪ್ಪ ಹೇಳಿದ್ದಾರೆ.
ಬಹುಪಯೋಗಿ ಬಿದಿರು ಭವಿಷ್ಯದಲ್ಲಿ ಬಹು ಬೇಡಿಕೆ ಬೆಳೆ, ಭಾರತ ಸರ್ಕಾರ ರಾಷ್ಟ್ರೀಯ ಬಿದಿರು ಯೋಜನೆ ಮೂಲಕ ಬೆಳೆಗಾರರನ್ನು ಪ್ರೇರೇಪಿಸುತ್ತಿದೆ.
ಡಾ.ರಾಮಕೃಷ್ಣ ಹೆಗಡೆ, ಅರಣ್ಯ ಅಧಿಕಾರಿ, ಪೊನ್ನಂ ಪೇಟೆಇಂಡಸ್ ಟ್ರೀ ಫೌಂಡೇಶನ್ ರಾಜ್ಯದ ಮೂರು ಜಿಲ್ಲೆಗಳಲ್ಲಿ 1200 ರೈತರ ಉತ್ಪಾದಕ ಸಂಘ ನಿರ್ಮಿಸಿ ಬಿದಿರು ಕೃಷಿ ಆರಂಭಿಸಿದೆ.
ಡಾ. ಶ್ರೀಕಾಂತ್ ಗುನಗಾ, ಸೀನಿಯರ್ ಸೈಂಟಿಸ್ಟ್
Also read: ನಾಳೆ ಆಯನೂರಿಗೆ ಪ್ರಧಾನಿ ಮೋದಿ: ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಹೀಗಿದೆ ಪರ್ಯಾಯ ಮಾರ್ಗ
ಇಂಡಸ್ಟ್ರಿ ಫೌಂಡೇಶನ್ ಸಹಯೋಗದ ಸಾರಾ ಸಂಸ್ಥೆ ಸಂಚಾಲಕ ಕುಮಾರ್ ಮಾತನಾಡಿ, ದೇಶದ ವಿವಿದೆಡೆ ಮಹಿಳೆಯರಿಗೆ, ಕೃಷಿಕರಿಗೆ ಬಿದಿರು ಉತ್ಪನ್ನಗಳ ತರಬೇತಿ ನೀಡಿ ಐಕಿಯಾ ಮೂಲಕ ಮಾರುಕಟ್ಟೆ ಕೂಡ ಒದಗಿಸಲಾಗಿದೆ. ಎಫ್ಎಸ್ಸಿ ಮಾನ್ಯತೆಯುಳ್ಳ ಬಿದಿರು ಹಸಿರು ಬಂಗಾರ. ಎರಡು ವರ್ಷ ಗಿಡ ಕಾಯ್ದುಕೊಂಡರೆ ಸದೃಢ ಆದಾಯ ನೀಡುವ ಸುಲಭ ಬೆಳೆಯಿದು. ಪ್ರತಿ ರೈತರಿಗೆ 60 ಗಿಡ, ಗೊಬ್ಬರವನ್ನು ಉಚಿತವಾಗಿ ನೀಡಲಾಗುತ್ತದೆ. ಈಗಾಗಲೇ ಸಾಗರ, ಹೊಸನಗರ ತಾಲೂಕಿನಲ್ಲಿ 280 ಜನ ರೈತರು ಬಿದರನ್ನು ಬೆಳೆಯುತ್ತಿದ್ದು ಈ ವರ್ಷ ಸೊರಬ ತಾಲೂಕಿನಲ್ಲಿ 200 ಜನ ರೈತರಿಗೆ ಬಿದರನ್ನು ಕೊಡಲು ನಿರ್ಧರಿಸಿದ್ದು ಸಾಗರ ,ಹೊಸನಗರ ತಾಲೂಕಿನಲ್ಲೂ ಕೂಡ ಮತ್ತೆ 200 ಜನ ರೈತರಿಗೆ ಬಿದಿರನ್ನು ಕೊಡಲಾಗುತ್ತದೆ ,ಅದು ಉಚಿತವಾಗಿ ರೈತರು ಈ ಅವಕಾಶವನ್ನು ಉಪಯೋಗಿಸಬಹುದು ಹಾಗೂ ಡಾ, ರಾಮಕೃಷ್ಣ ಹೆಗಡೆಯವರು ಹಾಗೂ ಡಾ, ಶ್ರೀಕಾಂತ ಗುಣಗ ರವರು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೊಡಲಿದ್ದಾರೆ , ಹಾಗೂ ಕಣಜ ರೈತ ಉತ್ಪಾದಕರ ಸಂಘ ವನ್ನು ಸ್ಥಾಪಿಸಲಾಗಿದೆ. ಮಾಹಿತಿಗಾಗಿ 7996473910 ಸಂಪರ್ಕಿಸಬಹುದು ಎಂದಿದ್ದಾರೆ.
ಪ್ರಾತ್ಯಕ್ಷಿಕೆ ಯಲ್ಲಿ ಪರಿಸರ ಕಾರ್ಯಕರ್ತ ಶ್ರೀ ಪಾದ ಬಿಚ್ಚುಗತ್ತಿ, ಸಾರಾ ಸಂಸ್ಥೆ ಧನುಷ್, ರಂಗಕರ್ಮಿ ಪ್ರಸನ್ನ ಹುಣಸೆಕೊಪ್ಪ, ಮುಂಡಿಗೆಸರ ರಾಮಮೂರ್ತಿ, ಹುಣಸೆಕೊಪ್ಪ ರಾಜಗೋಪಾಲ್ ಮೊದಲಾದವರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post