ಕಲ್ಪ ಮೀಡಿಯಾ ಹೌಸ್ | ಸಾಗರ |
ಬಾಲ್ಯದಲ್ಲಿ ವಿದ್ಯೆ ಕಲಿಸಿದ ಗುರುಗಳನ್ನು ಸನ್ಮಾನಿಸಿ ಆಶೀರ್ವಾದ ಪಡೆಯಲು ಪಟ್ಟಣದ ವಿನೋಬನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 1995-96ನೇ ಸಾಲಿನ 7ನೇ ತರಗತಿ ಪೂರೈಸಿ ನಿರ್ಗಮಿಸಿದ ವಿದ್ಯಾರ್ಥಿಗಳು ಗುರು-ಶಿಷ್ಯರ ಸಮಾಗಮ ಕಾರ್ಯಕ್ರಮ ಆಯೋಸಿದ್ದರು.
ಸೇವೆಯಿಂದ ನಿವೃತ್ತಿ ಹೊಂದಿರುವ ಶಿಕ್ಷಕರಾದ ಸರ್ವಮಂಗಳಮ್ಮ, ರಾಜಮ್ಮ, ಲೀಲಾವತಿ, ಚೆನ್ನಪ್ಪ, ಸುಮಿತ್ರಮ್ಮ, ನರ್ಮದಾ, ಜಾಹೀರಾ ಬೀ, ಕೃಷ್ಣಮೂರ್ತಿ, ಬೀರಣ್ಣ ಕವರಿ ಅವರನ್ನು ಸಮಾರಂಭದಲ್ಲಿ ಸನ್ಮಾನಿ ಗೌರವ ಸಲ್ಲಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕರು, ಈ ದಿನ ನಮಗೆ ಸಿಕ್ಕ ಒಂದು ಸುವರ್ಣಾವಕಾಶ. ನೀವುಗಳು ನಮಗೆ ತೋರಿಸುತ್ತಿರುವ ಈ ಪ್ರೀತಿಯ ಗೌರವ ನಮ್ಮನ್ನ ಕಟ್ಟಿ ಹಾಕಿದೆ. ನಮ್ಮ ಹಳೇ ನೆನಪುಗಳು ಮತ್ತೆ ಕಣ್ಣಮುಂದೆ ಬಂದಹಾಗಿದೆ. ಈ ರೀತಿಯ ಕಾರ್ಯಕ್ರಮಗಳು ಎಲ್ಲರಿಗೂ ಸ್ಪೂರ್ತಿ ದಾಯಕವಾಗಿರಲಿ ಎಂದು ಆಶೀರ್ವಾದಿಸಿದರು.
Also read: ಮತಾಂತರ ನಿಷೇಧ ಕಾಯ್ದೆ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ
ಈ ಸಂದರ್ಭದಲ್ಲಿ ಬೆಂಗಳೂರಿನ ಕುಮಾರನ್ಸ್ ಕಾಲೇಜಿನ ಉಪನ್ಯಾಸಕಿ ತೇಜಸ್ವಿನಿ, ಸರಿತಾ ತಪಸ್ವಿ, ಸದಾಶಿವ, ಲಕ್ಷ್ಮೀನಾರಾಯಣ, ಶಿಲ್ಪಾ ಕಾಶಿ, ಹರ್ಷ, ಗಣೇಶ, ರಂಗನಾಥ, ಕೌಶಿಕ್, ರಾಜೇಶ್, ಸಾದಿಕ್ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post