No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
  • Advertise With Us
  • Grievances
  • About Us
  • Contact Us
Wednesday, July 1, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಮಲೆನಾಡಿನ ಮಾಣಿಕ್ಯ, ತೀರ್ಥಹಳ್ಳಿಯ ಸತೀಶಣ್ಣ ಇನ್ನು ನೆನಪು ಮಾತ್ರ…

kalpa News by kalpa News
May 17, 2020
in Small Bytes, Special Articles
0
ಮಲೆನಾಡಿನ ಮಾಣಿಕ್ಯ, ತೀರ್ಥಹಳ್ಳಿಯ ಸತೀಶಣ್ಣ ಇನ್ನು ನೆನಪು ಮಾತ್ರ…
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಅದು ಜನರಿಗಾಗಿ ಮಿಡಿದ ಮನ, ಸಮಾಜ ಸೇವೆಗಾಗಿಯೇ ಬದುಕನ್ನು ಮೀಸಲಿಟ್ಟಿದ್ದ ಜನಪರ ಜೀವ… ಬಹುಷಃ ಅವರ ಹೆಸರನ್ನು ಕೇಳದ ತೀರ್ಥಹಳ್ಳಿ ಭಾಗದ ಮಂದಿ ಬಹುತೇಕ ಇಲ್ಲ ಎಂದೇ ಭಾವಿಸುತ್ತೇನೆ.. ಅವರೇ ಮಲೆನಾಡಿನ ಮಾಣಿಕ್ಯ ನಮ್ಮ ಸತೀಶಣ್ಣ ಅಂದರೆ ಪಿ.ಸಿ. ಸತೀಶ್ ಶೆಟ್ಟಿ.

30 ವರ್ಷಗಳಿಂದ ಸದಾ ಸಾಮಾಜಿಕ, ಸಂಘಟನೆ, ಧಾರ್ಮಿಕ ಚಟುವಟಿಕೆಯಲ್ಲಿ ನಿರತರಾಗಿದ್ದ ಸತೀಶಣ್ಣ, ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷರಾಗಿ, ರಾಮೇಶ್ವರ ದೇವಸ್ಥಾನ ಸಮಿತಿ ಸದಸ್ಯರಾಗಿ, ಜಯ ಕರ್ನಾಟಕ ಅಧ್ಯಕ್ಷರಾಗಿ, ಬಾಳೆಬೈಲು ಸಿದ್ದೇಶ್ವರ ಗುಡ್ಡ ದೀಪೋತ್ಸವ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ನೂರಾರು ಸಂಘಟನೆ, ಸಾವಿರಾರು ಕಾರ್ಯಕ್ರಮಕ್ಕೆ ಸ್ಫೂರ್ತಿ ಆಗಿದ್ದ ಶೆಟ್ಟರು ತೀರ್ಥಹಳ್ಳಿಯ ಆಸ್ತಿ ಆಗಿದ್ದರು.

ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ಸದಸ್ಯರಾಗಿ ಪಟ್ಟಣದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡಿದ್ದ ಇವರು, ಎಲ್ಲರ ಸ್ನೇಹ ಸಂಪಾದಿಸುವ ಮೂಲಕ ಸತೀಶಣ್ಣ ಎಂದೇ ಹೆಸರು ಮಾಡಿದ್ದ ಸ್ನೇಹ ಜೀವಿ!!

ಪ್ರಾಯಶಃ 2002-2003ರ ಸಾಲಿನಲ್ಲಿ ಸಿದ್ದೇಶ್ವರ ಗುಡ್ಡ ದೀಪೋತ್ಸವದ ದಶಮಾನೋತ್ಸವ ಸಂಭ್ರಮದ ವೇಳೆ, ಸಮಿತಿ ಅಧ್ಯಕ್ಷರಾಗಿ ಸತೀಶಣ್ಣ ಸೇವೆ ಸಲ್ಲಿಸುತ್ತಿದ್ದ ಸಮಯ. ಆಗ ಶಿವಮೊಗ್ಗ ಜಿಲ್ಲೆಯ ಪತ್ರಿಕೆಯೊಂದರ ತೀರ್ಥಹಳ್ಳಿ ತಾಲೂಕು ವರದಿಗಾರನಾಗಿ ನಾನು ಸೇವೆ ಸಲ್ಲಿಸುತ್ತಿದ್ದ ದಿನಗಳು.

ಆಗ ಸಿದ್ದೇಶ್ವರ ಗುಡ್ಡ ದೀಪೋತ್ಸವದಲ್ಲಿ ನನ್ನನ್ನು ಪ್ರೋತ್ಸಾಹ ಮಾಡಿದ್ದರು. ಬೆಟ್ಟದಲ್ಲಿ ನೆಲೆಸಿರುವ ಸ್ವಾಮಿಯ ಬಗ್ಗೆ ಒಂದು ಪುಸ್ತಕವನ್ನು ಬರೆದು ಬಿಡುಗಡೆ ಮಾಡೋಣ ಸತೀಶ್ ಅಣ್ಣ ಎಂದಾಗ ನನ್ನ ಮನಸ್ಸಿಗೆ ನೋವು ಆಗದ ಹಾಗೆ ನನ್ನ ಬಳಿ ಮುಂದೆ ಮಾಡೋಣ ಈಗ ಸಣ್ಣದಾಗಿ ಕರ ಪತ್ರದ ರೀತಿಯಲ್ಲಿ ಮಾಡೋಣ ಎಂದು ಹೇಳಿದ್ದರು.

ದಶಮಾನೋತ್ಸವ ಸಂಭ್ರಮದ ದಿನದಂದು ನಾಡಿನ ಗಣ್ಯರನ್ನು ಕಾರ್ಯಕ್ರಮಕ್ಕೆ ಕರೆದು ಅವರಿಂದ ಬಿಡುಗಡೆ ಮಾಡಿಸಿ ವೇದಿಕೆಯಲ್ಲಿ ನನ್ನನ್ನು ನಿಲ್ಲಿಸಿಕೊಂಡು ಸಣ್ಣ ಸಂಚಿಕೆ ರೀತಿಯಲ್ಲಿ ಬೆಟ್ಟದ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಕಿರು ಪರಿಚಯದ ಹೊತ್ತಿಗೆ ಬಿಡುಗಡೆ ಮಾಡಿಸಿದ್ದರು.
ಸ್ನೇಹ ಜೀವಿ ಸತೀಶಣ್ಣ ಅವರ ಬಗ್ಗೆ ಮೇಲಿನ ಒಂದು ಘಟನೆ ಉದಾಹರಣೆಗೆ ಅಷ್ಟೇ.

ಅವರು ನಾವುಗಳು ಸಿದ್ದೇಶ್ವರ ಬೆಟ್ಟದ ಮೇಲೆ ದೀಪ ಆಚರಿಸಿ ಬೆಟ್ಟದ ಕೆಳಗೆ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಸಿದರೆ ಆ ಕಾರ್ಯಕ್ರಮದ ಕೊನೆ ಹಾಡು ಯಾವಾಗಲು ಅವರ ಅಚ್ಚು ಮೆಚ್ಚಿನ ಹಾಡು. ನಗುವಾಗ ಎಲ್ಲ ನೆಂಟರು, ಅಳುವಾಗ ಯಾರು ಇಲ್ಲ… ಎಂಬ ಹಾಡನ್ನು ಸಂಗೀತ ಕಾರ್ಯಕ್ರಮ ನಡೆಸುವವರು ಹೇಳುವಂತೆ ವಿನಮ್ರವಾಗಿ ಕೇಳುತ್ತಾ ಆ ಹಾಡಿಗೆ ಇವರೂ ಧ್ವನಿಯಾಗಿ ನಮ್ಮ ಜೊತೆ ನಿಂತು ಆನಂದಿಸುತ್ತಾ ಅವರ ಮನದ ಮೂಲೆಯಲ್ಲಿ ಅಡಗಿದ್ದ ದುಃಖವನ್ನು, ಸಂತಸವನ್ನು ಹೊರಹಾಕುತ್ತಾ ಬೆಟ್ಟದ ಬುಡದಲ್ಲಿ ಕುಲದಲ್ಲಿ ಕೀಳ್ಯಾವುದೂ ಎಂಬ ಹಾಡಿಗೆ ನಾವೆಲ್ಲರೂ ಹೆಜ್ಜೆ ಹಾಕಿದ ದಿನಗಳು ಇಂದು ನಮಗೆ ನೆನಪು ಮಾತ್ರ. ಜನರ ನಡುವೆ ಅವರು ಬೆರತು ಗಳಿಸಿದ ಪ್ರೀತಿಗೆ ಇದು ಸಾಕ್ಷಿ.

ಸತೀಶಣ್ಣ ಇಂದು ದೈಹಿಕವಾಗಿ ನಮ್ಮ ಜೊತೆ ಇಲ್ಲ. ಆದರೆ ಅವರ ಒಡಾನಾಟದಲ್ಲಿ ಕಳೆದ ದಿನಗಳ ನೆನಪು ಇಂದು ಮನದಲ್ಲಿ ಹಾಸುಹೊಕ್ಕಾಗಿದೆ. ಅಣ್ಣನ ಬಗ್ಗೆ ಬರೆಯುತ್ತಾ ಹೋದರೆ ಅದು ಮುಗಿಯುವ ಪ್ರಶ್ನೆಯೇ ಇಲ್ಲ. ಅವರು ನಿಜಕ್ಕೂ ಮಲೆನಾಡಿನ ಹೆಮ್ಮೆಯ ಸುಪುತ್ರ. ಮಲೆನಾಡಿನ ಮಾಣಿಕ್ಯ.

ಮುಂದಿನ ದಿನಗಳಲ್ಲಿ ನಮ್ಮ ಅನಂತಿಯವರು ದೊಡ್ಡ ಲೇಖಕರಾಗುತ್ತಾರೆ ಎಂದು ಹೇಳಿದ ಸತೀಶಣ್ಣ ಇಂದು ಇಹಲೋಕ ತ್ಯಜಿಸಿ ಹೊರಟು ಹೋಗಿದ್ದಾರೆ.
ನೂರಾರು ಜನರಿಗೆ ಸಹಾಯ ಹಸ್ತ ಚಾಚಿದ ಹಲವು ಉದಾಹರಣಯಿದೆ. ಆದರೆ ಅವೆಲ್ಲವನ್ನೂ ಬರೆಯುವ ಮನಸ್ಸಾಗುತ್ತಿಲ್ಲ, ಮನದಲ್ಲಿ ಹೆಪ್ಪುಗಟ್ಟಿದೆ ದುಃಖ!

ಸತೀಶಣ್ಣನ ಅಗಲಿಕೆಗೆ ಮನಸ್ಸು ಭಾರವಾಗಿ ಕಣ್ಣುಗಳಲ್ಲಿ ನೀರು ಬರುತ್ತಿಲ್ಲ, ಅತೀವ ದುಃಖ, ಭಾವನೆಗಳನ್ನು ವ್ಯಕ್ತಪಡಿಸಲು ಆಗುತ್ತಿಲ್ಲ. ಆಗಲೇ ನಾನು ಊರು ಬಿಟ್ಟು ಸುಮಾರು 14 ವರುಷಗಳು ಕಳೆದು ಹೋಗಿವೆ. ಊರಿಗೆ ಹೋದಾಗ ಮುಂದಿನ ಸರಿ ಸತೀಶಣ್ಣ ಭೇಟಿ ಮಾಡೋಣ ಎಂದುಕೊಂಡು ಹಲವು ಬಾರಿ ಬಂದಿದ್ದೇನೆ. ಆದರೆ ಇನ್ನು ಅವರು ಬರಿ ನೆನಪು ಮಾತ್ರ. ಬಾರದ ಲೋಕಕ್ಕೆ ಹೋಗಿದ್ದಾರೆ ದೈಹಿಕವಾಗಿ.

ಭಗವಂತ ಶ್ರೀ ಸಿದ್ದೇಶ್ವರ ಸ್ವಾಮಿ ಮತ್ತು ಬಾಳೆಬೈಲಿನ ಶ್ರೀ ವೆಂಕಟರಮಣ ಸ್ವಾಮಿ ಸತೀಶಣ್ಣನ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.


Get in Touch With Us info@kalpa.news Whatsapp: 9481252093

Tags: B S Satish ShettyKannadaNewsWebsiteMalnadArticleShivamoggaSpecialArticleThirthalliತೀರ್ಥಹಳ್ಳಿಪಿ.ಸಿ. ಸತೀಶ್ ಶೆಟ್ಟಿಶಿವಮೊಗ್ಗ
Share227Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಬೆಚ್ಚಿ ಬಿದ್ದ ಶಿವಮೊಗ್ಗ: ಜಿಲ್ಲೆಯಲ್ಲಿ ಮತ್ತೆರಡು ಕೊರೋನಾ ಪಾಸಿಟಿವ್

Next Post

ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಕೊರೋನಾ ಸೋಂಕು: ನಿಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿ

kalpa News

kalpa News

Next Post

ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಕೊರೋನಾ ಸೋಂಕು: ನಿಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿ

Leave a Reply Cancel reply

Your email address will not be published. Required fields are marked *

No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL