ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಅಹಿತಕರ ಘಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಜಾರಿಗೊಳಿಸಲಾಗಿರುವ ಸೆಕ್ಷನ್ 144 ನಿಷೇಧಾಜ್ಞೆಯನ್ನು ಡಿ.7ರವರೆಗೂ ವಿಸ್ತರಣೆ ಮಾಡಲಾಗಿದೆ.
ಈ ಕುರಿತಂತೆ ಆದೇಶ ಹೊರಡಿಸಿರುವ ತಹಶೀಲ್ದಾರ್ ನಾಗರಾಜ್ ಅವರು, ಅಹಿತಕರ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಡಿ. 7 ರ ಸೋಮವಾರ ಬೆಳಿಗ್ಗೆ 10 ಗಂಟೆವರೆಗೆ 144 ಸೆಕ್ಷನ್ ಅವಧಿ ವಿಸ್ತರಣೆ ಮಾಡಲಾಗಿದೆ ಎಂದಿದ್ದಾರೆ.
ಜಯನಗರ-ವಿನೋಬನಗರದಲ್ಲಿ ರೂಟ್ ಮಾರ್ಚ್
ಇನ್ನು, ಸೆಕ್ಷನ್ ವಿಸ್ತರಣೆಯಾದ ಬೆನ್ನಲ್ಲೇ ನಗರದ ಎರಡು ಠಾಣಾ ವ್ಯಾಪ್ತಿಯಲ್ಲಿ ಇಂದು ಪೊಲೀಸ್ ರೂಟ್ ಮಾರ್ಚ್ ನಡೆಸಲಾಯಿತು.
ವಿನೋಬ ನಗರ ಹಾಗೂ ಜಯನಗರ ಠಾಣೆ ವ್ಯಾಪ್ತಿಯಲ್ಲಿ ಇಂದು ರೂಟ್ ಮಾರ್ಚ್ ನಡೆಸಲಾಗಿದ್ದು, ಈ ಮೂಲಕ ಶಾಂತಿ ಕಾಪಾಡುವಂತೆ ಸಂದೇಶ ರವಾನಿಸಲಾಯಿತು.
ಚಿತ್ರದುರ್ಗದ ಹೆಚ್ವುವರಿ ಜಿಲ್ಲಾ ರಕ್ಷಣಾಧಿಕಾರಿ ನಂದಗಾವಿ ಹರಪ್ಪನಹಳ್ಳಿ ಸಿಪಿಐ ಕೆ. ಕುಮಾರ್, ಪಿಎಸ್’ಐ ಉಮೇಶ್ ನೇತೃತ್ವದಲ್ಲಿ ವಿನೋಬನಗರ ಠಾಣಾ ವ್ಯಾಪ್ತಿಯ ಪೊಲೀಸ್ ಚೌಕಿಯಿಂದ ಎಪಿಎಂಸಿ, ವಿನೋಬನಗರದ 60 ಅಡಿ ರಸ್ತೆ, ಹಾಗೂ ಶಿವಾಲಯದವರೆಗೆ ರೂಟ್ ಮಾರ್ಚ್ ನಡೆಯಿತು.
ಇದೇ ವೇಳೆ ಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಉಷಾ ನರ್ಸಿಂಗ್ ಹೋಂ, ವಿನಾಯಕ ನಗರ, ಬಸವನಗುಡಿ, ಜಯನಗರ ಬಡಾವಣೆಯಲ್ಲಿ ರೂಟ್ ಮಾರ್ಚ್ ನಡೆಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post