ಶ್ರೀನಗರ: ಪ್ರತ್ಯೇಕತಾವಾದದ ಹೆಸರಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹಾಗೂ ದೇಶದ ವಿರುದ್ಧ ಹೋರಾಡುತ್ತಿದ್ದ ಜೆಕೆಎಲ್’ಎಫ್ ಮುಖ್ಯಸ್ಥ ಯಾಸಿನ್ ಮಲ್ಲಿಕ್’ನನ್ನು, ನಾಯಿ ನರಿಯಂತೆ ಬಂಧಿಸಿದ ಭದ್ರತಾ ಪಡೆಗಳು ಜಮ್ಮು ಜೈಲಿಗೆ ಅವನನ್ನು ಸ್ಥಳಾಂತರಿಸಿದೆ.
ಸಾರ್ವಜನಿಕ ರಕ್ಷಣಾ ಕಾಯ್ದೆಯಡಿಯಲ್ಲಿ ಈತನನ್ನು ಫೆಬ್ರವರಿ 22ರಂದೇ ಬಂಧಿಸಲಾಗಿದ್ದು, ಕೊಥಿಬಾಗ್ ಪೊಲೀಸ್ ಠಾಣೆಯ ಜೈಲಿನಲ್ಲಿ ಇಡಲಾಗಿತ್ತು. ಈಗ ಆತನನ್ನು ಜಮ್ಮು ಜೈಲಿಗೆ ಸ್ಥಳಾಂತರಿಸಲಾಗಿದೆ.
ಮಲಿಕ್ ವಿರುದ್ಧ ಪಿಎಸ್’ಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಇದರ ಅನ್ವಯ ನ್ಯಾಯಾಂಗ ಹಸ್ತಕ್ಷೇಪರಹಿತವಾಗಿ ಎರಡು ವರ್ಷಗಳವರೆಗೆ ಬಂಧನದಲ್ಲಿಡಲು ಅವಕಾಶವಿದೆ.
1990ರಲ್ಲಿ ಶ್ರೀನಗರದಲ್ಲಿ ಭಾರತೀಯ ವಾಯುಪಡೆಯ ಐವರು ಯೋಧರನ್ನು ಕಿಡ್ನಾಪ್ ಮಾಡಿ ಕೊಲೆಗೈದಿರುವ ಹಾಗೂ ಜಮ್ಮು ಕಾಶ್ಮೀರದ ಮಾಜಿ ಸಿಎಂ ರುಬಿಯಾ ಸೈಯಾದ್ ಮಗಳನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಯಾಸೀನ್ ಮಲ್ಲಿಕ್ ಪ್ರಮುಖ ಆರೋಪಿಯಾಗಿದ್ದಾನೆ.
ನ್ಯಾ. ನೀಲಕಂಠ ಗಂಜು ಅವರ ಕೊಲೆ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ. ಈ ಪ್ರಕರಣವನ್ನು ರೀ ಓಪನ್ ಮಾಡಲು ಸಿಬಿಐ ಜಮ್ಮು ಕಾಶ್ಮೀರ ಹೈಕೋರ್ಟ್’ನಲ್ಲಿ ಮನವಿ ಮಾಡಿದೆ. ಅಷ್ಟೇ ಅಲ್ಲದೇ ಈ ಪ್ರಕರಣವನ್ನು ಜಮ್ಮುವಿನಿಂದ ಶ್ರೀನಗರಕ್ಕೆ ವರ್ಗಾಯಿಸಲು ಅನುಮತಿ ನೀಡುವಂತೆ ಕೇಳಿಕೊಂಡಿದೆ.
ಹಿಂದೆ ಕಾಂಗ್ರೆಸ್ ಬೆಂಬಲಿತ ಸರ್ಕಾರಗಳಿದ್ದ ಸಂದರ್ಭದಲ್ಲಿ ಮೇಲಿನ ಎಲ್ಲ ಪ್ರಕರಣಗಳನ್ನು ಮುಚ್ಚಿ ಹಾಕಲಾಗಿತ್ತು. ಆದರೆ, ಈಗ ಅವೆಲ್ಲವನ್ನೂ ರೀ ಓಪನ್ ಮಾಡಿ, ಮರು ತನಿಖೆ ಆರಂಭಿಸಲಾಗಿದೆ.
Discussion about this post