ಕಲ್ಪ ಮೀಡಿಯಾ ಹೌಸ್ | ಮೈಸೂರು |
ನೈಋತ್ಯ ರೈಲ್ವೆಯ #SWR ಮೈಸೂರು ರೈಲ್ವೆ ನಿಲ್ದಾಣಕ್ಕೆ ಪ್ರಯಾಣಿಕರ ಅನುಕೂಲಕ್ಕಾಗಿ ಮೈಸೂರು ವಾಣಿಜ್ಯ ಮಂಡಳಿ ಮತ್ತು ಜೈನ್ ಮಿಲನ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ವಿಕಲಾಂಗ ಕುರ್ಚಿಗಳು ಮತ್ತು ಕುಡಿಯುವ ನೀರಿನ ಮಡಕೆಗಳನ್ನು ಕೊಡುಗೆಯನ್ನಾಗಿ ನೀಡಲಾಯಿತು.
ಸಾರ್ವಜನಿಕ ಸೇವೆ ಮತ್ತು ಪ್ರಯಾಣಿಕರ ಕಲ್ಯಾಣದತ್ತ ಶ್ಲಾಘನೀಯ ಹೆಜ್ಜೆಯಾಗಿ, ಮೈಸೂರು ವಾಣಿಜ್ಯ ಮಂಡಳಿ ಹಾಗೂ #Mysore ಮೈಸೂರಿನ ಜೈನ್ ಮಿಲನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 10 ವಿಕಲಾಂಗ ಕುರ್ಚಿಗಳು ಮತ್ತು 25 ಕುಡಿಯುವ ನೀರಿನ ಮಡಕೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
Also Read>> ಯೋಗೀಶ್ ಹತ್ಯೆ ಪ್ರಕರಣ | ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ
ನೀಡಲಾದ ವಿಕಲಾಂಗ ಕುರ್ಚಿಗಳು ವೃದ್ಧರು ಹಾಗೂ ದಿವ್ಯಾಂಗರಿಗೆ ಹೆಚ್ಚಿನ ಸಹಾಯವಾಗಲಿದ್ದು, ಸುಲಭ ಸಂಚಾರ ಮತ್ತು ಪ್ರವೇಶ ಸೌಲಭ್ಯವನ್ನು ಒದಗಿಸಲಿವೆ. ಕುಡಿಯುವ ನೀರಿನ ಮಡಕೆಗಳು ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಲು ಮತ್ತು ಪ್ರಯಾಣಿಕರಿಗೆ #DrinkingWater ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಿದಂತಾಗುತ್ತದೆ.
ಇದರಿಂದಾಗಿ ಎರಡೂ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ ಮತ್ತು ಸಮುದಾಯ ಸೇವೆಯ ಪ್ರತಿಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಕೊಡುಗೆ ಪ್ರಯಾಣಿಕರ ಸೌಕರ್ಯ ಮತ್ತು ಒಟ್ಟಾರೆ ಸೇವಾ ಮಟ್ಟವನ್ನು ಉತ್ತಮಗೊಳಿಸುವ ನಿರೀಕ್ಷೆಯಿದೆ.
ಈ ಕಾರ್ಯಕ್ರಮದಲ್ಲಿ ಮೈಸೂರು ವಿಭಾಗದ ಡಿಆರ್’ಎಂ ಮುದಿತ್ ಮಿತ್ತಲ್, ಎಡಿಆರ್’ಎಂ ಶಮ್ಮಾಸ್ ಹಮೀದ್, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಲೋಹಿತೇಶ್ವರ ಜೆ, ZRUCC ಮತ್ತು DRUCC ಸದಸ್ಯರು ಹಾಗೂ ಶಾಖಾಧಿಕಾರಿಗಳು ಭಾಗವಹಿಸಿದ್ದರು.
ಅಧಿಕಾರಿಗಳು ಮೈಸೂರು ವಾಣಿಜ್ಯ ಮಂಡಳಿ ಮತ್ತು ಜೈನ್ ಮಿಲನ್ ಚಾರಿಟೇಬಲ್ ಟ್ರಸ್ಟ್ ಅವರಿಗೆ ಅವರ ಉದಾರ ಸಹಕಾರ ಮತ್ತು ಅರ್ಥಪೂರ್ಣ ಕೊಡುಗೆಗಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















