ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಾರಿ ಶಕ್ತಿ ವಂದನಾ ಮಸೂದೆ Nari Shakti Vandana Bill ಇಂದು ಲೋಕಸಭೆಯಲ್ಲಿ ಅಂಗೀಕಾರಗೊಳ್ಳಲಿದೆ. ಇದು ಮೂಲತಃ ಒಬ್ಬ ಮಹಿಳೆಯಾಗಿ ಸಾಧಕ ಮಹಿಳೆಯರೊಡನೆ ಒಡನಾಡಿದ ಒಬ್ಬ ಮಹಿಳೆಯಾಗಿ ಸಾಧನೆಯ ಹಾದಿಯಲ್ಲಿ ನಡೆಯುವ ಕನಸು ಕಾಣುತ್ತಿರುವ ಹಲವಾರು ಮಹಿಳೆಯರೊಡನೆ ಒಡನಾಡಿದ ಹೆಣ್ಣು ಮಗಳಾಗಿ ಬಹಳ ಹರ್ಷಚಿತ್ತದಿಂದ ಈ ಮಸೂದೆಯನ್ನು ಸ್ವಾಗತಿಸುತ್ತೇನೆ ಎಂದು ಮಹಿಳಾ ಉದ್ಯಮಿ ಡಾ.ಬಿ.ವಿ.ಲಕ್ಷ್ಮೀದೇವಿ ಗೋಪಿನಾಥ್ ಹೇಳಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಿಳೆ ಪ್ರತಿ ರಂಗದಲ್ಲೂ ತಾನು ಪುರುಷರಿಗೆ ಸಮಾನವಾಗಿ ಎಲ್ಲಾ ರಂಗಗಳಲ್ಲೂ ಯಶಸ್ವಿಯಾಗಿದ್ದೇನೆ ಎಂದು ನಿರಂತರವಾಗಿ ನಿರೂಪಿಸಿಕೊಂಡು ಬಂದಿದ್ದಾಳೆ. ಆದರೂ ಸಂವಿಧಾನ ರಚನೆಯಾಗಿ 70 ವರ್ಷಗಳಾದರೂ ಆಕೆಯ ಹಕ್ಕು ಆಕೆಗೆ ದೊರೆತಿರಲಿಲ್ಲ. ಈಗ ಮೋದಿ ನೇತೃತ್ವದಲ್ಲಿ ಈ ಮಸೂದೆಯಿಂದ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಸಿಗಲಿದೆ. ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ 33% reservation for women in Lok Sabha and Legislative Assemblies ನೀಡುವ ಈ ಮಸೂದೆ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಬಾಲ್ಯ ವಿವಾಹ, ಸತಿ ಸಹಗಮನ, ಶಾಲಾ-ಕಾಲೇಜುಗಳಲ್ಲಿ ಪ್ರವೇಶ ನಿಷಿದ್ಧ ಹೀಗೆ ಹಲವಾರು ಅದೇ ತಡೆಗಳನ್ನು ಎದುರಿಸಿ ಮಹಿಳೆ ಇಂದು ನಿರಂತರವಾಗಿ ತನ್ನನ್ನುತನು ನಿರೂಪಿಸುತ್ತಾ ಸಾಗಿದ್ದಾಳೆ.
ಎಸ್.ಎಸ್.ಎಲ್.ಸಿ, ಪಿ.ಯು.ಸಿ., ಪಲಿತಾಂಶದಲ್ಲಿ ಬಾಲಕಿಯರದ್ದೇ ಮೇಲುಗೈ, ವೈದ್ಯಕೀಯ, ಬಾಹ್ಯಾಕಾಶ, ತಂತ್ರಜ್ಞಾನ, ಹೀಗೆ ಕೃಷಿಯಿಂದ ಕಕ್ಷೆಯವರೆಗೂ ಮಹಿಳೆ ತನ್ನ ಛಾಪನ್ನು ಮೂಡಿಸಿದ್ದಾಳೆ. ಬಹಳಷ್ಟು ಎಂ.ಎಸ್.ಎಂ. ಈಗಳ ನೇತೃತ್ವ ಮಹಿಳೆ ವಹಿಸಿದ್ದಾಳೆ, ಹಲವಾರು ಬಹುರಾಷ್ಟ್ರೀಯ ಸಂಸ್ಥಗಳಲ್ಲಿ ನಿರ್ಣಾಯಕ ಸ್ಥಾನಗಳಲ್ಲಿ ನಿಂತು ತನ್ನ ಸಾಮಥ್ರ್ಯ ತೋರಿದ್ದಾಳೆ. ಸ್ವ-ಸಹಾಯ ಸಂಘಗಳ ಮೂಲಕ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿ ದೇಶದ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡಿದ್ದಾಳೆ. ಸೇನೆಯಲ್ಲಿಯೂ ಸಹ ಟನ್ ಅದ್ಭುತ ಚಾಪನ್ನು ಮೆರೆದಿದ್ದಾಳೆ. ಇವೆಲ್ಲವನ್ನೂ ಯಾವುದೇ ಮೀಸಲಾತಿ ಇಲ್ಲದೆ ಮಹಿಳೆ ಸಾಧಿಸಿದ್ದಾಳೆ.
ಒಂದು ಮನೆಯಲ್ಲೇ ಸಮಾನ ಆದಾಯ ಇಂದಿನ ಜೀವನಶೈಲಿಯ ಅನಿವಾರ್ಯತೆ. ಪುರುಷನೊಬ್ಬನೇ ಮನೆಯ ನಿರ್ಧಾರಗಳನ್ನು ಕೈಗೊಳ್ಳುವುದಾದರೆ ಮನೆಯ ಅಭಿವೃದ್ಧಿ ಕುಂಠಿತವಾಗುತ್ತದೆ. ಎಂಬಿಎ ಮನೆಯಲ್ಲೂ ಮಹಿಳೆ ಹಾಗೂ ಪುರುಷರಿಬ್ಬರೂ ನಿರ್ಣಯಗಳನ್ನು ಕೈಗೊಂಡಾಗ ಹೆಚ್ಚಿನ ಅಭಿವೃದ್ಧಿ ಯಾಗುತ್ತದೆ. ಪ್ರಧಾನ ಮಾತೃ ಆವಾಸ್ ಯಜನೆಯಲ್ಲಿ 72% ಮನೆಗಳು ಮಹಿಳೆಯರ ಒಡೆತನದಲ್ಲಿದೆ. ಸ್ಟೆಮ್ನಲ್ಲೂ 43% ಮಹಿಳೆಯರಿದ್ದಾರೆ. ಮುದ್ರಾ ಲೋನ್ ನಕಲಿ 69% ಮಹಿಳಾ ಫಲಾನುಭವಿಗಳಿದ್ದಾರೆ. ಸ್ವಚ್ಛ ಭಾರತ ಡಾ. ಮೂಲಕ ಬಯಲು ಶೌ ಚಾಲಯಗಳಿಂದ ಮುಕ್ತಳಾಗಿ ಅತ್ಯಂತ ಮೂಲಭೂತ ಸೌಕರ್ಯ ತನ್ನದಾಗಿಸಿಕೊಂಡಿದ್ದಾಳೆ. ಜಾಕ್ ಜೀವನ್ ಮಿಷನ್ ಮಹಿಳಾ ಸಮ್ಮಾನ್ 26 ವಾರಗಳ ಹೆರಿಗೆ ರಜ, ಲಖಪತಿ ದೀದಿ ನಮೋ ಡ್ರೋನ್ ದೀದಿ ಹೀಗೆ ಹಲವಾರು ಯೋಜನೆಗಳ ಫಲಾನುಭವಿಯಾಗಿದ್ದಾಳೆ.
ಮತ ಚಲಾಯಿಸುವಲ್ಲೂ ಮಹಿಳೆಯರು ಪುರುಷರಿಗಿಂತ ಹೆಚ್ಚು ಸಕ್ರಿಯ. ಪಂಚಾಯತ್ಗಳ ನೇತೃತ್ವವಹಿಸಿ ಹಳ್ಳಿಗಳಲ್ಲಿ ಸಣ್ಣ ಸಣ್ಣ ಮಹತ್ವದ ಬದಲಾವಣೆಗಳನ್ನು ತಂದಿದ್ದಾಳೆ. ರಾಜಕೀಯದಲ್ಲಿ ಭಾಗವಹಿಸು ವಿಕೆ ಹೆಚ್ಚಾಗಿದ್ದರೂ ಪ್ರಾತಿನಿಧ್ಯ ಕಡಿಮೆ ಇದೆ. ಮತದಾನದಂತೆ ಪ್ರಾತಿನಿಧಿತ್ವವೂ ನಮ್ಮ ಹಕ್ಕು ಹಾಗೂ ದೇಶದೆಡೆಗಿನ ನಮ್ಮ ಜವಾಬ್ದಾರಿ. ಫಲಾನುಭವಿಯಾಗುವುದರಿಂದ ಈಗ ಮಹಿಳೆ ಫಲಾನುಭವಿಗಳಿಗಾಗಿ ಯೋಜನೆಗಳನ್ನು ನೀತಿಯನ್ನು ರೂಪಿಸುವ ಸ್ಥಾನಕ್ಕೆ ಈಗ ಮಹಿಳೆ ಹೋಗಬೇಕಿದೆ. ದೇಶದ ಆಡಳಿತದ ಚುಕ್ಕಾಣಿ ಹಿಡಿದು ನೀತಿಗಳನ್ನು ರೂಪಿಸುವುದರಲ್ಲಿ ಭಾಗಿಯಾಗುವ ನನ್ನಂತ ಹಲವಾರು ಮಹಿಳೆಯರ ಕನಸು ಈಗ ನನಸಾಗಲಿದೆ. ಒಬ್ಬ ಮಹಿಳೆಯಾಗಿ ಸ್ವೇದ ಮಹಿಳಾ ಉದ್ಯಮಿಗಳ ಸಂಘದ ಅಧ್ಯಕ್ಷೆಯಾಗಿ ನಾನು ಈ ಮಸೂದೆಯ ಅಂಗೀಕಾರಕ್ಕಾಗಿ ಕಾಯುತ್ತಿದ್ದೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಮತಾ ಚಂದ್ರಶೇಖರ್, ಶಶಿ ಎಂ. ಶಂಕರ್, ಡಾ.ಜೀವಂತಿ, ಮೇಘ, ಮಮತಾ ರೆಡ್ಡಿ ಇಂದು ಬಿ. ಹೆಗಡೆ, ವಿಜಯಲಕ್ಷ್ಮಿ ಕಡಂಬ, ಸಹನಾ ಚೇತನ್, ವಾಣಿ, ಉಷಾ ವಸಂತಕುಮಾರ್, ಅಶ್ವಿನಿ, ಕವಿತಾ, ಮಂಜುಳಾ ಎಂ., ಶಿಲ್ಪಾ ಗೋಪಿನಾಥ್ ಇದ್ದರು.
ಗಿ ಸ್ವೇದ ಮಹಿಳಾ ಉದ್ಯಮಿಗಳ ಸಂಘದ ಅಧ್ಯಕ್ಷೆಯಾಗಿ ನಾನು ಈ ಮಸೂದೆಯ ಅಂಗೀಕಾರಕ್ಕಾಗಿ ಕಾಯುತ್ತಿದ್ದೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಮತಾ ಚಂದ್ರಶೇಖರ್, ಶಶಿ ಎಂ. ಶಂಕರ್, ಡಾ.ಜೀವಂತಿ, ಮೇಘ, ಮಮತಾ ರೆಡ್ಡಿ ಇಂದು ಬಿ. ಹೆಗಡೆ, ವಿಜಯಲಕ್ಷ್ಮಿ ಕಡಂಬ, ಸಹನಾ ಚೇತನ್, ವಾಣಿ, ಉಷಾ ವಸಂತಕುಮಾರ್, ಅಶ್ವಿನಿ, ಕವಿತಾ, ಮಂಜುಳಾ ಎಂ., ಶಿಲ್ಪಾ ಗೋಪಿನಾಥ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















