No Result
View All Result
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ
English Articles

Shivamogga SIR | District Achieves 81% e-Form Distribution

by kalpa News
July 8, 2026
0

Kalpa Media House  | Shivamogga | As part of the Election Commission of India’s statewide Special Summary Revision of the...

Read moreDetails
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
  • Advertise With Us
  • Grievances
  • About Us
  • Contact Us
Wednesday, July 8, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ತಬ್ಲಿಘಿ ಗಿಫ್ಟ್‌’ಗೆ ಬೆಚ್ಚಿಬಿದ್ದ ಶಿವಮೊಗ್ಗ: 9 ಮಂದಿಗೋಸ್ಕರ 18 ಲಕ್ಷ ಜನರಿಗೆ ಟೆನ್ಷನ್ ಯಾಕೆ?

kalpa News by kalpa News
May 10, 2020
in ಶಿವಮೊಗ್ಗ
0
ರೆಡ್ ಝೋನ್ ಜಿಲ್ಲೆಗಳಿಂದ ಜಿಲ್ಲೆಗೆ ಹಲವರ ಪ್ರವೇಶ: ನಾಗರಿಕರಲ್ಲಿ ಆತಂಕ ಸೃಷ್ಠಿ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಶಿವಮೊಗ್ಗ: ಗ್ರೀನ್ ಝೋನ್’ನಲ್ಲಿದ್ದ ಶಿವಮೊಗ್ಗ ಬಹುತೇಕ ಸಹಜ ಸ್ಥಿತಿಗೆ ಮರಳಿ, ಜನರು ದೈನಂದಿನ ಜೀವನ, ದುಡಿಮೆ ಕಡೆಯಲ್ಲಿ ತೊಡಗಿದ್ದರು. ಆದರೆ, ನಿನ್ನೆ ಜಿಲ್ಲೆಗೆ ಆಗಮಿಸಿದ 9 ತಬ್ಲಿಘಿಗಳಿಂದ ಇಂದು ಜಿಲ್ಲೆಯ ಜನರ ಮನಃಸ್ಥಿತಿಯೇ ಬದಲಾಗುತ್ತಿದೆ.

ಗುಜರಾತ್’ನ ಅಹಮದಾಬಾದ್’ನಿಂದ ನಿನ್ನೆ ಜಿಲ್ಲೆಗೆ ಆಗಮಿಸಿದ 9 ತಬ್ಲಿಘಿಗಳ ಪೈಕಿ 8 ಮಂದಿಯಲ್ಲಿ ಈಗಾಗಲೇ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಇನ್ನೊಬ್ಬನ ವೈದ್ಯಕೀಯ ವರದಿ ಬರಬೇಕಿದೆ. ಈ ವಿಚಾರ ಈಗಾಗಲೇ ಜಿಲ್ಲೆಯಲ್ಲಿ ಮಿಂಚಿನಂತೆ ಪ್ರಚುರಗೊಂಡಿದ್ದು, ಎಲ್ಲಡೆ ಅದರಲ್ಲೂ ಪ್ರಮುಖವಾಗಿ ಶಿವಮೊಗ್ಗ ನಗರದಲ್ಲಿ ಆತಂಕವನ್ನು ಸೃಷ್ಠಿಸಿದೆ.

ಈಗ ದೃಢಪಟ್ಟವರು ಶಿಕಾರಿಪುರಕ್ಕೆ ಸೇರಿದವರಾಗಿದ್ದು, ತೀರ್ಥಹಳ್ಳಿಯ ಒಬ್ಬರ ವರದಿ ಬರಬೇಕಿದೆ. ದೃಢಪಟ್ಟ ಎಂಟು ಮಂದಿಯನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಕೊರೋನಾ ಸೋಂಕು ದೃಢಪಟ್ಟಿರುವ ಎಲ್ಲರೂ ತಬ್ಲೀಘೀ ಜಮಾತ್’ಗಾಗಿ ಅಹಮದಾಬಾದ್’ಗೆ ತೆರಳಿದವರಾಗಿದ್ದು, ಎಲ್ಲರೂ ಪುರುಷರೇ ಆಗಿದ್ದಾರೆ. 8 ಪಾಸಿಟಿವ್ ಪ್ರಕರಣ ಪತ್ತೆಯಾದರೂ ಸಹ ಜಿಲ್ಲೆಯನ್ನು ಗ್ರೀನ್ ಝೋನ್’ನಲ್ಲೇ ಮುಂದುವರೆಸಲಾಗುತ್ತಿದೆ. ಶಿಕಾರಿಪುರ ಮೂಲದ 65 ವರ್ಷದ ಪಿ808, ಪಿ809, ಪಿ810, ಪಿ811, ಪಿ812, ಪಿ813, ಪಿ815 ಹಾಗೂ ತೀರ್ಥಹಳ್ಳಿ 814 ಸಂಖ್ಯೆಯ ಸೋಂಕಿತರಾಗಿದ್ದಾರೆ.

ಇನ್ನು, ಶಿವಮೊಗ್ಗದಲ್ಲಿ ಈವರೆಗೂ ಒಂದೇ ಒಂದು ಪಾಸಿಟಿವ್ ಪ್ರಕರಣ ಇಲ್ಲದ್ದರಿಂದ ಜನರು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಈಗ ಏಕಾಏಕಿ ನಿನ್ನೆ ಆಗಮಿಸಿದ ತಬ್ಲಿಘಿಗಳನ್ನು ಜಿಲ್ಲೆಯ ಗಡಿಯೊಳಕ್ಕೆ ಬಿಟ್ಟುಕೊಂಡಿದ್ದೇ ಜಿಲ್ಲೆಯಲ್ಲೂ ಪಾಸಿಟಿವ್ ಪ್ರಕರಣ ಎಂಬ ಹಣೆಪಟ್ಟಿ ಹಚ್ಚಿಕೊಳ್ಳಲು ಕಾರಣವಾಗಿದೆ.

Also Read: ಕೋಟೆ ಭಾಗ ಸೇರಿದಂತೆ ನಗರ ಪ್ರದೇಶದಲ್ಲಿ ಕ್ವಾರಂಟೈನ್’ಗೆ ಬಜರಂಗದಳ ತೀವ್ರ ವಿರೋಧ

https://kalpa.news/bajrang-dals-fierce-opposition-to-quarantine-in-the-urban-area-including-the-fort-area/

ನಿನ್ನೆ ತಬ್ಲಿಘಿಗಳನ್ನು ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಪರೀಕ್ಷೆಗೆ ಒಳಪಡಿಸಿ, ಕ್ವಾರಂಟೈನ್’ನಲ್ಲಿ ಇರಿಸುವ ವೇಳೆ ಬಜರಂಗದಳ ತೀವ್ರವಾಗಿ ವಿರೋಧಿಸಿತ್ತು. ನಗರ ಪ್ರದೇಶದಲ್ಲಿ ಇವರನ್ನು ಕ್ವಾರಂಟೈನ್’ನಲ್ಲಿ ಇರಿಸುವುದು ಬೇಡ. ಬದಲಾಗಿ, ನಗರ ಪ್ರದೇಶದಿಂದ ದೂರದ ಕಟ್ಟಡದಲ್ಲಿ ಕ್ವಾರಂಟೈನ್ ಮಾಡಿ ಎಂದು ಬಜರಂಗದಳ ಮುಖಂಡ ದಯಾಳು ಆಗ್ರಹಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಯಾರು ಹೊಣೆ?
ಜಿಲ್ಲೆಯಲ್ಲಿ ಈವರೆಗೂ ಒಂದೇ ಒಂದು ಕೊರೋನಾ ಪ್ರಕರಣವಿಲ್ಲದೇ ಗ್ರೀನ್ ಝೋನ್’ನಲ್ಲಿ ಆರಾಮವಾಗಿತ್ತು. ಇಂತಹ ಸಂದರ್ಭದಲ್ಲಿ, ಪರಿಸ್ಥಿತಿಯ ಗಂಭೀರತೆಯ ಅರಿವಿದ್ದರೂ ಈ ತಬ್ಲಿಘಿಗಳಿಗೆ ಜಿಲ್ಲೆ ಪ್ರವೇಶಿಸಲು ಅನುಮತಿ ಏಕೆ ಕೊಡಬೇಕಿತ್ತು ಎಂಬ ವಿಚಾರ ಸಾರ್ವಜನಿಕರ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ.

ಪಾಸಿಟಿವ್ ಬಂದ ಇವರಿಗೆಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿರುವುದು ಸರಿಯಷ್ಟೇ. ಆದರೆ, ಇವರಿಂದ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಯಾರಿಗಾದರೂ ಒಬ್ಬರಿಗೆ ಹರಡಿದರೆ, ಅದರ ಮುಂದಿನ ಪರಿಸ್ಥಿತಿಯೇನು ಎಂಬ ಪ್ರಶ್ನೆಗೆ ಉತ್ತರ ನೀಡುವವರು ಯಾರು? ಒಂದು ವೇಳೆ ಸೋಂಕು ಇತರರಿಗೂ ಹರಡಿದರೆ ಅದರ ಹೊಣೆಯನ್ನು ಯಾರು ಹೊರುತ್ತಾರೆ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

Also Read: ಶಿವಮೊಗ್ಗದಲ್ಲಿ 8 ಕೊರೋನಾ ಪಾಸಿಟಿವ್: ಈಶ್ವರಪ್ಪ ಸ್ಪೋಟಕ ಮಾಹಿತಿ

https://kalpa.news/8-corona-positive-in-shimoga-ishwarappa-explosive-information/

ಕೊರೋನಾ ಜಿಲ್ಲೆಗೆ ಬಾರದಂತೆ ಈವರೆಗೂ ತಡೆಯುವಲ್ಲಿ ಜಿಲ್ಲಾಡಳಿತದ ಪಾತ್ರ ಪ್ರಮುಖವಾದುದು. ಅದರಲ್ಲೂ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜು, ವೈದ್ಯಕೀಯ ಇಲಾಖೆ, ಪೊಲೀಸ್ ಇಲಾಖೆ, ಪಾಲಿಕೆ-ನಗರಸಭೆಗಳು, ಆಶಾ ಕಾರ್ಯಕರ್ತೆಯರ ಶ್ರಮ ಹಾಗೂ ಹೋರಾಟದ ಫಲ ನಿನ್ನೆಯವೆರಗೂ ಜಿಲ್ಲೆ ಕೊರೋನಾ ಮುಕ್ತವಾಗಿತ್ತು. ಅದರಲ್ಲೂ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳಂತೂ ಹಗಲಿರುಳು ತಮ್ಮ ವಿಶ್ರಾಂತಿಯನ್ನೂ ಲೆಕ್ಕಿಸದೇ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಜಿಲ್ಲೆಯಾದ್ಯಂತ ತಿರುಗಿ, ಸ್ವತಃ ತಾವೇ ಎಷ್ಟೋಕಡೆ ತಪಾಸಣೆ ನಡೆಸಿದ್ದು, ಸರ್ವಥಾ ಪ್ರಶಂಸನೀಯ.

ಆದರೆ, ಈ 9 ತಬ್ಲಿಘಿಗಳನ್ನು ಜಿಲ್ಲೆಯ ಒಳಕ್ಕೆ ಬಿಟ್ಟುಕೊಂಡಿದ್ದೇ, ಇದು ಜಿಲ್ಲೆಯಲ್ಲೂ ಪಾಸಿಟಿವ್ ಪ್ರಕರಣ ದಾಖಲಾಗಲು ಕಾರಣಾಯಿತು. ಎಲ್ಲ ಪಾಸಿಟಿವ್ ರೋಗಿಗಳನ್ನು ಕ್ವಾರಂಟೈನ್’ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿರುವುದು ಸರಿಯಷ್ಟೇ.

ಆದರೆ, ತಬ್ಲಿಘಿಗಳಿಂದಾಗಿ ರಾಜ್ಯ ಹಾಗೂ ದೇಶದಲ್ಲಿ ಕೊರೋನಾ ಮಹಾಮಾರಿ ಹೇಗೆಲ್ಲಾ ವ್ಯಾಪಕವಾಯಿತು ಎಂಬುದನ್ನು ಕಂಡ ನಂತರವೂ ಧೈರ್ಯದಿಂದ ಹೇಗಿರುವುದು ಎಂಬುದು ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿರುವ ವಿಚಾರ.

ಅಲ್ಲದೇ, ಕೇವಲ 9 ಮಂದಿಯನ್ನು ಜಿಲ್ಲೆಯೊಳಕ್ಕೆ ಬಿಟ್ಟುಕೊಳ್ಳುವ ಮೂಲಕ 18 ಲಕ್ಷ ಮಂದಿಗೆ ಈ ಟೆನ್ಷನ್ ಯಾಕೆ ನೀಡಬೇಕಿತ್ತು ಎಂಬುದು ಪ್ರಶ್ನೆ.
ಜಿಲ್ಲಾಡಳಿತ ಏನೇ ಕ್ರಮ ಕೈಗೊಳ್ಳಿ; ಜೊತೆಯಲ್ಲಿ ನಾವಿದ್ದೇವೆ!

ಜಿಲ್ಲಾಧಿಕಾರಿಗಳೇ, ನಮ್ಮ ಜಿಲ್ಲೆ ಕಂಡ ದಕ್ಷ ಹಿರಿಯ ಅಧಿಕಾರಿಗಳಲ್ಲಿ ನೀವೂ ಒಬ್ಬರು… ನಿಮ್ಮ ಬಗ್ಗೆ ನಮಗೆ ನಂಬಿಕೆ ಹಾಗೂ ವಿಶ್ವಾಸವಿದೆ. ಈಗ ಜಿಲ್ಲೆಗೆ ಕೊರೋನಾ ಪಾಸಿಟವ್ ಪ್ರವೇಶ ಮಾಡಿದ್ದಾಗಿದೆ. ಈಗ ದೃಢಪಟ್ಟಿರುವ 8 ಮಂದಿಯಿಂದ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಯೂ ಸೇರಿದಂತೆ ಬೇರೆ ಯಾರಿಗೂ ಸೋಂಕು ಹರಡದಂತೆ ಬೇಕಾದ್ದ ಎಲ್ಲ ಕ್ರಮಗಳನ್ನು ಕೈಗೊಳ್ಳಿ. ಅಗತ್ಯಬಿದ್ದರೆ, ಜಿಲ್ಲೆಯನ್ನು ಸಂಫೂರ್ಣ ಲಾಕ್ ಡೌನ್ ಮಾಡಿ. ಜನಸಾಮಾನ್ಯರಿಗೆ ತೊಂದರೆಯಾದರೂ ಪರವಾಗಿಲ್ಲ. ಜಿಲ್ಲೆಯ ಜನರ ಜಿಲ್ಲಾಡಳಿತದೊಂದಿಗೆ ಇದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಇನ್ನೊಬ್ಬರಿಗೂ ಸೋಂಕು ಹರಡದಂತೆ ಕ್ರಮ ಕೈಗೊಳ್ಳಿ.

Get in Touch With Us info@kalpa.news Whatsapp: 9481252093

Tags: Corona PositiveDC K.B. ShivakumarFaceMaskGreen ZoneKannadaNewsWebsiteLatestNewsKannadaMalnadNewsQuarantineShivamoggaTablighi Jamaatತಬ್ಲಿಘಿಶಿವಮೊಗ್ಗ
Share220Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕ್ಷಣ ಮಾತ್ರದಲ್ಲಿ ಮನುಷ್ಯನನ್ನೇ ಕಬಳಿಸುವ ಈ ‘‘ಡಾರಿಲಸ್’’ ಎಂಬ ಭಯಂಕರ ಇರುವೆ ಬಗ್ಗೆ ನಿಮಗೆ ಗೊತ್ತಾ?

Next Post

ವಿದ್ಯಾವಂತರಾದ ನಾವು ಏಕಿಷ್ಟು ಕ್ರೂರಿಗಳಾಗುತ್ತಿದ್ದೇವೆ? ಒಂದು ಕ್ಷಣ ನಿಮ್ಮಲ್ಲಿಯೇ ಈ ಪ್ರಶ್ನೆ ಕೇಳಿಕೊಳ್ಳಿ

kalpa News

kalpa News

Next Post

ವಿದ್ಯಾವಂತರಾದ ನಾವು ಏಕಿಷ್ಟು ಕ್ರೂರಿಗಳಾಗುತ್ತಿದ್ದೇವೆ? ಒಂದು ಕ್ಷಣ ನಿಮ್ಮಲ್ಲಿಯೇ ಈ ಪ್ರಶ್ನೆ ಕೇಳಿಕೊಳ್ಳಿ

Leave a Reply Cancel reply

Your email address will not be published. Required fields are marked *

No Result
View All Result
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ
English Articles

Shivamogga SIR | District Achieves 81% e-Form Distribution

by kalpa News
July 8, 2026
0

Kalpa Media House  | Shivamogga | As part of the Election Commission of India’s statewide Special Summary Revision of the...

Read moreDetails
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL