Read - < 1 minute
ಶಿವಮೊಗ್ಗ: ಮಲೆನಾಡಿನ ಖ್ಯಾತ ಯುವ ಮನೋವೈದ್ಯೆ ಡಾ.ಕೆ.ಎಸ್. ಶುಭ್ರತಾ ಅವರ ಸಾಧನೆಯ ಹಾದಿಗೆ ಅಂತಾರಾಷ್ಟ್ರೀಯ ಗೌರವ ದೊರೆತಿದೆ.
ವಿಶ್ವ ಬಯೋಲಾಜಿಕಲ್ ಸೈಕಿಯಾಟ್ರಿ ಸಂಸ್ಥೆಯಿಂದ 2019 ನೆಯ ಸಾಲಿನ ಯುವ ಸಂಶೋಧಕಿ ಪ್ರಶಸ್ತಿ ಲಭಿಸಿದೆ.
ಜೂನ್ 2 ರಿಂದ 6 ವರೆಗೆ ಕೆನಡಾದ ವ್ಯಾಂಕೋವರ್ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಮ್ಮ ಆಟಿಸಂ ಬಗೆಗಿನ ಸಂಶೋಧನೆ ಪ್ರಸ್ತುತಪಡಿಸಿ, ಈ ಪ್ರಶಸ್ತಿಯನ್ನು ಶುಭ್ರತಾ ಸ್ವೀಕರಿಸಲಿದ್ದಾರೆ.
Discussion about this post