ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಸ್ಲಾಂ ತನ್ನ ಜನಸಂಖ್ಯೆ ಹೆಚ್ಚಿಸಿಕೊಳ್ಳಲು, ಹಿಂದೂಗಳ ನೈತಿಕತೆ ಕುಸಿಯಲು ಮಾತೃದೇವೋಭವ ವಾಕ್ಯವನ್ನು ವಿಕೃತಿಗೊಳಿಸಲು ವೇಶ್ಯಾವಾಟಿಕೆಗಾಗಿ, ಭಯೋತ್ಪಾದನೆಗಾಗಿ ಮಾದಕ ವಸ್ತು ಸಾಗಾಣಿಕೆಗಾಗಿ, ಹನಿಟ್ರ್ಯಾಪ್ ಗಾಗಿ ಸುಳ್ಳು ಪ್ರೀತಿ, ಮೋಸ, ಷಡ್ಯಂತ್ರ ಮಾಡಿ ತಮ್ಮ ಹೆಸರನ್ನು ಬದಲಾಯಿಸಿಕೊಂಡು ಹಿಂದು ಹೆಣ್ಣುಮಕ್ಕಳಿಗೆ ಮೋಸ ಮಾಡುತ್ತಿದ್ದಾರೆ. ಈ ಮೂಲಕ ಲವ್ ಜಿಹಾದ್ #Lovejihad ಮಾಡುತ್ತಿದ್ದಾರೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ #Pramod Muthalik ಹೇಳಿದ್ದಾರೆ.
ಅವರು ಇಂದು ಪತ್ರಿಕಾ ಭವನದಲ್ಲಿ ‘ಲವ್ ಜಿಹಾದ್’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಹಿಂದೂ ಹೆಸರಿನಲ್ಲಿ ಶೇ. 62ರಷ್ಟು ಲವ್ ಜಿಹಾದ್ ಗಳು ಆಗಿದ್ದು, ಬುರ್ಖಾ ಹಾಕದೇ ಇರುವುದಕ್ಕೆ, ನಮಾಜ್ ಮಾಡದೇ ಇರುವುದಕ್ಕೆ, ಗೋಮಾಂಸ ತಿನ್ನದೇ ಇರುವುದಕ್ಕೆ ಶೇ.81ರಷ್ಟು ಕೊಲೆಗಳಾಗಿವೆ. 2022-23ರಲ್ಲಿ 153 ಬರ್ಬರ ಕೊಲೆಗಳಾಗಿದ್ದು, 436 ಲವ್ ಜಿಹಾದ್ ಕೇಸ್ ಗಳಾಗಿವೆ ಎಂದರು.
2019ರಿಂದ 21ರಲ್ಲಿ ದೇಶದಲ್ಲಿ ಮಹಿಳೆಯರ ಕೊಲೆ, ಅತ್ಯಾಚಾರ, ದೌರ್ಜನ್ಯ ಸೇರಿದಂತೆ ಒಟ್ಟು 13 ಲಕ್ಷದ 13 ಸಾವಿರ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 2,51,430 ಅಪ್ರಾಪ್ತರಿದ್ದಾರೆ ಎಂದು ಪಾರ್ಲಿಮೆಂಟ್ ನಲ್ಲಿ ಮಾಹಿತಿ ನೀಡಲಾಗಿದೆ. ಪೊಲೀಸ್ ಸ್ಟೇಷನ್ ಗಳನ್ನ ಧ್ವಂಸ ಮಾಡಿ, ಪೊಲೀಸರ ಮೇಲೆ ಹಲ್ಲೆ ಮಾಡಿದವರನ್ನು ಈ ಸರ್ಕಾರ ಕೈಬಿಟ್ಟಿದೆ. ಆದರೆ, ದೇಶಕ್ಕಾಗಿ ಹಿಂದೂ ಹೆಣ್ಣುಮಕ್ಕಳ ಮಾನ, ಪ್ರಾಣ ರಕ್ಷಣೆಗಾಗಿ ಹೋರಾಡುತ್ತಿರುವ ಪ್ರಮೋದ್ ಮುತಾಲಿಕ್ ಅವರನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ದೇಶದ್ರೋಹಿ ರೀತಿ ನಡೆಸಿಕೊಳ್ಳುತ್ತಿದೆ. ಫೆ. 28ರಂದು ‘ಲವ್ ಜಿಹಾದ್’ ಪುಸ್ತಕ ಬಿಡುಗಡೆಗೆ ಬಂದ ನನ್ನನ್ನು ರಾತ್ರಿ ಹೊತ್ತೇ ಪೊಲೀಸರು ತಡೆದು ನಿಲ್ಲಿಸಿ ಬಳಿಕ ಗಡಿಪಾರು ಆದೇಶವನ್ನು ತಂದು ತೋರಿಸುತ್ತಾರೆ. ಈಗಾಗಲೇ ಈ ಪುಸ್ತಕ 5 ಜಿಲ್ಲೆಯಲ್ಲಿ ಬಿಡುಗಡೆಗೊಂಡಿದೆ. ಒಂದು ಲಕ್ಷ ಪ್ರತಿ ಮುದ್ರಣ ಕಂಡಿದೆ. ನನ್ನ ಮೇಲೆ ಜೈಲು ವಾಸ ಅನುಭವಿಸುವ ಯಾವುದೇ ಕೇಸ್ ಗಳು ಉಳಿದಿಲ್ಲ. ನಾನು ಅಪರಾಧಿಯಲ್ಲ, ಭಯೋತ್ಪಾದಕನಲ್ಲ, ಆದರೂ, ನನ್ನನ್ನು ಪೊಲೀಸರು ನಗರ ಪ್ರವೇಶಿಸದಂತೆ ತಡೆ ಹಿಡಿದು ಅನಾಗರಿಕವಾಗಿ ವರ್ತಿಸಿದ್ದಾರೆ. ಅಂಬೇಡ್ಕರ್ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ ಎಂದರು.
ಎರಡೇ ದಿನದಲ್ಲಿ ಹೈಕೋರ್ಟ್ ಪೊಲೀಸರ ಕ್ರಮವನ್ನು ಖಂಡಿಸಿ ಪುಸ್ತಕ ಬಿಡುಗಡೆಗೆ ಅವಕಾಶ ನೀಡಿದೆ. ಹಾಗಾಗಿ ಇಂದು ಶಿವಮೊಗ್ಗದಲ್ಲಿ ಪುಸ್ತಕ ಬಿಡುಗಡೆಗೊಳಿಸಿದ್ದೇನೆ ಎಂದರು.
ರಾಜ್ಯದ 100 ಕಡೆಗಳಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗಾಗಿ ತ್ರಿಶೂಲ ದೀಕ್ಷಾ ಸಮಾರಂಭ ಏರ್ಪಡಿಸಿ ಅವರಿಗೆ ಅರಿವು ಮತ್ತು ಧೈರ್ಯ ತುಂಬಿಸುವ ಕಾರ್ಯ ಮಾಡುತ್ತಿದ್ದೇವೆ. ಈಗಾಗಲೇ 8 ಕಡೆ ಕಾರ್ಯಕ್ರಮ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
Also read: ಕೆ.ಇ. ಕಾಂತೇಶ್ 45ನೇ ಹುಟ್ಟುಹಬ್ಬ | ಮಾ.27ರಂದು ‘ಆಶೀರ್ವಾದ’ ಕಾರ್ಯಕ್ರಮ
ಅನ್ಯ ಧರ್ಮೀಯರನ್ನು ಮದುವೆಯಾಗಿ ಎಂಬ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ನನ್ನ ಬೆಂಬಲವಿದೆ. ಅವರು ಲವ್ ಜಿಹಾದ್ ಮಾಡಿ ಸೂಟ್ ಕೇಸ್ ನಲ್ಲಿ ಹೆಣ ತುಂಬಿ ಕಳಿಸುತ್ತಾರೆ. ಆದರೆ, ಹಿಂದೂ ಧರ್ಮೀಯರು ಮದುವೆಯಾಗಿ ಅವರನ್ನು ಸಗೃಹಿಣಿಯಾಗಿ ನೋಡಿಕೊಳ್ಳುತ್ತಾರೆ ಎಂದರು.
ಸೌಜನ್ಯ ಪ್ರಕರಣ ಕುರಿತಂತೆ ಈಗಾಗಲೇ ಸ್ಪಷ್ಟೀಕರಣ ನೀಡಿದ್ದೇನೆ. ಸೌಜನ್ಯ ತಾಯಿ ಇರುವ ವೇದಿಕೆಯಲ್ಲೇ ನಿಂತು ಸೌಜನ್ಯ ಕೊಲೆಗಾರರು ಯಾರೇ ಆಗಿರಲಿ, ಅವರನ್ನು ದಂಡಿಸಬೇಕು ಎಂಬುದು ನನ್ನ ಇಚ್ಚೆಯಾಗಿದೆ ಎಂದರು.
ಮೈಸೂರು ಕ್ಯಾತಮಾರನಹಳ್ಳಿಯ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಈ ಸಂಬಂಧ ಕಾರ್ನರ್ ಜಾಗದಲ್ಲಿ ಮಸೀದಿ ನಿರ್ಮಿಸಬೇಕೆಂಬ ಒತ್ತಡ ಇದೆ. ಈಗಾಗಲೇ ಅಲ್ಲಿ 8 ಮಸೀದಿಗಳಿವೆ. ಈ ವಿವಾದಕ್ಕೆ ಸಂಬಂಧಿಸಿದಂತೆ ರಾಜು ಎಂಬ ಯುವಕನ ಕೊಲೆಯಾಗಿದೆ. ಬಿಜೆಪಿ ಈ ಬಗ್ಗೆ ಹೋರಾಟ ಹಮ್ಮಿಕೊಳ್ಳಬೇಕು ಎಂದರು.
ವಕೀಲೆ ಪವಿತ್ರಾ ಮಾತನಾಡಿ, ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದರು. ಮತ್ತು ಶಿವಮೊಗ್ಗದಲ್ಲೂ ಕೂಡ ನಾಲ್ಕೈದು ಪ್ರಕರಣಗಳು ಲವ್ ಜಿಹಾದ್ ಸಂಬಂಧಿಸಿದಂತೆ ನಡೆದಿದೆ. ನಾವು ಅಂತಹ ಯುವತಿಯರು ಕಂಗೆಟ್ಟು ನಮ್ಮ ಬಳಿ ಬಂದಾಗ ಅವರಿಗೆ ಸೂಕ್ತವಾದ ಸಹಾಯ ನ್ಯಾಯಾಲಯದ ಮೂಲಕ ಕೊಡಿಸಿದ್ದೇವೆ ಎಂದರು.
ಮಂಗಳೂರಿನ ಬೇಂಗ್ರೆ ಸಮೀಪ ಹಿಂದೂ ಹುಡುಗಿಯನ್ನು ಮದುವೆಯಾಗಿ ಬಚ್ಚಿಡುವ ಪ್ರಯತ್ನ ಮಾಡಲಾಗಿತ್ತು. ಅದೇ ರೀತಿ ಅನೇಕ ಕಡೆ ಹಿಂದೂ ಹುಡುಗಿಯರು ಮೋಸದ ಬೆಲೆಗೆ ಬಿದ್ದಿದ್ದನ್ನು ಗಮನಿಸಿ ಅವರನ್ನು ರಕ್ಷಿಸುವ ಕಾರ್ಯ ಮಾಡಿದ್ದೇವೆ. ಹಿಂದೂ ಹುಡುಗಿಯರಿಗೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಕೂಡ ಶ್ರೀರಾಮಸೇನೆ ಮಾಡುತ್ತಾ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ರಾಜ್ಯ ದಕ್ಷಿಣ ಪ್ರಾಂತ ಲವ್ ಜಿಹಾದ್ ಪ್ರಮುಖ್ ಸುಂದರೇಶ್ ನರೇಗಲ್, ಕೆ.ಇ. ಕಾಂತೇಶ್, ವಕೀಲರಾದ ಹಾಲಪ್ಪಗೌಡ, ವಾದಿರಾಜ್, ಪವಿತ್ರಾ, ಶೋಭಾ, ಗೀತಾ, ಅಂಬಿಕಾ, ಉಷಾ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post