ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೇ 7ರ ಲೋಕಸಭಾ ಚುನಾವಣೆಯಂದು 12 ಗಂಟೆ ಮುಂಚಿತವಾಗಿ ಮತಾ ಚಲಾಯಿಸಿ ನಮ್ಮ ಹೋಟೆಲ್ ಗೆ ಬಂದವರಿಗೆ ಬೆಳಗಿನ ತಿಂಡಿಯನ್ನು ಉಚಿತವಾಗಿ ನಿಡಲಾಗುವುದು ಎಂದು ಶುಭಂ ಹೋಟಲ್ ಮಾಲೀಕ ಉದಯ್ ಕುಮಾರ್ ತಿಳಿಸಿದರು.
ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಶುಭಂ ಹೋಟಲ್ ನಲ್ಲಿನ ಕಾರ್ಮಿಕರಿಗೆ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಹೋಟೆಲ್ ನ ಕಾರ್ಮಿಕರಿಗೆ ಮ್ಯೂಸಿಕಲ್ ಛೇರ್ ಆಡಿಸಿ, ಮತದಾನ ಜಾಗೃತಿ ಪ್ರತಿಜ್ಞಾ ವಿಧಿ ಭೋದಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಸ್ವೀಪ್ ನೋಡಲ್ ಅಧಿಕಾರಿಗಳಾದ ಅನುಪಮಾ, ಸುಪ್ರಿಯಾ, ಸ್ವೀಪ್ ತಂಡದವರು, ಶುಭಂ ಹೋಟಲ್ ಮಾಲೀಕರು ಮತ್ತು ಕಾರ್ಮಿಕರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post