ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹನುಮ ಜಯಂತಿಯ ವಿಶೇಷ ಸಂದರ್ಭದಲ್ಲಿ ಸಾಮಗಾನ ವತಿಯಿಂದ ಏ.16ರ ಶನಿವಾರ ಸಂಜೆ 6:30ಕ್ಕೆ ಭಜನಾಮೃತ ವಿಶೇಷ ಭಕ್ತಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ನಗರದ ಕೋಟೆ ಬಯಲು ರಂಗಮಂದಿರದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಕುಮಾರಿ ಸೂರ್ಯ ಗಾಯತ್ರಿರವರು ವಿಶೇಷ ಭಕ್ತಿ ಸಂಗೀತ ಕಾರ್ಯಕ್ರಮ ನೆರವೇರಿಸಿಕೊಡಲಿದ್ದಾರೆ.
ಕುಮಾರಿ ಸೂರ್ಯ ಗಾಯತ್ರಿ ಉತ್ತರ ಕೇರಳದ ವಡಕರದ ಪೊರಮೇರಿ ಗ್ರಾಮದವರಾಗಿದ್ದು, ಕರ್ನಾಟಕ ಸಂಗೀತದಲ್ಲಿ ಪರಿಣಿತಿಯನ್ನು ಪಡೆದಿದ್ದು, ಖ್ಯಾತ ಗಾಯಕ ಕುಲದೀಪ್ ಎಂ ಪೈರವರು ನಿರ್ಮಾಣದ ‘ವಂದೇ ಗುರು ಪರಂಪರಂ’ ಆಧ್ಯಾತ್ಮಿಕ ಸಂಗೀತ ಸರಣಿಯ ಮುಖ್ಯ ಗಾಯಕಿಯಾದ ಸೂರ್ಯ ಗಾಯತ್ರಿಯವರ ಭಾವಪೂರ್ಣ ಗಾಯನವು ಪ್ರಪಂಚದಾದ್ಯಂತ ಸಂಗೀತ ಪ್ರೇಮಿಗಳ ಹೃದಯ ಮಿಡಿದಿದೆ. ಕುಮಾರಿ ಸೂರ್ಯ ಗಾಯತ್ರಿಯವರು ಪ್ರಥಮ ಬಾರಿಗೆ ಶಿವಮೊಗ್ಗ ನಗರದಲ್ಲಿ ನೀಡುತ್ತಿರುವ ಸಂಗೀತ ಕಾರ್ಯಕ್ರಮವು ನಗರದ ಆಧ್ಯಾತ್ಮ ಸಂಗೀತ ಆಸಕ್ತ ಮನಸ್ಸುಗಳನ್ನು ಸಂಪ್ರೀತಿಗೊಳಿಸಲಿದೆ.
ಈ ಸಮಾರಂಭದಲ್ಲಿ ಸಾಮಗಾನ ಸಂಸ್ಥೆಯ ಗೌರವಧ್ಯಕ್ಷರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಈ. ಕಾಂತೇಶ್ ಉಪಸ್ಥಿತರಿರಲಿದ್ದು, ಹುತಾತ್ಮ ಹಿಂದು ಹರ್ಷನ ತಾಯಿ ಪದ್ಮಾವತಿ ನಾಗರಾಜ್ “ಹರ್ಷ ಚಾರಿಟೇಬಲ್ ಟ್ರಸ್ಟ್” ನ ವಿಧ್ಯುಕ್ತ ಲೋಕಾರ್ಪಣೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸಿದ ಶಾಸ್ತ್ರೀಯ ಸಂಗೀತ ಜೂನಿಯರ್ ಸ್ಪರ್ಧೆಯಲ್ಲಿ ಪ್ರಥಮ ರ್ಯಾಂಕ್ ಪಡೆದ ಮಾಸ್ಟರ್ ಪೂಜಿತ್ ತೇಜಸ್ವಿಯವರನ್ನು ಸನ್ಮಾನಿಸಲಾಗುವುದು.
Also read: ಅಂಬೇಡ್ಕರ್ ರಚಿಸಿರುವ ಸಂವಿಧಾನ ಎಲ್ಲಾ ಭಾರತೀಯರಿಗೂ ಸರ್ವ ಶ್ರೇಷ್ಠಗ್ರಂಥ: ಸಚಿವ ಈಶ್ವರಪ್ಪ
ಈ ಕಾರ್ಯಕ್ರಮಕ್ಕೆ ಸಂಸ್ಕಾರ ಪ್ರತಿಷ್ಠಾನ ಸ್ಥಾಪಕ ಶಬರೀಶ್ ಕಣ್ಣನ್ ಹಾಗೂ ಶಿವಮೊಗ್ಗ, ಕೋಟೆ ಯುವಕ ಸಂಘ ಶಿವಮೊಗ್ಗದ ಪದಾಧಿಕಾರಿಗಳು, ಸದಸ್ಯರುಗಳು ವಿಶೇಷ ಸಹಕಾರ ನೀಡುತ್ತಿದ್ದು, ನಗರದ ಎಲ್ಲಾ ಸಂಗೀತ ಪ್ರೇಮಿಗಳು, ಭಜನಾ ಆರಾಧಕರು, ನಗರವಾಸಿಗಳು ಆಗಮಿಸಿ ಅಪರೂಪದ ಭಕ್ತಿ ಸಂಗೀತ ಸಂಜೆಯಲ್ಲಿ ಪಾಲ್ಗೋಳ್ಳುವಂತೆ ಸಾಮಗಾನ ಸಂಸ್ಥೆಯ ಕಾರ್ಯದರ್ಶಿ ವಿನಯ್ ಶಿವಮೊಗ್ಗ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post