ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಪುನಾರಂಭಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ #J P Nadda ಹೇಳಿದ್ದಾರೆ.
ಪೆಸಿಟ್ ಪ್ರೇರಣಾ ಸಭಾಂಗಣದಲ್ಲಿ ಆಯೋಜಿಸಿದ್ದ ವೃತ್ತಿಪರರ ಜೊತೆಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಲ್ಲಿ ಸಿಕ್ಕಿರುವ ಅಭೂತಪೂರ್ವ ಸ್ವಾಗತ ರಾಘವೇಂದ್ರ ಅವರನ್ನು ಮತ್ತೊಮ್ಮೆ ಲೋಕಸಭೆಗೆ ಕಳಿಸುವುದು ಪಕ್ಕಾ ಮಾಡಿದೆ. ಹಿರಿಯ ಯಡಿಯೂರಪ್ಪ ಅವರೇ ನಮಗೆ ಸ್ಫೂರ್ತಿ. ಭಾರತ ದಿನೇ ದಿನೇ ಬಲಿಷ್ಠ ಆಗುತ್ತಿದೆ ಎಂದರು.
Also read: ಕೆ.ಎಸ್. ಈಶ್ವರಪ್ಪ ಅವರನ್ನು ಬೆಂಬಲಿಸಲು ತೀ.ನಾ. ಶ್ರೀನಿವಾಸ್ ನೀಡಿದ ಕಾರಣಗಳೇನು?
ಆದರೆ ದಕ್ಷಿಣ-ಉತ್ತರ ಭಾರತದ ವಿಭಜನೆಯ ಬಗ್ಗೆ ಕಾಂಗ್ರೆಸ್ಸಿಗರು ಮಾತನಾಡುತ್ತಾರೆ. ಅದರಲ್ಲೂ ಕರ್ನಾಟಕದ ಸಂಸತ್ ಸದಸ್ಯ ಮಾತನಾಡಿದ್ದು ನೋವು ತಂದಿದೆ. ಇಂತವರಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ಅವಕಾಶ, ಮತ್ತೊಮ್ಮೆ ಲೋಕಸಭೆಗೆ ಅವಕಾಶ ನೀಡಬೇಕಾ ಎಂದು ಪ್ರಶ್ನೆ ಮಾಡಿದರು.
ದೇಶದಲ್ಲಿ ಹತ್ತು ವರ್ಷಗಳ ಅವಧಿಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಅದರ ಹಿಂದೆ ಭ್ರಷ್ಟಾಚಾರ, ಇತರ ವಿಷಯಗಳೇ ಕಾಣುತ್ತಿದ್ದವು. ಈಗ ಮೋದಿ ನೇತೃತ್ವದಲ್ಲಿ ಬದಲಾವಣೆ ಕಂಡಿದೆ. ಭಾರತ ವಿಶ್ವದ ಎಲ್ಲಾ ವೇದಿಕೆಯಲ್ಲಿ ಇದೆ. ಜಿ7, ಜಿ8 ಯಾವುದೇ ಇರಬಹುದು. ನೆರೆಹೊರೆ ದೇಶದ ಜೊತೆಗೆ ಉತ್ತಮ ಬಾಂಧವ್ಯ. ಶ್ರೀಲಂಕಾ, ಭೂತಾನ್, ನೇಪಾಳ ದೇಶಗಳ ಜೊತೆಗೆ ಬಾಂಧವ್ಯ ಗಟ್ಟಿ ಆಗಿದೆ ಎಂದರು.
ಜಾತಿ ಯಾವುದು, ಪ್ರಾದೇಶಿಕತೆ ಯಾವುದು? ಎಂದು ನೋಡುವ ಕಾಲ ಒಂದಿತ್ತು. ಆದರೆ ಈಗ ಅದೆಲ್ಲಾ ಹೋಗಿದೆ. ರಾಜಕೀಯ ಸಂಸ್ಕøತಿ ಬದಲಾಗಿದೆ. ರಾಘವೇಂದ್ರ ಐದು ವರ್ಷಗಳ ಸಾಧನೆಯ ಬಗ್ಗೆ ಮಾತನಾಡುತ್ತಾರೆ. ಉಳಿದವರು ವಿಭಜನೆ ಬಗ್ಗೆ ಮಾತನಾಡುತ್ತಾರೆ. ರಷ್ಯಾ, ಚೀನಾ, ಜಪಾನ್ ಅಮೆರಿಕಾ ಎಲ್ವೂ ಆರ್ಥಿಕ ಸಂಕಷ್ಟ. 11 ನೇ ಸ್ಥಾನ. ಈಗ ಬ್ರಿಟನ್ ಹಿಂದಿಕ್ಕಿ ಐದನೇ ಸ್ಥಾನ. 2026 ರ ಹೊತ್ತಿಗೆ ಮೂರನೇ 138 ರಷ್ಟು ರಫ್ತು ಹೆಚ್ಚಳ ಆಗಿದೆ. ಪೆಟ್ರೋಕೆಮಿಕಲ್ 106 ರಷ್ಟು ಹೆಚ್ಚು ಆಗಿದೆ. ಗಣೇಶ ವಿಗ್ರಹ ಕೂಡಾ ಚೀನಾದಿಂದ ಬರುತ್ತಿತ್ತು. ಆಟಿಕೆಗಳು ಚೀನಾದಿಂದ ಬರುತ್ತಿತ್ತು.ವೀಗ ಇಲ್ಲಿಯೇ ಸ್ಟಿಲ್ ತಯಾರಿಕೆ ಎರಡನೇ ಸ್ಥಾನ ಇದ್ದೇವೆ ಎಂದರು.
ಬಡವರು, ಯುವ, ರೈತ,ಮಹಿಳೆಯರಿಗೆ ಸರ್ಕಾರ ಬೆಂಬಲ. 80 ಕೋಟಿ ಜನರಿಗೆ ಆಹಾರ ಪೂರೈಕೆ ಸಾಗುತ್ತಿದೆ.25 ಕೋಟಿ ಜನರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. 11 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ಪಾವತಿ. 12 ಕೋಟಿ ಶೌಚಾಲಯ, 10 ಕೋಟಿ ಉಜ್ವಲಾ ಯೋಜನೆ ಮೂಲಕ ಮಹಿಳಾ ಸಬಲೀಕರಣ ಮಾಡಲಾಗಿದೆ ಎಂದರು.
ಹಿಂದೆ ಶಾಸಕ, ಸಂಸದರು ಪತ್ರ ಬರೆಯಬೇಕಿತ್ತು. ಯಾರಿಗಾದರೂ ಆರೋಗ್ಯ ರಕ್ಷಣೆ ಬೇಕೆಂದರೆ ಧನ ಸಹಾಯ ಮಾಡಲು. ಈಗ ಆಯುಷ್ಮಾನ್ ಭಾರತ್ ಅಡಿ ಚಿಕಿತ್ಸೆ. 70 ವರ್ಷ ದಾಟಿದ ಮಹಿಳೆಯರಿಗೆ 05 ಲಕ್ಷ ವರೆಗೆ ಉಚಿತ ಚಿಕಿತ್ಸೆ. ಹೆಲಿಕಾಪ್ಟರ್ ತಯಾರಿಕೆ ಕರ್ನಾಟಕ ಆಗಲಿದೆ.
ಎನ್ಡಿಎ ಬಂದರೆ ಮೀಸಲಾತಿ ಹೋಗುತ್ತದೆ ಎಂದು ಹಬ್ಬಿಸಿದರು. ಫೇಕ್ ನ್ಯೂಸ್ ಮತ್ತು ಫೇಕ್ ವಿಡಿಯೋ ಬಳಕೆ ಮಾಡುತ್ತಿದ್ದಾರೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಫೋನ್ ಮೂಲಕ ಜಾಲತಾಣದಲ್ಲಿ ಹಂಚಿಕೆ. 400 ಸ್ಥಾನ ಬಿಜೆಪಿ ಪಡೆಯುತ್ತದೆ ಎಂದು ಖಚಿತ ಬಳಿಕ ಅವರೆಲ್ಲಾ ಡಿಪ್ರೆಶನ್ ಹೋಗಿದ್ದಾರೆ ಎಂದರು.
ಅಂಬೇಡ್ಕರ್ ಖಚಿತವಾಗಿ ಧಾರ್ಮಿಕ ಮೀಸಲಾತಿ ಇಲ್ಲ ಎಂದು ಹೇಳಿದ್ದಾರೆ. ಆದರೆ ಒಬಿಸಿಯಲ್ಲಿ ಮುಸ್ಲಿಂ ಮೀಸಲಾತಿ ಸಿದ್ದರಾಮಯ್ಯ ನೀಡಿದ್ದಾರೆ. ನಾವು ಮುಸ್ಲಿಂ ವಿರೋಧಿ ಅಲ್ಲ. ಆದರೆ ಓಬಿಸಿಯಲ್ಲಿ ಮೀಸಲಾತಿ ಕೊಡಲು ವಿರೋಧ ಇದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post