ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ಪಿಎಸ್ಐ ವಸಂತ ಕುಮಾರ್, ಉಮಾ ಪಾಟೀಲ್ ಮತ್ತು ದೇವರಾಜ್ ಸಾಳೇರ್ ನೇತೃತ್ವದಲ್ಲಿ ಇಂದು ರೂಟ್ ಮಾರ್ಚ್ (ಪಥಸಂಚಲನವನ್ನು) ನಡೆಸಲಾಯಿತು.
ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯಿಂದ ಪಥಸಂಚಲನ ಪ್ರಾರಂಭಿಸಿ, ಟೆಂಫೋ ಸ್ಟ್ಯಾಂಡ್, ಆರ್,ಎಂ,ಎಲ್ ನಗರ, ಬುದ್ದಾ ನಗರ, ಮಂಜುನಾಥ ಬಡಾವಣೆ, ಅಣ್ಣಾನಗರ ಚಾನಲ್, ಮಿಳ್ಳಘಟ್ಟದಿಂದ ದೊಡ್ಡಪೇಟೆ ಪೊಲೀಸ್ ಠಾಣೆಗೆ ಬಂದು ಮುಕ್ತಾಯ ಮಾಡಲಾಯಿತು.
ಈ ಸಂದರ್ಭದಲ್ಲಿ ಸಿಐಎಸ್ಎಫ್, ಕೆಎಸ್ಆರ್ಪಿ ಮತ್ತು ದೊಡ್ಡಪೇಟೆ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂಧಿಗಳು ಭಾಗವಹಿಸಿದ್ದರು.
Also read: Amit Shah ends decades-old dispute
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post