ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ : ಆಧುನಿಕ ತಂತ್ರಜ್ಞಾನಗಳ ಬಳಕೆ ಹೆಚ್ಚಾದಂತೆ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು ಪ್ರತಿಯೊಬ್ಬರಲ್ಲಿಯು ಸೈಬರ್ ಅಪರಾಧಗಳ ಕುರಿತು ಅರಿವು ಜಾಗೃತಿ ಅವಶ್ಯಕವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕುಲಸಚಿವರಾದ ಪ್ರೋ. ಹೂವಯ್ಯಗೌಡ ಅಭಿಪ್ರಾಯಪಟ್ಡರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಇಂದು ನಗರದ ಎಸ್.ವಿ.ಕೃಷ್ಣಮೂರ್ತಿರಾವ್ ರಾಷ್ಟ್ರೀಯ ಮಹಾವಿದ್ಯಾಲಯ, ಯುವ ರೆಡ್ ಕ್ರಾಸ್ ಘಟಕ ವತಿಯಿಂದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಸರ್ವ ರಕ್ಷಣಾ ತಂತ್ರಗಳು ಮತ್ತು ಸೈಬರ್ ಅಪರಾಧಗಳ ತಡೆ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು
ಆಧುನಿಕ ತಂತ್ರಜ್ಞಾನಗಳನ್ನು ಬಳಸುವಾಗ ಅಧಿಕ ಎಚ್ಚರಿಕೆ ಅವಶ್ಯಕವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿನ ನಮ್ಮ ವೈಯುಕ್ತಿಕ ಖಾತೆಗಳು ಹ್ಯಾಕ್ ಆಗುವುದು, ಹಣಕ್ಕಾಗಿ ಬೇಡಿಕೆ ಇಡುವುದುನಡೆಯುತ್ತಿದೆ. ಇಂತಹ ಘಟನೆಗಳಿಂದಾಗಿ ಅನೇಕ ಜನರು ಮೋಸಕ್ಕೆ ಇಡಾಗುತ್ತಿದ್ದು ನಾವೆಲ್ಲರು ಜಾಗೃತರಾಗಿರಬೇಕಿದೆ.
ಮೂರನೇ ನೆಪೊಲಿಯನ್ ಯುದ್ಧದ ಸಂದರ್ಭದಲ್ಲಿ ಹೆನ್ರಿ ಡುಮೆಂಟ್ ಎಂಬ ವ್ಯಕ್ತಿ ಯುದ್ಧ ಸಾಮಾಗ್ರಿಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಯುದ್ಧದ ಸಾವು ನೋವುಗಳನ್ನು ಕಂಡು ಮರುಕಪಟ್ಟ ಆ ವ್ಯಕ್ತಿಯು ಮಾನವೀಯತೆಯ ಅವಶ್ಯಕತೆಯನ್ನು ಅರಿತು ರೆಡ್ ಕ್ರಾಸ್ ಪ್ರಾರಂಭಿಸಲಾಯಿತು. ಈ ಮೂಲಕ ನೊವಲ್ಲಿ ಮಿಡಿದವರಿಗೆ ಸ್ಪಂದಿಸುವ ಕಾರ್ಯ ರೆಡ್ ಕ್ರಾಸ್ ಮಾಡುತ್ತಿದೆ. ಗಾಂಧೀಜಿಯವರ ಸರ್ವೋದಯದ ಆಶಯದಂತೆ ಪ್ರತಿಯೊಬ್ಬ ವ್ಯಕ್ತಿಗೆ ಒಳ್ಳೆಯದಾದರೇ ಸಮಾಜಕ್ಕು ಒಳ್ಳೆಯದಾಗುತ್ತದೆ ಎಂದರು.
ದೌರ್ಜನ್ಯದ ವಿರುದ್ಧ ಹೋರಾಟ ನಡೆಸಲು ನಮ್ಮ ಮನೋಬಲ ಸಧೃಡವಾಗಬೇಕಿದೆ. ವಿಷಾಕ ಗೈಡ್ ಲೈನ್ ಮತ್ತು ನಿರ್ಭಯದಂತಹ ಕಾನೂನುಗಳ ಮೂಲಕ ಹೆಣ್ಣು ಮಕ್ಕಳಾ ಸುರಕ್ಷತೆ ಹೆಚ್ಚಿಸಲು ಸಾಧ್ಯವಾಗಲಿದೆ. ಮಾನಸಿಕ ಮತ್ತು ದೈಹಿಕ ದೌರ್ಜನ್ಯಗಳ ವಿರುದ್ಧ ಸರ್ವ ರಕ್ಷಣಾ ತಂತ್ರಗಳೊಂದಿಗೆ ಆತ್ಮವಿಶ್ವಾಸದಿಂದ ಹೋರಾಟ ನಡೆಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ಚಿದಾನಂದ.ಎನ್.ಕೆ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಮಂಗಳೂರಿನ ಸ್ವರಕ್ಷಾ ಸಂಸ್ಥೆ ಸಿಇಒ ಕಾರ್ತಿಕ್.ಎಸ್. ಕಟೀಲ್ , ಶೋಭ ಲತಾ , ಕಾರ್ಯಾಗಾರ ಸಂಯೋಜಕರಾದ ಡಿ.ಎಸ್. ಮಂಜುನಾಥ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post