ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೊರೋನಾ ಲಸಿಕೆ ತೆಗೆದುಕೊಳ್ಳುವ ಮುನ್ನ ರಾಜ್ಯ ನಾಗರಿಕರ ರಕ್ಷಣಾ ಸಮಿತಿ ಸದಸ್ಯರು ರಕ್ತದಾನ ಮಾಡಿದ್ದಾರೆ.
ಕೊರೋನಾ ಲಸಿಕೆ ತೆಗೆದುಕೊಂಡ ಬಳಿಕ 28 ದಿನಗಳ ಗಳವರೆಗೆ ರಕ್ತದಾನವನ್ನು ಮಾರುವಂತಿಲ್ಲ. ಹಾಗಾಗಿ ದೇಶದಲ್ಲಿ ಹಲವರು ರಕ್ತದಾನದ ಅಭಾವ ಉಂಟಾಗಬಹುದು ಎಂಬ ಆಲೋಚನೆಯಿಂದ ರಕ್ತದಾನದಲ್ಲಿ ತೊಡಗಿದ್ದಾರೆ. ಈ ದೆಸೆಯಲ್ಲಿ ಇಂದು ರಾಜ್ಯ ನಾಗರಿಕರ ರಕ್ಷಣಾ ಸಮಿತಿಯ ವತಿಯಿಂದ ಶಿವಮೊಗ್ಗದ ರೋಟರಿ ರಕ್ತನಿಧಿಯಲ್ಲಿ ರಕ್ತದಾನವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಅಧ್ಯಕ್ಷೆ ಉಷಾ ಉತ್ತಪ್ಪ, ರಾಜ್ಯ ಉಪಾಧ್ಯಕ್ಷರಾದ ಕೆ. ಶೇಖರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ರಾಘವೇಂದ್ರ, ಖಜಾಂಚಿ ಶಿವಮೊಗ್ಗ ವಿನೋದ್, ರಾಜ್ಯ ಉಪಾಧ್ಯಕ್ಷರಾದ ರಮೇಶ್, ರಾಜ್ಯ ಕಾನೂನು ಸಲಹೆಗಾರರಾದ ಶಬರೀಶ್, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಹರೀಶ್, ಶಿವಮೊಗ್ಗ ನಗರ ಘಟಕದ ಉಪಾಧ್ಯಕ್ಷರಾದ ವೆಂಕಟೇಶ್, ನಗರ ಘಟಕದ ಸಹಕಾರ್ಯದರ್ಶಿ ಸತೀಶ್ ಮತ್ತು ಹರ್ಷಿತ್ ರಾಜೇಶ್ ರವಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post