ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಾಲೂಕಿನಲ್ಲಿ ತಾಳಗುಪ್ಪೆ ಗ್ರಾಮದಲ್ಲಿ ಅರಣ್ಯ ಪ್ರದೇಶದಲ್ಲಿ ಮಾಡಿಕೊಂಡಿದ್ದ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಈ ಪ್ರದೇಶದಲ್ಲಿ ಜಾನುವಾರು ನಿರೋಧಕ ಕಂದಕವನ್ನು ನಿರ್ಮಿಸಲಾಯಿತು.
ಈ ಕುರಿತಂತೆ ಮಾಹಿತಿ ನೀಡಿದ ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ, ಎಂ.ಆರ್. ಪಾಟೀಲ್ ವಕೀಲ್, ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಪರಸ್ಪರ ಸಮನ್ವಯತೆ ಮೂಲಕ ಭೂ ಮಂಜೂರಾತಿ ಅಥವಾ ಭೂ ಹಕ್ಕು ನೀಡುವ ಬಗ್ಗೆ ಅರ್ಥೈಸಿಕೊಂಡಿದ್ದರೆ ರೈತರ ಪಾಡು ಬೀದಿ ಪಾಲಾಗುತ್ತಿರಲಿಲ್ಲ ಎಂದಿದ್ದಾರೆ.
ಏನಿದು ವಿಚಾರ?
ಮಲೆನಾಡ ಸಾಗರ, ತೀರ್ಥಹಳ್ಳಿ, ಹೊಸನಗರ, ಸೊರಬ ಭಾಗದಲ್ಲಿ ಕಂದಾಯ ಕಾನುಗಳಿವೆ, ಅರಣ್ಯ ಇಲಾಖೆಯ ಕಾಡುಗಳೂ ಇವೆ. ಕಂದಾಯ ಇಲಾಖೆ ಈ ಹಿಂದೆ ಅರಣ್ಯ ಇಲಾಖೆಗೆ ಕಂದಾಯ ಅರಣ್ಯಗಳನ್ನು ಬಿಟ್ಟುಕೊಟ್ಟಿದೆಯಾದರೂ ಅರಣ್ಯ ಹಕ್ಕು ವಿಚಾರದಲ್ಲಿ ಇಲಾಖೆಗೆ ಸಂಪೂರ್ಣ ಹಕ್ಕು ಇಲ್ಲ. ಇತ್ತ ನಮ್ಮ ಆಡಳಿತ ಈ ಸಂದಿಗ್ಧತೆಯನ್ನು ಸರಿಪಡಿಸದೆ ಇರುವುದರಿಂದ ನಾವೇ ಆರಿಸಿದ ಜನಪ್ರತಿನಿಧಿಗಳು ಮನಸ್ಸಿಗೆ ಬಂದAತೆ ಹೇಳಿಕೆ ನೀಡಿ ಆ ಹೇಳಿಕೆ ಅನುಸರಿಸಿ ಭೂ ಸ್ವಾಧೀನ, ಕೃಷಿಗಾಗಿ ಅಕ್ರಮ ಸಕ್ರಮಕ್ಕೆ ಹೋದವರಿಗೆ ಯಾವುದೇ ಭದ್ರತೆ ಇಲ್ಲದಂತಾಗಿದೆ.
ಸದರಿ ಪ್ರದೇಶವನ್ನು ಸಮತಟ್ಟು ಮಾಡಿ ಸಸಿ ನೆಡಲು ಜೆಸಿಬಿ ಯಂತ್ರದ ಸಹಾಯದಿಂದ ಗುಂಡಿಗಳನ್ನು ತೆಗೆಯಲಾಯಿತು. ಅರಣ್ಯ ಪ್ರದೇಶದ ಸುತ್ತಲೂ ಜಾನುವಾರು ನಿರೋಧಕ ಕಂದಕವನ್ನು ನಿರ್ಮಿಸಿ ಸದರಿ ಪ್ರದೇಶವನ್ನು ಇಲಾಖಾ ಪರ ವಶಪಡಿಸಿಕೊಳ್ಳಲಾಯಿತು.
-ಪ್ರವೀಣ್ ಬಸ್ರೂರು, ಎಸಿಎಫ್
ಈಚೆಗೆ ಸೊರಬ ತಾಲ್ಲೂಕಿನ ತಾಳಗುಪ್ಪೆ ಗ್ರಾಮದ ಆರು ಜನ ಅರಣ್ಯ ಒತ್ತುವರಿದಾರರನ್ನು ಒತ್ತುವರಿಯಿಂದ ತೆರವುಗೊಳಿಸಿತು. ಸರ್ಕಾರಿ ಅಧಿಸೂಚನೆ ಸಂಖ್ಯೆ. ನಂ ಜಿ. 6886 ಎಫ್ ಟಿ 33-30-83, 05 ಜನವರಿ 1931 ರ ಪ್ರಕಾರ ತಾಳಗುಪ್ಪ ಸ.ನಂ.20 ರ ಒಟ್ಟು ವಿಸ್ತೀರ್ಣ 206 ಎಕರೆ 30 ಗುಂಟೆ ವಿಸ್ತೀರ್ಣದಲ್ಲಿ 180 ಎಕರೆ ವಿಸ್ತೀರ್ಣವನ್ನು ತಾಳಗುಪ್ಪ ಎಂಎಫ್ ಎಂದು ಮತ್ತು ಕೆರೆಹಳ್ಳಿ ಸ.ನಂ.85 ರ ಒಟ್ಟು ವಿಸ್ತೀರ್ಣ 134 ಎಕರೆ ಪ್ರದೇಶದಲ್ಲಿ 70 ಎಕರೆ ವಿಸ್ತೀರ್ಣವನ್ನು ತಾಳಗುಪ್ಪ ಎಂಎಫ್ ಪ್ರದೇಶವೆಂದು ಅಧಿಸೂಚನೆ ಹೊರಡಿಸಲಾಗಿತ್ತು. ಈ ಜಾಗದಲ್ಲಿ ಒಂದಿಷ್ಟು ಜನ ಅಕ್ರಮ ಒತ್ತೂವರಿ ಮಾಡಿದ್ದ ಬಗ್ಗೆ ಕರ್ನಾಟಕ ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು, ಆದೇಶದನ್ವಯ ಅರಣ್ಯ ಇಲಾಖೆ ಕಾನೂನು ರೀತ್ಯ ಅರಣ್ಯ ಭೂಮಿಯಲ್ಲಿದ್ದ ಅಡಿಕೆ ಮರಗಳನ್ನು ತೆರವುಗೊಳಿಸಿ ಸಿಪಿಟಿ ಮೂಲಕ ತನ್ನ ವಶಕ್ಕೆ ತೆಗೆದುಕೊಂಡಿದೆ.
Also read: ರಾಜ್ಯದ ನದಿಗಳ ಮೂಲ ಗುರುತಿಸಿ ಸಂರಕ್ಷಣೆ ನಿರ್ಧಾರ: ಜೀವವೈವಿಧ್ಯ ಮಂಡಳಿಗೆ ವೃಕ್ಷಲಕ್ಷ ಆಂದೋಲನ ಅಭಿನಂದನೆ
ತಾಳಗುಪ್ಪ ಸ.ನಂ.20 ರ ಅರಣ್ಯ ಪ್ರದೇಶದಲ್ಲಿನ ಒತ್ತುವರಿ ತೆರವುಗೊಳಿಸಲು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಿನಾಂಕ:20.03.2023 ರಂದು ಸ್ಥಳದಲ್ಲಿ ಹಾಜರಿದ್ದು, ಅಗತ್ಯ ಸಹಕಾರ ಒದಗಿಸಲು ಪೊಲೀಸ್ ಉಪಾಧೀಕ್ಷಕರು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಮೊದಲಾದವರು ಇದ್ದುಜಾಗದಲ್ಲಿ ಬೆಳೆದಿರುವ ಫಸಲು ಇಲ್ಲದಂತಹ ತೋಟಗಾರಿಕಾ ಬೆಳೆಗಳನ್ನು ಜೆಸಿಬಿ, ಹಿಟಾಚಿ ಹಾಗೂ ಮರಕೊಯ್ಯುವ ಯಂತ್ರದ ಸಹಾಯದಿಂದ ತೆರವು ಮಾಡಲಾಯಿತು.
ಅರಣ್ಯ ಕಾನೂನು ಹೇಳುವುದೇನು?
ಕರ್ನಾಟಕ ಅರಣ್ಯ ಕಾಯಿದೆ: ಸೆಕ್ಷನ್ 64 ಎ ಪ್ರಕಾರ ಕಾಯ್ದಿರಿಸಿದ ಅರಣ್ಯ, ಜಿಲ್ಲಾ ಅರಣ್ಯ, ಗ್ರಾಮ ಅರಣ್ಯ, ಸಂರಕ್ಷಿತ ಅರಣ್ಯ ಮತ್ತು ಅರಣ್ಯ ಇಲಾಖೆಯ ನಿಯಂತ್ರಣದಲ್ಲಿರುವ ಯಾವುದೇ ಇತರ ಭೂಮಿಯನ್ನು ಅಕ್ರಮವಾಗಿ ವಶಕ್ಕೆ ಪಡೆದವರ ವಿರುದ್ಧ ದಂಡದ ಜೊತೆಗೆ ಮರಳಿ ಭೂಮಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಅರಣ್ಯ ಇಲಾಖೆಗೆ ಅಧಿಕಾರವಿದೆ. ಅದೇ ರೀತಿ ರಾಜ್ಯ ಅರಣ್ಯ ಕಾಯಿದೆ 1963 ರ 73 ಡಿ ಪ್ರಕಾರ ಯಾವುದೇ ಅರಣ್ಯ ಅಥವಾ ತ್ಯಾಜ್ಯ ಭೂಮಿಯ ಯಾವುದೇ ಗಡಿ ಗುರುತುಗಳನ್ನು ಬದಲಾಯಿಸಿದರೆ, ನಾಶಪಡಿಸಿದರೆ ಅಥವಾ ವಿರೂಪಗೊಳಿಸಿದರೆ ಅಂತವನಿಗೆ ದಂಡ ಮತ್ತು ಜೈಲು ಶಿಕ್ಷೆ ನೀಡಬಹುದು ಎಂದು ಹೇಳಲಾಗಿದೆ.
(ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post