No Result
View All Result
SWR hubballi-railway-fire-safety-training-emergency
English Articles

Fire Safety Training Held for Railway Officials and Staff in Hubballi

by kalpa News
September 10, 2026
0

Kalpa Media House  |  Hubballi | A practical training programme on Fire Safety and Emergency Management was organised for railway...

Read moreDetails
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
  • Advertise With Us
  • Grievances
  • About Us
  • Contact Us
Thursday, September 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಅರಣ್ಯ ಪ್ರದೇಶ ಒತ್ತುವರಿ ತೆರವು: ತೋಟಗಳ ತೆರವು, ಜಾನುವಾರು ನಿರೋಧಕ ಕಂದಕ ನಿರ್ಮಾಣ

kalpa News by kalpa News
April 3, 2023
in ಶಿವಮೊಗ್ಗ
0
ಅರಣ್ಯ ಪ್ರದೇಶ ಒತ್ತುವರಿ ತೆರವು: ತೋಟಗಳ ತೆರವು, ಜಾನುವಾರು ನಿರೋಧಕ ಕಂದಕ ನಿರ್ಮಾಣ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |

ತಾಲೂಕಿನಲ್ಲಿ ತಾಳಗುಪ್ಪೆ ಗ್ರಾಮದಲ್ಲಿ ಅರಣ್ಯ ಪ್ರದೇಶದಲ್ಲಿ ಮಾಡಿಕೊಂಡಿದ್ದ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಈ ಪ್ರದೇಶದಲ್ಲಿ ಜಾನುವಾರು ನಿರೋಧಕ ಕಂದಕವನ್ನು ನಿರ್ಮಿಸಲಾಯಿತು.

ಈ ಕುರಿತಂತೆ ಮಾಹಿತಿ ನೀಡಿದ ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ, ಎಂ.ಆರ್. ಪಾಟೀಲ್ ವಕೀಲ್, ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಪರಸ್ಪರ ಸಮನ್ವಯತೆ ಮೂಲಕ ಭೂ ಮಂಜೂರಾತಿ ಅಥವಾ ಭೂ ಹಕ್ಕು ನೀಡುವ ಬಗ್ಗೆ ಅರ್ಥೈಸಿಕೊಂಡಿದ್ದರೆ ರೈತರ ಪಾಡು ಬೀದಿ ಪಾಲಾಗುತ್ತಿರಲಿಲ್ಲ ಎಂದಿದ್ದಾರೆ.
ಏನಿದು ವಿಚಾರ?
ಮಲೆನಾಡ ಸಾಗರ, ತೀರ್ಥಹಳ್ಳಿ, ಹೊಸನಗರ, ಸೊರಬ ಭಾಗದಲ್ಲಿ ಕಂದಾಯ ಕಾನುಗಳಿವೆ, ಅರಣ್ಯ ಇಲಾಖೆಯ ಕಾಡುಗಳೂ ಇವೆ. ಕಂದಾಯ ಇಲಾಖೆ ಈ ಹಿಂದೆ ಅರಣ್ಯ ಇಲಾಖೆಗೆ ಕಂದಾಯ ಅರಣ್ಯಗಳನ್ನು ಬಿಟ್ಟುಕೊಟ್ಟಿದೆಯಾದರೂ ಅರಣ್ಯ ಹಕ್ಕು ವಿಚಾರದಲ್ಲಿ ಇಲಾಖೆಗೆ ಸಂಪೂರ್ಣ ಹಕ್ಕು ಇಲ್ಲ. ಇತ್ತ ನಮ್ಮ ಆಡಳಿತ ಈ ಸಂದಿಗ್ಧತೆಯನ್ನು ಸರಿಪಡಿಸದೆ ಇರುವುದರಿಂದ ನಾವೇ ಆರಿಸಿದ ಜನಪ್ರತಿನಿಧಿಗಳು ಮನಸ್ಸಿಗೆ ಬಂದAತೆ ಹೇಳಿಕೆ ನೀಡಿ ಆ ಹೇಳಿಕೆ ಅನುಸರಿಸಿ ಭೂ ಸ್ವಾಧೀನ, ಕೃಷಿಗಾಗಿ ಅಕ್ರಮ ಸಕ್ರಮಕ್ಕೆ ಹೋದವರಿಗೆ ಯಾವುದೇ ಭದ್ರತೆ ಇಲ್ಲದಂತಾಗಿದೆ.

ಸದರಿ ಪ್ರದೇಶವನ್ನು ಸಮತಟ್ಟು ಮಾಡಿ ಸಸಿ ನೆಡಲು ಜೆಸಿಬಿ ಯಂತ್ರದ ಸಹಾಯದಿಂದ ಗುಂಡಿಗಳನ್ನು ತೆಗೆಯಲಾಯಿತು. ಅರಣ್ಯ ಪ್ರದೇಶದ ಸುತ್ತಲೂ ಜಾನುವಾರು ನಿರೋಧಕ ಕಂದಕವನ್ನು ನಿರ್ಮಿಸಿ ಸದರಿ ಪ್ರದೇಶವನ್ನು ಇಲಾಖಾ ಪರ ವಶಪಡಿಸಿಕೊಳ್ಳಲಾಯಿತು.
-ಪ್ರವೀಣ್ ಬಸ್ರೂರು, ಎಸಿಎಫ್

ಈಚೆಗೆ ಸೊರಬ ತಾಲ್ಲೂಕಿನ ತಾಳಗುಪ್ಪೆ ಗ್ರಾಮದ ಆರು ಜನ ಅರಣ್ಯ ಒತ್ತುವರಿದಾರರನ್ನು ಒತ್ತುವರಿಯಿಂದ ತೆರವುಗೊಳಿಸಿತು. ಸರ್ಕಾರಿ ಅಧಿಸೂಚನೆ ಸಂಖ್ಯೆ. ನಂ ಜಿ. 6886 ಎಫ್ ಟಿ 33-30-83, 05 ಜನವರಿ 1931 ರ ಪ್ರಕಾರ ತಾಳಗುಪ್ಪ ಸ.ನಂ.20 ರ ಒಟ್ಟು ವಿಸ್ತೀರ್ಣ 206 ಎಕರೆ 30 ಗುಂಟೆ ವಿಸ್ತೀರ್ಣದಲ್ಲಿ 180 ಎಕರೆ ವಿಸ್ತೀರ್ಣವನ್ನು ತಾಳಗುಪ್ಪ ಎಂಎಫ್ ಎಂದು ಮತ್ತು ಕೆರೆಹಳ್ಳಿ ಸ.ನಂ.85 ರ ಒಟ್ಟು ವಿಸ್ತೀರ್ಣ 134 ಎಕರೆ ಪ್ರದೇಶದಲ್ಲಿ 70 ಎಕರೆ ವಿಸ್ತೀರ್ಣವನ್ನು ತಾಳಗುಪ್ಪ ಎಂಎಫ್ ಪ್ರದೇಶವೆಂದು ಅಧಿಸೂಚನೆ ಹೊರಡಿಸಲಾಗಿತ್ತು. ಈ ಜಾಗದಲ್ಲಿ ಒಂದಿಷ್ಟು ಜನ ಅಕ್ರಮ ಒತ್ತೂವರಿ ಮಾಡಿದ್ದ ಬಗ್ಗೆ ಕರ್ನಾಟಕ ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು, ಆದೇಶದನ್ವಯ ಅರಣ್ಯ ಇಲಾಖೆ ಕಾನೂನು ರೀತ್ಯ ಅರಣ್ಯ ಭೂಮಿಯಲ್ಲಿದ್ದ ಅಡಿಕೆ ಮರಗಳನ್ನು ತೆರವುಗೊಳಿಸಿ ಸಿಪಿಟಿ ಮೂಲಕ ತನ್ನ ವಶಕ್ಕೆ ತೆಗೆದುಕೊಂಡಿದೆ.

Also read: ರಾಜ್ಯದ ನದಿಗಳ ಮೂಲ ಗುರುತಿಸಿ ಸಂರಕ್ಷಣೆ ನಿರ್ಧಾರ: ಜೀವವೈವಿಧ್ಯ ಮಂಡಳಿಗೆ ವೃಕ್ಷಲಕ್ಷ ಆಂದೋಲನ ಅಭಿನಂದನೆ
ತಾಳಗುಪ್ಪ ಸ.ನಂ.20 ರ ಅರಣ್ಯ ಪ್ರದೇಶದಲ್ಲಿನ ಒತ್ತುವರಿ ತೆರವುಗೊಳಿಸಲು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಿನಾಂಕ:20.03.2023 ರಂದು ಸ್ಥಳದಲ್ಲಿ ಹಾಜರಿದ್ದು, ಅಗತ್ಯ ಸಹಕಾರ ಒದಗಿಸಲು ಪೊಲೀಸ್ ಉಪಾಧೀಕ್ಷಕರು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಮೊದಲಾದವರು ಇದ್ದುಜಾಗದಲ್ಲಿ ಬೆಳೆದಿರುವ ಫಸಲು ಇಲ್ಲದಂತಹ ತೋಟಗಾರಿಕಾ ಬೆಳೆಗಳನ್ನು ಜೆಸಿಬಿ, ಹಿಟಾಚಿ ಹಾಗೂ ಮರಕೊಯ್ಯುವ ಯಂತ್ರದ ಸಹಾಯದಿಂದ ತೆರವು ಮಾಡಲಾಯಿತು.

ಅರಣ್ಯ ಕಾನೂನು ಹೇಳುವುದೇನು?
ಕರ್ನಾಟಕ ಅರಣ್ಯ ಕಾಯಿದೆ: ಸೆಕ್ಷನ್ 64 ಎ ಪ್ರಕಾರ ಕಾಯ್ದಿರಿಸಿದ ಅರಣ್ಯ, ಜಿಲ್ಲಾ ಅರಣ್ಯ, ಗ್ರಾಮ ಅರಣ್ಯ, ಸಂರಕ್ಷಿತ ಅರಣ್ಯ ಮತ್ತು ಅರಣ್ಯ ಇಲಾಖೆಯ ನಿಯಂತ್ರಣದಲ್ಲಿರುವ ಯಾವುದೇ ಇತರ ಭೂಮಿಯನ್ನು ಅಕ್ರಮವಾಗಿ ವಶಕ್ಕೆ ಪಡೆದವರ ವಿರುದ್ಧ ದಂಡದ ಜೊತೆಗೆ ಮರಳಿ ಭೂಮಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಅರಣ್ಯ ಇಲಾಖೆಗೆ ಅಧಿಕಾರವಿದೆ. ಅದೇ ರೀತಿ ರಾಜ್ಯ ಅರಣ್ಯ ಕಾಯಿದೆ 1963 ರ 73 ಡಿ ಪ್ರಕಾರ ಯಾವುದೇ ಅರಣ್ಯ ಅಥವಾ ತ್ಯಾಜ್ಯ ಭೂಮಿಯ ಯಾವುದೇ ಗಡಿ ಗುರುತುಗಳನ್ನು ಬದಲಾಯಿಸಿದರೆ, ನಾಶಪಡಿಸಿದರೆ ಅಥವಾ ವಿರೂಪಗೊಳಿಸಿದರೆ ಅಂತವನಿಗೆ ದಂಡ ಮತ್ತು ಜೈಲು ಶಿಕ್ಷೆ ನೀಡಬಹುದು ಎಂದು ಹೇಳಲಾಗಿದೆ.

(ಮಧುರಾಮ್, ಸೊರಬ)
Kalahamsa Infotech private limitedಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: KannadaNewsKannadaNewsLiveKannadaNewsOnline ShivamoggaKannadaNewsWebsiteKannadaWebsiteLatestNewsKannadaLocalNewsMalnadNewsNewsinKannadaNewsKannadaShimogaShivamoggaNewsಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ರಾಜ್ಯದ ನದಿಗಳ ಮೂಲ ಗುರುತಿಸಿ ಸಂರಕ್ಷಣೆ ನಿರ್ಧಾರ: ಜೀವವೈವಿಧ್ಯ ಮಂಡಳಿಗೆ ವೃಕ್ಷಲಕ್ಷ ಆಂದೋಲನ ಅಭಿನಂದನೆ

Next Post

ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ಗಜೇಂದ್ರಸ್ವಾಮಿ

kalpa News

kalpa News

Next Post
ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ಗಜೇಂದ್ರಸ್ವಾಮಿ

ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ಗಜೇಂದ್ರಸ್ವಾಮಿ

Leave a Reply Cancel reply

Your email address will not be published. Required fields are marked *

No Result
View All Result
SWR hubballi-railway-fire-safety-training-emergency
English Articles

Fire Safety Training Held for Railway Officials and Staff in Hubballi

by kalpa News
September 10, 2026
0

Kalpa Media House  |  Hubballi | A practical training programme on Fire Safety and Emergency Management was organised for railway...

Read moreDetails
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL