ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೋವಿಡ್ನಂತಹ ತುರ್ತು ಸಂದರ್ಭದಲ್ಲಿ ಜನರ ಜೀವ ಉಳಿಸಲು ಪ್ರಾಣವನ್ನು ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸಿದ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕೊರೋನಾ ವಾರಿಯರ್ಸ್ಗಳಾದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಸೇವೆ ಶ್ಲಾಘನೀಯವಾಗಿದ್ದು, ಅವರನ್ನು ಗೌರವಿಸುವುದು ದೇಶದ ನಾಗರಿಕರಾಗಿ ನಮ್ಮೆಲ್ಲರ ಕರ್ತವ್ಯ ಎಂದು ಆರ್ಎಸ್ಎಸ್ ಹಿರಿಯ ಮುಂಖಡರಾದ ಪಟ್ಟಾಭಿರಾಮ್ ಅವರು ಅಭಿಪ್ರಾಯಪಟ್ಟರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೋವಿಡ್ ಸಮಯದಲ್ಲಿ ಕರ್ತವ್ಯ ನಿರ್ವಹಿಸಿದ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಿಬ್ಬಂದಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತೀಯರಿಗೆ ಸೇವಾ ಮನೋಭಾವ ಪರಾಂಪರಿಕವಾಗಿ ರೂಢಿಯಲ್ಲಿರುವಂತಹದ್ದು. ಭಾರತ ವಿಶ್ವದ ಸೇವಾ ಕ್ಷೇತ್ರಕ್ಕೆ ಆತ್ಮವಿದ್ದಂತೆ. ನಮ್ಮ ಪೂರ್ವಜರು ನಿಸ್ವಾರ್ಥ ಸೇವೆ ಮತ್ತು ಕರ್ತವ್ಯ ನಿರ್ವಹಿಸಲು ಗಟ್ಟಿಯಾದ ಅಡಿಪಾಯವನ್ನು ಹಾಕಿ ಕೊಟ್ಟಿದ್ದಾರೆ. ಮನುಷ್ಯ ಆಧುನಿಕ ಜೀವನ ಪದ್ದತಿಯಲ್ಲಿ ಹಲವಾರು ಆವಿಷ್ಕಾರಗಳನ್ನು ಸಂಶೋಧಿಸಿದರೂ ಪ್ರಕೃತಿಯ ಗುಲಾಮನಾಗಿರಲೇ ಬೇಕಾಗುತ್ತದೆ ಎಂದರು.
ಮ್ಯಾಕ್ಸ್ ಆಸ್ಪತ್ರೆಯಲ್ಲಿ ವೈದ್ಯರು, ಶುಶ್ರೂಷಕರು, ತಾಂತ್ರಿಕ ಸಿಬ್ಬಂದಿಗಳು ತೋರಿದ ಬದ್ದತೆಗೆ ಕಾರಣ ಅಂತಹ ವಾತವಾರಣವನ್ನು ಆಸ್ಪತ್ರೆಯ ಸಮಿತಿ ರೂಪಿಸಿಕೊಟ್ಟಿದೆ ಎಂದರ್ಥ. ಸೋಂಕಿರತರನ್ನು ಕುಟುಂಬದ ಸದಸ್ಯರೇ ಕೀಳಾಗಿ ನೋಡುತ್ತಿದ್ದ ಸಂದರ್ಭದಲ್ಲಿ ಆರೋಗ್ಯ ಸೇವಾ ವೃತ್ತಿಯಲ್ಲಿರುವವರು ಕಾಳಜಿಯಿಂದ ಶುಶ್ರೂಷೆ ಮಾಡಿ ಗುಣಮುಖರಾಗಲು ಶ್ರಮಿಸಿದವರು ಯೋಧರಿದ್ದಂತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಸ್. ನಾಗೇಂದ್ರ ಅವರು ಮಾತನಾಡಿ, ಸಾಂಕ್ರಾಮಿಕ ಖಾಯಿಲೆ ಕೊರೋನಾ ವಿರುದ್ದ ಹೋರಾಡಲು ಅಗತ್ಯ ಪರಿಕರಗಳನ್ನು ಒದಗಿಸಲಾಗಿತ್ತು. ಹಗಲು ರಾತ್ರಿಗಳ ಪರಿವೇ ಇಲ್ಲದೇ ದಿನ ಪೂರ್ತಿ ರೋಗಿಗಳು ಗುಣಮುಖರಾಗಲು ತಮ್ಮ ಆಸ್ಪತ್ರೆಯ ತಂಡ ಶ್ರಮಿಸಿ ರೋಗಿಗಳ ಜೀವ ಉಳಿಸಲು ಸಮರೋಪಾದಿಯಲ್ಲಿ ಸೇವೆ ಸಲ್ಲಿಸಿದ ಕೊರೋನಾ ವಾರಿಯರ್ಸ್ಗೆ ಅಭಿನಂದನೆ ಸಲ್ಲಿಸಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ನಾರಾಯಣ ಪಂಜಿ ಅವರು ಮಾತನಾಡಿ, ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಾವಿರಾರು ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ಎಲ್ಲರನ್ನೂ ಗುಣಪಡಿಸಲು ಶಕ್ತಿ ಮೀರಿ ಶ್ರಮಿಸಿದ್ದೇವೆ. ಉತ್ತಮ ಚಿಕಿತ್ಸೆ ನೀಡಿ ರೋಗಿಗಳ ಜೀವವನ್ನು ಉಳಿಸಿದ್ದೇವೆ. ನಮ್ಮ ಸಿಬ್ಬಂದಿಗಳ ದಣಿವರಿಯದ ಪರಿಶ್ರಮದಿಂದ ಕೋವಿಡ್ನಂತಹ ಮಹಾಮಾರಿಯನ್ನು ದಿಟ್ಟವಾಗಿ ಎದುರಿಸಲು ಸಾಧ್ಯವಾಯಿತು ಎಂದರು.
ಆಸ್ಪತ್ರೆಯ ಅರಿವಳಿಕೆ ವಿಭಾಗ ಮುಖ್ಯಸ್ಥರಾದ ಡಾ.ಶಿವಕುಮಾರ್ ಅವರು ಮಾತನಾಡಿ, ಕೊರೋನಾ ಆರಂಭಿಕ ಹಂತದಲ್ಲಿ ರೋಗಿಗಳಿಗೆ ಹಾಗೂ ವೈದ್ಯರಿಗೆ ಅತಿ ಕ್ಲಿಷ್ಟಕರವಾದ ಸವಾಲನ್ನು ಒಡ್ಡಿತ್ತು. ಕೋವಿಡ್-19 ಸೋಂಕಿತರನ್ನು ಚಿಕಿತ್ಸೆಗೆ ಕರೆತರುವುದು ಕುಟುಂಬ ಸದಸ್ಯರಿಗೆ ಸವಾಲಿನ ಸಂಗತಿಯಾದರೆ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಆರೈಕೆ ಮಾಡುವುದು ಆಸ್ಪತ್ರೆಗಳಿಗೆ ಕಠಿಣ ಪರಿಸ್ಥಿಯಾಗಿ ಪರಿಣಮಿಸಿತ್ತು. 8-10 ಗಂಟೆಗಳ ಕಾಲ ಪಿಪಿಇ ಕಿಟ್ ಧರಿಸಿ ಕರ್ತವ್ಯ ನಿರ್ವಹಿಸುವಾಗ ಧೃಡವಾದ ಮನಸ್ಥಿತಿಯ ಅಗತ್ಯತೆ ಬೇಕಾಗುತ್ತದೆ. ರೆಮ್ಡಿಸೀಯರ್ನಂತಹ ಜೀವ ರಕ್ಷಕ ಔಷಧಿಗಳ ಅಲಭ್ಯತೆ, ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳುವುದು, ಸೇವೆ ಸಲ್ಲಿಸುವರಲ್ಲಿಯೇ ಕೋವಿಡ್ ಬಂದಂತಹ ಸಹ ಸಿಬ್ಬಂದಿಯ ಭಯ ಹೋಗಲಾಡಿಸುವುದು. ದಾಖಲಾದ ರೋಗಿಗಳಿಗೆ ಚಿಕಿತ್ಸೆ ಮಾತ್ರವಲ್ಲದೇ ಕಾಳಜಿಯ ಆರೈಕೆಯ ಜೊತೆ ಯೋಗ, ಧ್ಯಾನದಂತಹ ಚಟುವಟಿಕೆಗಳನ್ನು ಏರ್ಪಡಿಸಲಾಗುತ್ತಿತ್ತು ಎಂದು ತಿಳಿಸಿದರು.
ಅಭಿನಂಧನಾ ಸಮಾರಂಭದಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ಗೌರವ ಸನ್ಮಾನ ಕಾರ್ಯಕ್ರಮ ನೆರವೇರಿತು.
ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಲತಾ ನಾಗೇಂದ್ರ, ಡಾ.ವಿನಯ ಶ್ರೀನಿವಾಸ್, ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಬಿ.ಎಸ್. ಸುರೇಶ್, ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post