ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಗ್ಧ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಬದುಕಿನಲ್ಲಿ ಶಿಸ್ತು ಅತ್ಯವಶ್ಯಕವಾಗಿ ಹೇಳಿಕೊಡುವುದರ ಜೊತೆಗೆ ನೋವು ನಲಿವುಗಳ ಅರಿವನ್ನು ಮೂಡಿಸಬೇಕಿದೆ. ಮಕ್ಕಳು ಸಾಮಾಜಿಕ ದುಶ್ಚಟಗಳಿಂದ ದೂರವಿರುವಂತೆ ಬದುಕಿನ ಪಾಠ ಹೇಳಿಕೊಡಬೇಕಿದೆ ಎಂದು ಪಿಇಎಸ್ ಟ್ರಸ್ಟ್, ಟ್ರಸ್ಟೀ, ಜನ ಶಿಕ್ಷಣ ಸಂಸ್ಥೆ, ನಿರ್ದೇಶಕರು ಎಸ್.ವೈ. ಅರುಣಾದೇವಿ ಹೇಳಿದರು.
ಪಿಇಎಸ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಪ್ರೇರಣೋತ್ಸವ 2025-26ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳು ಸೋಶಿಯಲ್ ಮೀಡಿಯಾಗಳಲ್ಲಿ ಮುಳುಗಿ ಹೋಗಿದ್ದಾರೆ ಹಾಗೂ ಚಾಟ್ ಜಿಪಿಟಿಯಲ್ಲಿ ತೇಲುತ್ತಿದ್ದಾರೆ. ಮಕ್ಕಳ ನಿಜವಾದ ಕೌಶಲ್ಯತೆ ಹೊರಬರಬೇಕಿದೆ ಅದಕ್ಕೆ ನೇರವಾಗಿ ಶಿಕ್ಷಕರ ಹಾಗೂ ಪೋಷಕರ ಜವಾಬ್ದಾರಿಯಾಗಿದೆ. ಮಕ್ಕಳು ದೇಶದ, ಸಮಾಜದ ಉತ್ತಮ ಆಸ್ತಿಯಾಗಬೇಕಾದರೆ ನೈತಿಕ ಶಿಕ್ಷಣವೇ ಅಡಿಗಲ್ಲು ಅದಕ್ಕೆ ಪ್ರೇರಣೆಯಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳೇ ಮೆರುಗು ಎಂದು ತಿಳಿಸಿದರು.
ಇಂದಿನ ಸಾಮಾಜಿಕ ಪರಿಸರದಲ್ಲಿ ಮಕ್ಕಳಲ್ಲಿ ಸಂಸ್ಕಾರ ಮೂಡಿಸಲು, ದೇಶಪ್ರೇಮ, ಏಕಲವ್ಯನ ನಿಷ್ಠೆ, ಶ್ರದ್ಧೆ, ಕರ್ಣನ ತ್ಯಾಗ, ಹನುಮಂತನ ಸ್ವಾಮಿ ಭಕ್ತಿ, ಶ್ರೇಷ್ಠ ವ್ಯಕ್ತಿಗಳ ಚರಿತ್ರೆಗಳನ್ನು ಅತ್ಯಂತ ರೋಮಾಂಚನಕಾರಿಯಾಗಿ ಪ್ರದರ್ಶಿಸಿ ನೆರೆದಿರುವ ಪ್ರೇಕ್ಷಕರನ್ನು, ಪೋಷಕರನ್ನು ಪ್ರೇರಣೋತ್ಸವ ಮಂತ್ರಮುಗ್ಧರನ್ನಾಗಿಸಿತು.
ಪೋಷಕರಿಂದ ಮಕ್ಕಳಿಗೆ ಉತ್ತಮ ಪ್ರತಿಕ್ರಿಯೆ ದೊರೆತು ಕಾರ್ಯಕ್ರಮ ಯಶಸ್ವಿಯಾಯಿತು. ಸುಮಾರು 5000 ಕ್ಕೂ ಹೆಚ್ಚಿನ ಪೋಷಕರು ಭಾಗವಹಿಸಿದ್ದರು. ಪಿಇಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥರುಗಳು, ಶಿಕ್ಷಕರು, ಶಿಕ್ಷಕೇತರ ವರ್ಗದವರು, ತಾಂತ್ರಿಕ ವರ್ಗದವರು, ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















