ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೈಸೂರು ಬ್ಯಾಂಕ್ ನಿವೃತ್ತ ನೌಕರರ ಸಂಘದ ವತಿಯಿಂದ ಜ. 16 ರಂದು ಬೆಳಗ್ಗೆ 10-30ಕ್ಕೆ ಸರ್ಕಾರಿ ನೌಕರರ ಭವನದಲ್ಲಿ ಬ್ಯಾಂಕಿನ ನಿವೃತ್ತ ನೌಕರರಿಗೆ ಹಾಗೂ ಹಿರಿಯ ನಾಗರೀಕರಿಗೆ ಆಯುಷ್ಮಾನ್ ಭಾರತ್ ಕಾರ್ಡ್ ಅನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಟಿ. ಶ್ರೀನಿವಾಸ್ ರಾವ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬ್ಯಾಂಕಿನ ನಿವೃತ್ತ ನೌಕರರ ನ್ಯಾಯಯುತ ಸೌಲಭ್ಯ ಹಾಗೂ ಅವರ ಉತ್ತಮ ಜೀವನ ನಿರ್ವಹಣೆಯ ಸೌಲಭ್ಯದ ಲಭ್ಯತೆಗೆ ಸಹಕಾರಿಯಾಗಿ ಸಂಘ ಕೆಲಸ ಮಾಡುತ್ತಿದೆ. ನಿವೃತ್ತರಿಗೆ ಕಾಲ ಕಾಲಕ್ಕೆ ವೈದ್ಯಕೀಯ ತಪಾಸಣೆ, ನುರಿತ ವೈದ್ಯರಿಂದ ಆರೋಗ್ಯ ಬಗ್ಗೆ ಉಪನ್ಯಾಸ, ಎಲ್ಲ ಜನತೆಯ ಮನೋ ಉಲ್ಲಾಸದ ಕಾರ್ಯಕ್ರಮದ ಭಾಗವಾಗಿ ಸಾಂಸ್ಕøತಿಕ , ಸಂಗೀತ ಕಾರ್ಯಕ್ರಮಗಳ ಆಯೋಜನೆ ಮತ್ತು ಹಲವು ಸಂಘಟನೆಯ ಕಾರ್ಯಕ್ರಮಗಳಲ್ಲಿ ನೇರವಾಗಿ ನೆರವಾಗುತ್ತಾ ಭಾಗಿಯಾಗುತ್ತದೆ ಎಂದರು.
Also Read: ಶಿವಮೊಗ್ಗ | ಜ.14ರಂದು ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ
ನೂರು ವರ್ಷಕ್ಕೂ ಹೆಚ್ಚು ಕಾಲ ರಾಜ್ಯದ ಜನಮನದ ಬ್ಯಾಂಕ್ ಆದ ಮತ್ತು ಮೈಸೂರು ಬ್ಯಾಂಕ್ ಎಂದೇ ಪ್ರಸಿದ್ದಿಯಾಗಿ 2017 ರಲ್ಲಿ ಎಸ್. ಬಿ. ಐ ನಲ್ಲಿ ಮಿನಲಗೊಂಡ ಹೆಮ್ಮೆಯ ಸಂಸ್ಥೆಯ ನನೆನಪನ್ನು ಹಸಿರಾಗಿಡುವಲ್ಲಿ ಶ್ರಮಿಸುತ್ತಿದೆ. ಇದರ ಅಂಗವಾಗಿಯೇ ನಿವೃತ್ತ ನೌಕರರಿಗೆ ಆಯುಷ್ಮಾನ್ ಕಾರ್ಡ್ ಅನ್ನು ನೀಡಲಾಗುತ್ತಿದೆ ಎಂದರು.
ಅಂದಿನ ಸಮಾರಂಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್. ಎನ್, ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಡಿ. ಎಸ್. ಅರುಣ್, ಮೈಸೂರು ಬ್ಯಾಂಕ್ ನೌಕರರ ಸಂಘಟನೆಯ ಕೇಂದ್ರ ಕಚೇರಿಯ ಪ್ರಧಾನ ಕಾರ್ಯದರ್ಶಿ ಸಿ.ಎನ್. ಪ್ರಸಾದ್ ಉಪಸ್ಥಿತರಿರುವರು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಪ್ರಮುಖರಾದ ಹೆಚ್. ಎಂ. ಶ್ರೀನಿವಾಸ್ ಪುರಾಣಿಕ್, ಎಸ್. ಶಿವಮೂರ್ತಿ, ಆನಂದ ಮೂರ್ತಿ, ಹೆಚ್.ಎಸ್. ಮಂಜುನಾಥ್, ಕೆ.ಜಿ. ಕೃಷ್ಣಾನಂದ, ಗುರುಮೂರ್ತಿ ಜೋಯಿಸ್, ಎಂ.ಪಿ. ವೀರಭದ್ರಪ್ಪ, ಲಕ್ಷ್ಣಣ್ ಶೆಟ್ಟಿ ಮತ್ತು ಗುರುರಾಜ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 















