ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಜರಂಗದಳದ ಕಾರ್ಯಕರ್ತ ಹರ್ಷನ ಭೀಕರ ಹತ್ಯೆ #Bajarangadala activist harsha murder ಇಡಿಯ ಹಿಂದೂ ಸಮಾಜಕ್ಕೆ ನೋವು ಉಂಟು ಮಾಡಿದ್ದು, ಘಟನೆ ಪರಿಣಾಮ ಶಿವಮೊಗ್ಗದಲ್ಲಿ ಇಂದು ಅಹಿತಕರ ಘಟನೆ ನಡೆದಿದೆ.
ನಿನ್ನೆ ರಾತ್ರಿ ಹಳೇ ಶಿವಮೊಗ್ಗ ಭಾಗದ ಕೆಲವು ಪ್ರದೇಶಗಳಲ್ಲಿ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚಿದ ಪ್ರಕರಣಗಳು ನಡೆದಿದ್ದು, ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.
ಆದರೆ, ಇಂದು ಮುಂಜಾನೆ ಹರ್ಷನ ಪಾರ್ಥಿವ ಶರೀರದ ಮೆರವಣಿಗೆ ವೇಳೆ ತೀರ್ಥಹಳ್ಳಿ ರಸ್ತೆಯಲ್ಲಿ ಕಲ್ಲು ತೂರಾಟ ನಡೆಯಿತು. ನಂತರ ಆತನ ನಿವಾಸದಿಂದ ಹೊರಟ ಅಂತಿಮ ಮೆರವಣಿಗೆ ಸಿದ್ದಯ್ಯ ರಸ್ತೆ ತಲುಪುತ್ತಿದ್ದಂತಯೇ ಮತ್ತೆ ಏಕಾಏಕಿ ಕಲ್ಲು ತೂರಾಟ ನಡೆದಿದ್ದು, ಪರಿಸ್ಥಿತಿ ಕೈಮೀರುವ ಹಂತ ತಲುಪಿತ್ತು. ಈ ಹಂತದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ, ಟಿಯರ್ ಗ್ಯಾಸ್ ಸಹ ಸಿಡಿಸಿದ್ದರು. ಆದರೆ, ಇದು ಯಾವುದಕ್ಕೂ ಕಿಡಿಗೇಡಿಗಳು ಲೆಕ್ಕಿಸದ ಹಿನ್ನೆಲೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಇದು ಓರ್ವನ ತೊಡೆಗೆ ಹೊಕ್ಕಿದೆ. ಸದ್ಯ ಪರಿಸ್ಥಿತಿ ಮಿತಿ ಮೀರುವ ಹಂತ ತಲುಪಿದೆ.
Also read: ಶಿವಮೊಗ್ಗದಲ್ಲಿ ಕೈಮೀರುತ್ತಿರುವ ಪರಿಸ್ಥಿತಿ ನಿಯಂತ್ರಣಕ್ಕೆ ಗಾಳಿಯಲ್ಲಿ ಗುಂಡು
ಅತ್ಯಂತ ಪ್ರಮುಖವಾಗಿ ಭಾವೋದ್ವೇಗಕ್ಕೆ ಒಳಗಾಗಿರುವ ಎರಡೂ ಕಡೆಯ ಗುಂಪುಗಳ ಉದ್ರಿಕ್ತರು ಕಲ್ಲು ತೂರಾಟ, ಸಿಕ್ಕಸಿಕ್ಕಲ್ಲಿ ಬೆಂಕಿ ಹಚ್ಚುವ ಕೃತ್ಯಗಳಲ್ಲಿ ತೊಡಗಿರುವುದು ನಿಜಕ್ಕೂ ಖಂಡನೀಯ ವಿಚಾರ.
ಹರ್ಷನ ಹತ್ಯೆಯಾಗಿರುವುದು ಇಡಿಯ ಹಿಂದೂ ಸಮಾಜಕ್ಕೆ ನೋವಿನ ಸಂಗತಿ ಎಂಬುದು ಸತ್ಯ. ಆದರೆ, ಇದರ ಹಿನ್ನೆಲೆಯಲ್ಲಿ ಗಲಭೆ ಸೃಷ್ಠಿಸಿ, ಸಾರ್ವಜನಿಕರಿಗೆ ತೊಂದರೆ ನೀಡುವುದು, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡುವುದು ನಾಗರಿಕ ಸಮಾಜಕ್ಕೆ ಶೋಭೆಯಲ್ಲ.
ನಮ್ಮ ಸಮಾಜದಲ್ಲಿ ಸಾಂವಿಧಾನಿಕವಾಗಿ ಒಂದು ಸರ್ಕಾರವಿದೆ, ನ್ಯಾಯಾಂಗ ವ್ಯವಸ್ಥೆಯಿದೆ, ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಯಿದೆ. ಹರ್ಷನನ್ನು ಹತ್ಯೆ ಮಾಡಿದ ದುಷ್ಕರ್ಮಿಗಳಲ್ಲಿ ಈಗಾಗಲೇ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದವರಿಗಾಗಿ ಹುಡುಕಾಟ ನಡೆದಿದೆ. ಎಲ್ಲರನ್ನೂ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ, ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳುತ್ತಾರೆ. ಇದಕ್ಕೆ ಕೊಂಚ ಸಮಯ ಹಿಡಿಯುತ್ತದೆ. ದಯಮಾಡಿ ಕಾನೂನಿನಲ್ಲಿ ನಂಬಿಕೆಯಿಡಿ.
Also read: ಸಿದ್ಧಯ್ಯ ರಸ್ತೆಯಲ್ಲಿ ಮೆರವಣಿಗೆ ವೇಳೆ ಮತ್ತೆ ಕಲ್ಲು ತೂರಾಟ: ಪರಿಸ್ಥಿತಿ ನಿಯಂತ್ರಣಕ್ಕೆ ಟಿಯರ್ ಗ್ಯಾಸ್ ಬಳಕೆ
ಶಿವಮೊಗ್ಗ ನಮ್ಮ ಅಮೂಲ್ಯ ಆಸ್ತಿ. ನೀವುಗಳು ಬೆಂಕಿ ಹಚ್ಚುವುದು, ಕಲ್ಲು ತೂರುವುದು ಮಾಡುವುದರಿಂದ ನಮ್ಮ ಆಸ್ತಿಯನ್ನು ನಾವೇ ಹಾಳು ಮಾಡಿಕೊಂಡಂತೆ ಆಗುತ್ತದೆ. ಎಲ್ಲಕ್ಕೂ ಮಿಗಿಲಾಗಿ ಭಾವೋದ್ವೇಗಕ್ಕೆ ಒಳಗಾಗಿ ಪ್ರತಿಕ್ರಿಯೆ ನೀಡುವುದು ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದನ್ನು ಮರೆಯಬೇಡಿ.
ಯಾರೋ ಹಿಂದೆ ನಿಂತು ಪ್ರಚೋದಿಸುತ್ತಾರೆ ಎಂದು ಸಾಮಾನ್ಯ ಕಾರ್ಯಕರ್ತರು, ಜನರು ಅಹಿತಕರ ಘಟನೆಯಲ್ಲಿ ತೊಡಗುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆಯೇ ಹೊರತು, ಬೇರೇನೂ ಸಾಧನೆಯಾಗುವುದಿಲ್ಲ. ನೀವುಗಳು ಇಂತಹ ಗಲಭೆ ಸೃಷ್ಠಿಸುವುದರಿಂದ ಹರ್ಷ ವಾಪಾಸ್ಸು ಬರುವುದಿಲ್ಲ ಹಾಗೂ ಆರೋಪಿಗಳಿಗೆ ಶಿಕ್ಷೆಯೂ ಆಗುವುದಿಲ್ಲ. ಬದಲಾಗಿ, ತಾಳ್ಮೆ ಹಾಗೂ ಶಾಂತಿಯುತವಾಗಿ ವರ್ತಿಸಿ ಪೊಲೀಸರೊಂದಿಗೆ ಸಹಕಾರ ನೀಡಿ ಕಾನೂನು ಸುವ್ಯವಸ್ಥೆ ಕಾಪಾಡಲು ಕೈಜೋಡಿಸಿ.
ನೆನಪಿಡಿ… ನೀವುಗಳು ಇದೇ ರೀತಿ ಅಹಿತಕರ ಘಟನೆಗಳಲ್ಲಿ ತೊಡಗಿಕೊಳ್ಳುತ್ತಲೇ ಇದ್ದರೆ, ಇದರ ನಿಯಂತ್ರಣಕ್ಕೆ ಈಗಾಗಲೇ ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನೀವುಗಳು ಶಾಂತಿ ಕಾಪಾಡದೇ ಇದ್ದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರಿಗೆ ಮುಂದಿನ ಕ್ರಮಗಳು ಅನಿವಾರ್ಯವಾಗುತ್ತವೆ. ದಯಮಾಡಿ ಪೊಲೀಸರಿಗೆ ಅಂತಹ ಮುಂದಿನ ಕ್ರಮದವರೆಗೂ ಅವಕಾಶ ನೀಡಬೇಡಿ. ಅದರಿಂದ ತೊಂದರೆಯಾಗುವುದು ಸಾರ್ವಜನಿಕರಿಗೆ ಎಂಬುದು ನೆನಪಿನಲ್ಲಿರಲಿ.
ಅಂತಿಮವಾಗಿ ಇಂತಹ ಅಹಿತಕರ ಘಟನೆಗಳಿಂದ ತೊಂದರೆ ಅನುಭವಿಸುವುದು ಜನ ಸಾಮಾನ್ಯರು, ವ್ಯಾಪಾರಸ್ತರು, ಬೀದಿ ಬದಿ ವ್ಯಾಪಾರಸ್ತರು ಹಾಗೂ ಅಂದಿನ ಅನ್ನವನ್ನು ಅಂದೇ ದುಡಿದು ತಿನ್ನುವ ಅಸಹಾಯಕರು ಎಂಬುದನ್ನು ಮರೆಯಬೇಡಿ.
Also read: ನಿಮಗಿಂತ ಜಾಸ್ತಿ ನನಗೆ ಸಿಟ್ಟಿದೆ, ನೀವು ಹೇಳಿದಂತೆ ಎನ್’ಕೌಂಟರ್ ಮಾಡೋಕಾಗಲ್ಲ: ಈಶ್ವರಪ್ಪ ಖಡಕ್ ಮಾತು
ಅಲ್ಲದೇ, ಊಹಾಪೋಹಗಳು, ಪೂರ್ವಗ್ರಹ ಪೀಡಿತ ಪೋಸ್ಟ್ ಹಾಗೂ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು ಹಾಗೂ ಶೇರ್ ಮಾಡುವ ಮುನ್ನ ನೂರು ಬಾರಿ ಯೋಚಿಸಿ…
ದಯಮಾಡಿ ಶಾಂತಿ ಕಾಪಾಡಿ, ಕಾನೂನು ಸುವ್ಯವಸ್ಥೆ ನಿಯಂತ್ರಿಸಲು ಸರ್ಕಾರ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದಿಗೆ ಸಹಕಾರ ನೀಡಿ. ಆ ಮೂಲಕ ನಗರದಲ್ಲಿ ಶಾಂತಿ ನೆಲೆಸಲು ಸಹಕರಿಸಿ ಎಂಬುದು ಕಲ್ಪ ಮೀಡಿಯಾ ಹೌಸ್ #Kalpa media house ಮನವಿ ಹಾಗೂ ಕಳಕಳಿ….
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post