ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯುವಶಕ್ತಿ ದೊಡ್ಡ ಸಂಖ್ಯೆಯಲ್ಲಿದ್ದು, ದೇಶಕ್ಕೆ ರಾಜ ಆದರೂ ತಾಯಿಗೆ ಮಗನೇ. ಮೋದಿ ಕೃತಜ್ಞತೆ ಸಲ್ಲಿಸಲು ಅವಕಾಶ ನಾನು ನಿಮಿತ್ತ ಮಾತ್ರ, ಈ ಚುನಾವಣೆ, ಅದನ್ನು ಬಳಸಿಕೊಳ್ಳೋಣ ಎಂದು ಸಂಸದ, ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ #B Y Raghavendra ಕರೆ ನೀಡಿದರು.
ಈ ಕುರಿತಂತೆ ಮಾತನಾಡಿದ ಅವರು, ಮೊದಲ ಹಂತದ ಚುನಾವಣೆಯಲ್ಲಿ ಮನೆಯಿಂದ ಮತ ಚಲಾಯಿಸಲು ಹುಣಸೂರಿಗೆ ಕಳಿಸಿದ್ದರು. ಆದರೆ ಬೂತ್ ಬಂದು ವೋಟ್ ಹಾಕಿದ್ದಾರೆ. ಯುವಶಕ್ತಿ ದೊಡ್ಡ ಸಂಖ್ಯೆ ಇದ್ದಾರೆ. ಬೆಂಗಳೂರು 52 ರಷ್ಟು ಮಾತ್ರ ಮತದಾನ ಆಗಿದೆ. ಜವಾಬ್ದಾರಿಯಿಂದ ಮತದಾನ ಮಾಡಬೇಕಾಗಿದೆ ಎಂದರು.
ಕೋಟೆಗಂಗೂರು 100 ಕೋಟಿ ರೂ. ಕೋಚಿಂಗ್ ಡಿಪೋ ಆಗುತ್ತಿದೆ. ಜೋಗ, ಕೊಡಚಾದ್ರಿ ಕೇಬಲ್ ಕಾರು ಬರುತ್ತಿದ್ದು, ಸಿಗಂಧೂರು ಸೇತುವೆ 450 ಕೋಟಿ. ಕಾಂಗ್ರೆಸ್ ಬಡತನ ಮಾತ್ರ ಪ್ರೀತಿ. ಬಡವರನ್ನಲ್ಲ. ಬಡತನ ಇದ್ದಷ್ಟೂ ಒಳ್ಳೆಯದು ಅಂತ ಕಾಂಗ್ರೆಸ್ ಭಾವನೆ ಎಂದರು.
Also read: 28 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ, ಒಂದೆರೆಡು ವ್ಯತ್ಯಾಸ ಆಗಬಹುದು | ಬಿ.ಎಸ್. ಯಡಿಯೂರಪ್ಪ
280 ಕೋಟಿ ಬಡವರ ಚಿಕಿತ್ಸೆಗೆ ಹಣ ಕೇಂದ್ರ ಸರ್ಕಾರ ಭರಿಸಿದೆ. ಭದ್ರಾವತಿ ಎಫ್’ಎಂ ರೇಡಿಯೋ ಯಶಸ್ವಿ. 10 ಕೋಟಿ ಟ್ರಾನ್ಸಿಸ್ಟರ್ ಫ್ರಾನ್ಸ್ ದೇಶದಿಂದ ಬರುತ್ತಿದೆ. ಎಲ್ಲಾ ವಿಷಯಗಳಿಗೆ ಆದ್ಯತೆ ಕೊಡಲಾಗಿದೆ. 250 ಬಿಎಸ್’ಎನ್’ಎಲ್ ಟವರ್ ನಿರ್ಮಾಣ ನಡೆದಿದೆ. ತಿರುಪತಿ, ಚೆನ್ನೈ, ಬೆಂಗಳೂರು ವಿಮಾನ ಹಾರಾಟ ನಡೆದಿದೆ. 46,009 ಜನ ಸಂಚಾರ ಮಾಡಿದ್ದಾರೆ ಎಂದರು.
ತುಷ್ಟಿಕರಣ ರಾಜಕಾರಣ ಕಾಂಗ್ರೆಸ್, ಹುಬ್ಬಳ್ಳಿ ನೇಹಾ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ. ಕೊಲೆ ಆದಾಗ ಸಿಎಂ, ಡಿಸಿಎಂ ಹೋಗಿ ಸಾಂತ್ವನ ಹೇಳಲಿಲ್ಲ. ಬಿಜೆಪಿ ನಡ್ಡಾ, ವಿಜಯೇಂದ್ರ, ಕೇಂದ್ರ ಸಚಿವರು ಹೋಗಿ ಬಂದರು ಎಂದು ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post