No Result
View All Result
Yogada Satsang Society brings out Kannada version on Kriya Yoga today
English Articles

Yogada Satsang Society brings out Kannada version on Kriya Yoga today

by ಕಲ್ಪ ನ್ಯೂಸ್
March 25, 2026
0

Kalpa Media House  |  Dharwad  | Yogada Satsang Society of India has brought out the Kannada version of Kriya Yoga...

Read moreDetails
Sagara Engulfed In The Ocean of Music

Sagara Engulfed In The Ocean of Music

March 23, 2026
MAHE Introduces ‘MAGIC’ to Power AI-Driven Academic and Administrative Transformation

MAHE Introduces ‘MAGIC’ to Power AI-Driven Academic and Administrative Transformation

March 23, 2026
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

March 18, 2026
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
  • Advertise With Us
  • Grievances
  • About Us
  • Contact Us
Friday, March 27, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಡಾ. ಮೈತ್ರೇಯಿ ಅವರಿಗೆ ಸಂಸ್ಕೃತ ವಿವಿಯ ಗ್ರಂಥ ಪುರಸ್ಕಾರ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 5, 2026
in ಶಿವಮೊಗ್ಗ
0
ಡಾ. ಮೈತ್ರೇಯಿ ಅವರಿಗೆ ಸಂಸ್ಕೃತ ವಿವಿಯ ಗ್ರಂಥ ಪುರಸ್ಕಾರ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |

ನಗರದ ಪೇಸ್ ಪಿಯು ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಡಾ. ಮೈತ್ರೇಯಿ ಆದಿತ್ಯಪ್ರಸಾದ್ ರಚಿಸಿದ ಶ್ರೀ ವಾದಿರಾಜ ತೀರ್ಥಪ್ರಬಂಧ ಸಂಶೋಧನಾ ಲೇಖನವು ಕರ್ನಾಟಕ ಸಂಸ್ಕೃತ ವಿವಿಯಿಂದ ನೀಡಲಾಗುವ ಸಂಸ್ಕೃತ ಗ್ರಂಥ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ಸಂಸ್ಕೃತದಲ್ಲಿ ವಿರಳ. ಆದರಲ್ಲೂ ತಾತ್ವಿಕ ಹಿನ್ನೆಲೆಯುಳ್ಳ ಕೃತಿ ಎಂದರೆ ಆದು ದುರ್ಲಭವೇ ಸರಿ. ಅಂತಹ ತಾತ್ವಿಕ ಹಿನ್ನೆಲೆಯುಳ್ಳ ಸಂಸ್ಕೃತ ಪ್ರವಾಸ ಸಾಹಿತ್ಯ ಕೃತಿ ಎಂದರೆ ಅದು ಈ “ತೀರ್ಥಪ್ರಬಂಧ”. ಅದನ್ನು ಶ್ರೀವಾದಿರಾಜರು ನೂರಾರು ವರ್ಷಗಳ ಹಿಂದೆ ಭಾರತೀಯ ಇತಿಹಾಸದಲ್ಲಿ ಪ್ರಥಮವಾಗಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಅದ್ಭುತವಾದ ಗ್ರಂಥ ‘ರಚಿಸಿದ್ದಾರೆ. ಈ ಗ್ರಂಥದಲ್ಲಿ ವಾದಿರಾಜರು ಬೇರೆಬೇರೆ ಕ್ಷೇತ್ರಗಳ ಮಹತ್ವದ ಬಗ್ಗೆ ಹೇಳಿದ್ದಾರೆ.
ಮಾನವ ತನ್ನ ಜೀವಮಾನದಲ್ಲಿ ಯಾತ್ರೆ ಮಾಡಬೇಕು ಎಂಬುದಿದೆ. ಅದು ಭಗವಂತನ ಸನ್ನಿಧಾನವನ್ನು ನೋಡುವ ತವಕದಿಂದ ಮಾಡುವ ಯಾತ್ರೆಯಾಗಿರಬೇಕು. ಅಲ್ಲಿ ಭಗವಂತನ ಮಹಿಮೆಯನ್ನ ತಿಳಿಯುವುದು ಮುಖ್ಯವಾಗುತ್ತವೆ. ಈ ತೀರ್ಥಪ್ರಬಂಧದಲ್ಲಿ ಶ್ರೀವಾದಿರಾಜರು ಭಗವಂತನ ಮಹಿಮೆಯನ್ನು ತಿಳಿಯುವ ಶ್ಲೋಕಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ಯಾತ್ರಿಕ ಆಯಾಯ ಕ್ಷೇತ್ರಗಳ ಮಹಿಮೆಯನ್ನು ತಿಳಿದು ಯಾತ್ರೆ ಮಾಡುವುದರಿಂದ ಭಗವಂತನಲ್ಲಿ ಅನುಸಂಧಾನ ಹೊಂದಲು ಬಹಳ ಅನುಕೂಲವಾಗುತ್ತದೆ ಎಂಬುದು ಶಾಸ್ತ್ರವಚನ. ಈ ದೊಡ್ಡ ಕೆಲಸವನ್ನು ಮಾಡಿದವರು ಶ್ರೀವಾದಿರಾಜರು.

ಒಬ್ಬ ಮನುಷ್ಯ ಭೌತಿಕವಾಗಿ ಒಮ್ಮೆ ಯಾತ್ರೆ ಹೋದರೆ ಮುಂದೆ ದಿನನಿತ್ಯವೂ ಮಾನಸಿಕವಾಗಿ ಕ್ಷಣಮಾತ್ರದಲ್ಲಿ ಯಾತ್ರೆ ಹೋಗಲು ಸಾಧ್ಯ. ಹಾಗಾಗಿ ಪ್ರತಿನಿತ್ಯವೂ ಈ ಮಾನಸ ಯಾತ್ರೆಯನ್ನು ಮಾಡಲೂ ಈ ಗ್ರಂಥ ಪೂರಕವಾಗಿದೆ. ಶ್ರೀವಾದಿರಾಜರು ಇದನ್ನು ಕೇವಲ ಮನೋರಂಜನೆಗಾಗಿರದೇ ಆಧ್ಯಾತ್ಮಿಕವಾದ ಮಹತ್ವವನ್ನು ಹೇಳುವುದರ ಮೂಲಕ ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ ಮನುಷ್ಯ ತನ್ನ ಜೀವನದಲ್ಲಿ ಯಾತ್ರೆಯನ್ನು ಹೇಗೆ ಸಫಲಗೊಳಿಸುವುದು ಎಂದು ತಿಳಿಸಲು ಉದಾಹರಣೆಯಾಗಿ ಇರುವಂತಹುದು ಈ ತೀರ್ಥಪ್ರಬಂಧ. ತೀರ್ಥಕ್ಷೇತ್ರಗಳಲ್ಲಿ ಸಂಚರಿಸುತ್ತಾ ಈ ಅತ್ಯುತ್ತಮವಾದ ಕೃತಿಯನ್ನು ರಚಿಸಿ, ತೀರ್ಥಕ್ಷೇತ್ರಗಳನ್ನು ಸಾಧಕ ಭಕ್ತವರ್ಗಕ್ಕೆ ಈ ಮೂಲಕ ತೋರಿ ದೊಡ್ಡ ಉಪಕಾರವನ್ನು ಮಾಡಿದ್ದಾರೆ. ಕೇವಲ ತೀರ್ಥಕ್ಷೇತ್ರಗಳಲ್ಲಿ ಸಂಚರಿಸಿ ಮಿಂದೇಳುವುದಕ್ಕಿಂತ ಅಲ್ಲಿಯ ತೀರ್ಥಾಭಿಮಾನಿ ಹಾಗೂ ಕ್ಷೇತ್ರಾಭಿಮಾನಿ ದೇವತೆಗಳ ಮಹತ್ವ ಮತ್ತು ಪೌರಾಣಿಕ ಹಿನ್ನೆಲೆಯನ್ನರಿತಾಗ ಅಧಿಕವಾದ ಪುಣ್ಯವನ್ನು ಸಂಪಾದಿಸಬಹುದು. ಇದು ಇಷ್ಟಕ್ಕೇ ಸೀಮಿತವಾಗದೆ ಯಾರು ಅಶಕ್ತರೋ ಅಂತಹವರು ಈ ಕೃತಿಯ ಪಠಣ ಮಾತ್ರದಿಂದ ತೀರ್ಥಕ್ಷೇತ್ರಗಳ ಸಂಚಾರದ ಪುಣ್ಯವನ್ನು ಸಂಪಾದಿಸಬಹುದೆಂದು ಸಜ್ಜನ ಸಮೂಹದ ಮೇಲೆ ಅಪಾರವಾದ ಕರುಣೆಯನ್ನು ತೋರಿದವರು ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರು.
ಇಂತಹ ಈ ಅದ್ಭುತ ಕೃತಿಯು ಸಾಮಾಜಿಕವಾಗಿಯೂ ಮತ್ತು ಸಾಂಸ್ಕೃತಿಕವಾಗಿಯೂ ಅತ್ಯಂತ ಮಹತ್ವವನ್ನು ಪಡೆಯುತ್ತದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜರ ತೀರ್ಥಪ್ರಬಂಧದ ಕೊಡುಗೆಯನ್ನು ನಿರೂಪಿಸುವ ಕಾರ್ಯ ಈ ಗ್ರಂಥದಲ್ಲಿ ಅಡಗಿದೆ.

ಸಜ್ಜನ ಸಮೂಹಕ್ಕೆ ಉಪಕರಿಸುವ ಬುದ್ಧಿಯಿಂದ ‘ವಾದಿರಾಜರ ತೀರ್ಥಪ್ರಬಂಧ’ ಎಂಬ ಶೀರ್ಷಿಕೆಯಲ್ಲಿ    ಡಾ. ಮೈತ್ರೇಯಿ ಆದಿತ್ಯಪ್ರಸಾದ್ ಅವರು ಪುಸ್ತಕವನ್ನು 2022ರಲ್ಲಿ ಪ್ರಕಟಿಸಿರುತ್ತಾರೆ.

ಡಾ. ಮೈತ್ರೇಯಿ ಅವರ ಇಂತಹ ಅದ್ಭುತವಾದ ತೀರ್ಥಪ್ರಬಂಧಕ್ಕೆ ಕರ್ನಾಟಕ ಸಂಸ್ಕೃತ ವಿವಿಯಿಂದ  2022ನೇ ಸಾಲಿನಲ್ಲಿ ಪ್ರೊ. ವಿ. ಎಸ್. ಉಪಾಧ್ಯ ಹೆಸರಿನಲ್ಲಿ ಪುರಸ್ಕಾರ ನೀಡುತ್ತಿದ್ದು, 10 ಸಾವಿರ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಕರ್ನಾಟಕ ಸಂಸ್ಕೃತ ವಿವಿಯಿದಂದ 2022, 23 ಹಾಗೂ 24ನೇ ಸಾಲಿಗೆ ಸಂಬಂಧಿಸಿ ಒಟ್ಟು 19 ಲೇಖಕರಿಗೆ ಈ ಪುರಸ್ಕಾರ ನೀಡಿ ಗೌರವಿಸುತ್ತಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4

Tags: Kannada NewsKannada News LiveKannada News Online ShivamoggaKannada WebsiteKannadaNewsWebsiteLatestNewsKannadaLocalNewsMalnadNewsNews in KannadaNews KannadaShimogaShivamoggaNewsಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share198Tweet124Send
Previous Post

ಭಾರತದ ದೇಶೀಯ ಕ್ವಾಂಟಮ್ ಹಾರ್ಡ್‌ವೇರ್ ಅಭಿವೃದ್ಧಿಗೆ ‘ಮಾಹೆ’ ಕ್ವಾಂಟಮ್ ಹಬ್ ಸ್ಥಾಪನೆ

Next Post

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ: ಮಾಜಿ ಡಿಸಿಎಂ ಈಶ್ವರಪ್ಪ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ: ಮಾಜಿ ಡಿಸಿಎಂ ಈಶ್ವರಪ್ಪ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ: ಮಾಜಿ ಡಿಸಿಎಂ ಈಶ್ವರಪ್ಪ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಗದಗ-ಹೋಟಗಿ ಡಬ್ಲಿಂಗ್ ಯೋಜನೆ ಪೂರ್ಣ | ಆಲಮಟ್ಟಿ-ವಂದಾಲ ವಿಭಾಗ ಚಾಲನೆ

ಗದಗ-ಹೋಟಗಿ ಡಬ್ಲಿಂಗ್ ಯೋಜನೆ ಪೂರ್ಣ | ಆಲಮಟ್ಟಿ-ವಂದಾಲ ವಿಭಾಗ ಚಾಲನೆ

March 27, 2026
ಮಾ.30ರಂದು ಪಿಇಎಸ್ ತಾಂತ್ರಿಕ ಮತ್ತು ನಿರ್ವಹಣಾ ಸಂಸ್ಥೆಯಲ್ಲಿ ಉಚಿತ MOCK Test

ಮಾ.30ರಂದು ಪಿಇಎಸ್ ತಾಂತ್ರಿಕ ಮತ್ತು ನಿರ್ವಹಣಾ ಸಂಸ್ಥೆಯಲ್ಲಿ ಉಚಿತ MOCK Test

March 26, 2026
ಏ.11-26 | ಇಸ್ಕಾನ್ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ

ಮಡಿಕೇರಿ | ಬೇಸಿಗೆ ಶಿಬಿರ | ಏನೆಲ್ಲಾ ಹೇಳಿಕೊಡಲಾಗುತ್ತದೆ? ಇಲ್ಲಿದೆ ಮಾಹಿತಿ

March 26, 2026
ಬಸ್ ಟೈರ್ ಹರಿದು ವಿದ್ಯಾರ್ಥಿನಿ ಕಾಲು ಮುರಿತ

ಬಸ್ ಟೈರ್ ಹರಿದು ವಿದ್ಯಾರ್ಥಿನಿ ಕಾಲು ಮುರಿತ

March 26, 2026
ತರಗತಿಯಲ್ಲೇ ವಿದ್ಯಾರ್ಥಿನಿಗೆ ಪ್ರೊಫೆಸರ್ ಅಬ್ದುಲ್ಲ ಪ್ರಪೋಸ್ | ವಿದ್ಯಾರ್ಥಿಗಳಿಂದ ಹಿಗ್ಗಾಮುಗ್ಗಾ ಥಳಿತ

ತರಗತಿಯಲ್ಲೇ ವಿದ್ಯಾರ್ಥಿನಿಗೆ ಪ್ರೊಫೆಸರ್ ಅಬ್ದುಲ್ಲ ಪ್ರಪೋಸ್ | ವಿದ್ಯಾರ್ಥಿಗಳಿಂದ ಹಿಗ್ಗಾಮುಗ್ಗಾ ಥಳಿತ

March 26, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL