ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸೂಕ್ತ ಸಮಯದಲ್ಲಿ ಕೆ.ಎಸ್. ಈಶ್ವರಪ್ಪನವರ K S Eshwarappa ಬಗ್ಗೆ ಪಕ್ಷದ ಹಿರಿಯರು ಕ್ರಮ ತೆಗೆದುಕೊಳ್ಳುತ್ತಾರೆ. ಆದರೆ ಪ್ರಮಯ ಬರಲಾರದು ಎಂಬ ವಿಶ್ವಾಸ ನನಗಿದೆ ಎಂದು ಬಿ.ವೈ. ರಾಘವೇಂದ್ರ B Y Raghavendra ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಕೆ.ಎಸ್.ಈಶ್ವರಪ್ಪನವರು ಈಗಾಗಲೇ ಬಂಡಾಯ ಎದಿದ್ದಾರೆ. ನಿಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಿದ್ದಾರೆ. ಆದರು ನಿಮ್ಮ ತಾಳ್ಮೆ ಏಕಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ತಾಳ್ಮೆ ಬಹು ಮುಖ್ಯ ಅವರು ನಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಪಕ್ಷದ ಹಿರಿಯರು ಅವರ ಚಟುವಟಿಕೆಯನ್ನು ಗಮನಿಸುತ್ತಿದ್ದಾರೆ. ಖಂಡಿತ ಸೂಕ್ತ ಸಂದರ್ಭದಲ್ಲಿ ಕ್ರಮ ತೆಗೆದುಕೊಳ್ಳುತಾರೆ ಎಂದರು.
Also read: ಕೇಜ್ರಿವಾಲ್’ಗೆ ಸದ್ಯ ಬಿಡುಗಡೆ ಭಾಗ್ಯವಿಲ್ಲ | ಏಪ್ರಿಲ್ 1ರವರೆಗೂ ಕಸ್ಟಡಿ ವಿಸ್ತರಣೆ
ಈಶ್ವರಪ್ಪನವರ ಬಗ್ಗೆ ಅವರು ಹಿಂದುತ್ವದ ಬಗ್ಗೆ ನಮಗೂ ಗೌರವವಿದೆ. ಹಿಂದುತ್ವಕ್ಕೆ ಬಿ.ಎಸ್. ಯಡಿಯೂರಪ್ಪನವರ B S Yadiyurappa ಕೊಡುಗೆ ಏನು ಇಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಅವರಿಗೆ ನೆನಪು ಇರಲಿ, ನಾನು ಕೂಡ ಆರ್ಎಸ್ಎಸ್ ಶಾಲೆಯಲ್ಲಿಯೇ ಕಲಿತವನು, ರಾಮಮಂದಿರ ವಿಷಯ ಬಂದಾಗ, ಈದ್ಗಾ ಮೈದಾನ ವಿಷಯ ಬಂದಾಗ, ಲಾಲ್ ಚೌಕ್ನಲ್ಲಿ ರಾಷ್ಟ್ರಧ್ವಜ ಹಾರಿಸುವಾಗ ಬಿ.ಎಸ್. ಯಡಿಯೂರಪ್ಪನವರು ಏನು ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಮೋದಿಗಿಂತ ಹಿಂದುತ್ವ ಬೇಕಾ, ಅವರು ಹೀಗೆ ಮಾತನಾಡಿದ್ದಕ್ಕೆ ಖಂಡಿತ ಬೇಜರಿದೆ. ಕಾಲ ಹೀಗೆ ಇರುವುದಿಲ್ಲ. ಆದಷ್ಟು ಬೇಗ ಒಳ್ಳೆಯ ದಿನಗಳು ಬರುತ್ತವೆ. ಬೆಳಗಾವಿ ದಾವಣಗೆರೆಯಲ್ಲಿ ಭಿನ್ನಮತ ಶಮನವಾಗಿದೆ. ಶಿವಮೊಗ್ಗದಲ್ಲಿಯೂ ಆಗಲಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post