ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಸೈನ್ಸ್ ಮೈದಾನದಲ್ಲಿ ನಡೆದ ದಕ್ಷಿಣ ಭಾರತದ ಮೊದಲ ರೈತ ಮಹಾಪಂಚಾಯತ್ ಸಮಾವೇಶಕ್ಕೆ ಜನಸಾಗರವೇ ಹರಿದು ಬಂದಿತು.
ರೈತ ನಾಯಕರಾದ ರಾಕೇಶ್ ಟಿಕಾಯತ್, ಡಾ.ದರ್ಶನ್ಪಾಲ್, ಯಧುವೀರ್ಸಿಂಗ್ ಭಾಗಿಯಾಗಿದ್ದರು. ಇವರೊಂದಿಗೆ ರಾಜ್ಯ ರೈತ ಸಂಘದ ನಾಯಕರಾದ ಕೆ.ಟಿ. ಗಂಗಾಧರ್, ಎಚ್.ಆರ್. ಬಸವರಾಜಪ್ಪ, ಪ್ರಮುಖರಾದ ಕಿಮ್ಮನೆ ರತ್ನಾಕರ್, ಭದ್ರಾವತಿಯ ಮಾಜಿ ನಗರಸಭಾ ಅಧ್ಯಕ್ಷರಾದ ಬಿ.ಕೆ. ಮೋಹನ್, ಬಾಲಕೃಷ್ಣ, ಟಿ.ಎಲ್. ಚಂದ್ರೇಗೌಡ, ಭದ್ರಾವತಿಯ ಯುವಮುಖಂಡರಾದ ಬಿ.ಎಸ್. ಗಣೇಶ್, ಎಂ. ಶ್ರೀಕಾಂತ್, ಆರ್.ಎಂ. ಮಂಜುನಾಥ ಗೌಡ, ಎಂ. ಗುರುಮೂರ್ತಿ, ಟಿ.ಎಚ್. ಹಾಲೇಶಪ್ಪ, ಎಚ್.ಸಿ. ಯೋಗೀಶ್, ಕೆ.ಎಲ್. ಅಶೋಕ್, ಕೆ.ಪಿ. ಶ್ರೀಪಾಲ್, ರಮೇಶ್ ಶಂಕರಘಟ್ಟ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
ಜಿಲ್ಲೆಯ ವಿವಿಧೆಡೆಯಿಂದ ನೂರಾರು ಸಂಖ್ಯೆಯ ವಾಹನಗಳಲ್ಲಿ ಸಾವಿರಾರು ರೈತರು ಆಗಮಿಸಿ, ಶಿವಮೊಗ್ಗದಲ್ಲಿ ಐತಿಹಾಸಿಕ ರೈತ ಮಹಾ ಪಂಚಾಯತ್ನಲ್ಲಿ ರೈತರ ರಣಕಹಳೆ ಮೊಳಗಿಸಿದರು. ಸಮಾವೇಶಕ್ಕೆ ಬಂದವರಿಗಾಗಿ ಕಲ್ಲಂಗಡಿ ಹಣ್ಣು, ಮಜ್ಜಿಗೆ, ನೀರು ಮತ್ತು ಮಂಡಕ್ಕಿ ವಿತರಿಸಲಾಯಿತು.
ಚನ್ನಗಿರಿ, ಭದ್ರಾವತಿ, ಶಿಕಾರಿಪುರ, ಸಾಗರ, ತೀರ್ಥಹಳ್ಳಿ ಸೇರಿದಂತೆ ಜಿಲ್ಲೆಯ ಎಲ್ಲಾ ಕಡೆಗಳಿಂದ ವಾಹನಗಳ ಮೂಲಕ ರೈತರು ಆಗಮಿಸಿದ್ದರು. ಈ ಸಮಾವೇಶದಲ್ಲಿ ಕೇವಲ ರೈತರಲ್ಲದೆ ಕನ್ನಡಪರ ಸಂಘಟನೆಗಳು, ಅಲ್ಪ ಸಂಖ್ಯಾತ ಹಿತರಕ್ಷಣೆ ವೇದಿಕೆಯವರು, ಕಾಂಗ್ರೆಸ್ ಪಕ್ಷ ಸೇರಿದಂತೆ ವಿವಿಧ ಪಕ್ಷಗಳು ಪಾಲ್ಗೊಂಡಿದ್ದವು.
ಭದ್ರಾವತಿಯ ಶಾಸಕರಾದ ಬಿ.ಕೆ. ಸಂಗಮೇಶ್ವರ್ ಅವರು ಸದನದ ಅಧಿವೇಶನದಲ್ಲಿ ಪಾಲ್ಗೊಂಡಿರುವುದರಿಂದ ರಾಕೇಶ್ ಟಿಕಾಯತ್ ಅವರನ್ನು ಆ ಕ್ಷೇತ್ರದ ಶಾಸಕರ ಸಹೋದರರು ಮಾಜಿ ನಗರಸಭಾ ಅಧ್ಯಕ್ಷರಾದ ಬಿ.ಕೆ. ಮೋಹನ್ ಸ್ವಾಗತಿಸಿ ಸಮಾವೇಶ ಯಶಸ್ವಿಯಾಗಲಿ ಎಂದು ಹರಸಿದರು. ಶಾಸಕರ ಪುತ್ರ, ಯುವ ಮುಖಂಡ ಗಣೇಶ್ ಸಹ ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post