ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಜನಾ ಪರಿಷತ್, ಸಂಸ್ಕಾರ ಪ್ರತಿಷ್ಠಾನ ಹಾಗೂ ಅರ್ಚಕ ವೃಂದ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಫೆ. 28ರಂದು ರವೀಂದ್ರ ನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಸಾಮೂಹಿಕ ಓಂ ನಮಃ ಶಿವಾಯ #Om Namah Shivaya ಜಪ ಯಜ್ಞ, ಶ್ರೀ ರುದ್ರ ಹೋಮ ಹಾಗೂ ಶ್ರೀರಾಮಾನುಗ್ರಹ -2025 ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ವೇ. ಬ್ರ. ಶ್ರೀಪತಿಭಟ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 7 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಶ್ರೀ ಮಹಾಗಣಪತಿ ಹೋಮ, ರುದ್ರ ಹೋಮ, ಪೂರ್ಣಾಹುತಿ ಜರುಗಲಿದೆ ಎಂದರು.
10:30ಕ್ಕೆ ಶ್ರೀ ರುದ್ರಹೋಮ ಮಹಾ ಪೂರ್ಣಾಹುತಿ ನಡೆಯಲಿದ್ದು, ಶ್ರೀ ಕ್ಷೇತ್ರ ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ನಡೆಯುವ ಈ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಕೀರ್ತಿಶೇಷ ವೇದಬ್ರಹ್ಮ ಅ.ಪ. ರಾಮಭಟ್ಟರ ಸಂಸ್ಮರಣೆಯಲ್ಲಿ ದ್ವಿತೀಯ ವರ್ಷದ ರಾಮಾನುಗ್ರಹ ಪ್ರಶಸ್ತಿಯನ್ನು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.
Also read: ಗಾಲಿಬ್ ಕವಿತೆಗಳು ವರ್ತಮಾನಕ್ಕೆ ಪ್ರತಿಬಿಂಬವಾಗಿವೆ: ಪ್ರೊ. ಶರತ್ ಅನಂತಮೂರ್ತಿ
ಭಕ್ತಾದಿಗಳು ಶ್ರೀ ರುದ್ರಹೋಮಕ್ಕೆ ಭತ್ತ, ಕರಿ ಎಳ್ಳು, ತುಪ್ಪ ಹಾಗೂ ಅನ್ನ ಸಂತರ್ಪಣೆಗೆ ಬೇಕಾಗುವ ಅಕ್ಕಿ, ಬೆಲ್ಲ, ಬೇಳೆ, ಸಕ್ಕರೆ, ತುಪ್ಪ, ಎಣ್ಣೆ, ತೆಂಗಿನಕಾಯಿ, ಕೊಬ್ಬರಿ, ತರಕಾರಿ ಇತ್ಯಾದಿ ಧವಸ ಧಾನ್ಯಗಳನ್ನು ಸಮರ್ಪಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿನಾಯಕ ಬಾಯರಿ -99001 07397, ಅಥವಾ 99640 72793, 94496 99424ರಲ್ಲಿ ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಭಜನಾ ಪರಿಷತ್ ಕಾರ್ಯದರ್ಶಿ ಶಬರೀಶ್ ಕಣ್ಣನ್, ಶಂಕರನಾರಾಯಣಭಟ್, ಕಲಾವತಿ ಅರುಣ್ ಕುಮಾರ್, ಶಂಕರನಾರಾಯಣ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post