ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಾನು 1995 ರಲ್ಲಿ ನನ್ನ ಅಭ್ಯಾಸವನ್ನು ಪ್ರಾರಂಭಿಸಿದ ದಿನದಿಂದ 2022ರವರೆಗೆ ದಂತ ವೈದ್ಯಕೀಯ ಇತಿಹಾಸದಲ್ಲಿ ಅಗಾಧವಾದ ಬದಲಾವಣೆಯಾಗಿದೆ. ದಂತ ವೈದ್ಯಕೀಯ ಕ್ಷೇತ್ರದಲ್ಲಾಗಿರುವ ತಾಂತ್ರಿಕ ಬೆಳವಣಿಗೆ ಮತ್ತು ದಂತ ಶಿಕ್ಷಣದಲ್ಲಿ ಬಳಸುವ ವಸ್ತುಗಳ ಗುಣಮಟ್ಟಗಳಿಗೆ ಅನುಸಾರವಾಗಿ ವೃತ್ತಿ ನಿರ್ವಹಿಸಬೇಕು ಎಂದು ದಾವಣಗೆರೆ ಬಾಪೂಜಿ ಆಸ್ಪತ್ರೆ ದಂತವೈದ್ಯಕೀಯ ವಿಭಾಗ ಮುಖ್ಯಸ್ಥ ಡಾ. ಅಶೋಕ್ ಸಲಹೆ ನೀಡಿದರು.
ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ Subbaiah Medical college ನಡೆದ ಸಿಡಿಇಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ದಂತ ವೈದ್ಯಕೀಯ ಅಭ್ಯಾಸ ಮಾಡುತ್ತಿರುವವರು ದುರ್ಗಿಗುಡಿ ರಸ್ತೆಯಲ್ಲಿರುವ ದಂತ ವೈದ್ಯಕೀಯ ಕ್ಲಿನಿಕ್ಗಳಿಗೆ ಒಮ್ಮೆ ಭೇಟಿ ನೀಡುವಂತೆ ನಾನು ಪ್ರಾಮಾಣಿಕ ಸಲಹೆಯನ್ನು ನೀಡುತ್ತೇವೆ. ಕಾರಣ ಅಲ್ಲಿ ಇರುವ ಕ್ಲಿನಿಕ್ಗಳಲ್ಲಿ ವಿನೂತನ ತಂತ್ರಜ್ಞಾನ ಹೊಂದಿರುವ ಉಪಕರಣಗಳೊಂದಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದಾರೆ. ಒಂದು ಉತ್ತಮ ಅನುಭವಕ್ಕಾಗಿ ಅಲ್ಲಿಗೆ ಭೇಟಿ ನೀಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕ್ಲಿನಿಕಲ್ ಪ್ರಾಕ್ಟಿಸ್ ವೈದ್ಯಕೀಯ ಅನುಭವ ಪಡೆಯಲು ಒಂದು ಉತ್ತಮ ಅಭ್ಯಾಸವಾಗಿದ್ದು, ಇದರಿಂದ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ. ಕ್ಲಿನಿಕಲ್ ಅಭ್ಯಾಸಲ್ಲಿ ರೋಗಿಗಳ ಪರಿಸ್ಥಿತಿ ಮತ್ತು ದೂರಿನ ಬಗ್ಗೆ ನಾವು ಅರಿಯಬಹುದು, ಅವರ ಸಮಸ್ಯೆಗಳನ್ನು ನಿವಾರಿಸಲು ಹಾಗೂ ಯಾವ ಹಂತದ ಚಿಕಿತ್ಸೆ ನೀಡಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಬಹುದು ಎಂದರು.
ಡಾ. ದಯಾನಂದ್ ಅವರು 30 ವರ್ಷಗಳಿಂದ ಎಲ್ಲಾ ತಂತ್ರಜ್ಞಾನಗಳಿಗೆ ಹೊಂದಿಕೊಂಡು ವೈದ್ಯಕೀಯ ವೃತ್ತಿ ನಡೆಸಿಕೊಂಡಿ ಬರುತ್ತಿದ್ದಾರೆ. ಹಾಗೆಯೇ ಇಲ್ಲಿರುವ ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳು ಉತ್ತಮ ವೈದ್ಯಕೀಯ ಸೇವೆ ನೀಡಿ ಯಶಸ್ಸು ಪಡೆಯಿರಿ ಎಂದು ಹಾರೈಸಿದರು.
ಪ್ರಾಂಶುಪಾಲ ಡಾ. ಬಿ.ಎಸ್. ಸುರೇಶ್ ಮಾತನಾಡಿ, ದಂತ ವೈದ್ಯ ವಿದ್ಯಾರ್ಥಿಗಳು ಹಾಗೂ ವೈದ್ಯರು ಸಿಡಿಇ ಕಾರ್ಯಕ್ರಮಗಳಲ್ಲಿ ಹಾಜರಾಗುವ ಮೂಲಕ ಈ ಕ್ಷೇತ್ರದ ಸುಧಾರಿತ ಜ್ಞಾನ ಹಾಗೂ ವಿಚಾರಗಳ ಕುರಿತಾಗಿ ತಿಳಿದುಕೊಳ್ಳಬೇಕು ಎಂದರು.
ವೈದ್ಯಕೀಯ ಕ್ಷೇತ್ರದಲ್ಲಿ ಪ್ರತಿನಿತ್ಯವೂ ಕಲಿಯಬೇಕಾದ ವಿಚಾರಗಳು ಆವಿಷ್ಕಾರಗೊಳ್ಳುತ್ತವೆ. ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳು ಇದನ್ನು ತಿಳಿದುಕೊಳ್ಳಬೇಕಾದ ಅಗತ್ಯವಿದ್ದು, ಇದಕ್ಕೆ ಸಿಡಿಇ ಕಾರ್ಯಕ್ರಮಗಳು ಪೂರಕವಾಗಿವೆ ಎಂದರು.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯಗಳ ಛೇರ್ಮನ್ ಸುಬ್ಬರಾಮಯ್ಯ, ವೈದ್ಯಕೀಯ ನಿರ್ದೇಶಕ ಡಾ. ಎಸ್. ನಾಗೇಂದ್ರ, ಉಪಪ್ರಾಂಶುಪಾಲ ಡಾ. ಮಿಥುನ್, ಕಾಲೇಜಿನ ಟ್ರಸ್ಟಿ ವಿನಯಾ ಶ್ರೀನಿವಾಸ್, ಡಾ. ಎಮ್.ಎಸ್. ಸುಮಾ, ಡಾ. ಕೆ.ಎಂ. ಅನೂಪ್, ಡಾ. ಎ.ಜೆ. ಅಂಕಿತಾ, ಡಾ. ಕಲಾ, ಡಾ. ಪುಷ್ಪಾ, ಪ್ರಾಂಶುಪಾಲ ಡಾ.ಸಾಮ್ರಾಟ್ ಹೆಗಡೆ, ಶರಾವತಿ ಡೆಂಟಲ್ ಕಾಲೇಜಿನ ಡಾ. ಶ್ರೀನಿಧಿ, ಐಡಿಎ ಶಿವಮೊಗ್ಗ ಅಧ್ಯಕ್ಷ ಡಾ. ದೀಪಕ್, ಪ್ರಾಧ್ಯಾಪಕರು ಹಾಗೂ ದಂತ ವೈದ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post