ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ವಿಮಾನ ನಿಲ್ದಾಣವನ್ನು Shivamogga Airport ಫೆ.27ರಂದು ಪ್ರಧಾನಿ ನರೇಂದ್ರ ಮೋದಿ PM Narendra Modi ಲೋಕಾರ್ಪಣೆಗೊಳಿಸಲಿದ್ದು, ಇದೇ ಸಂದರ್ಭದಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನೀಡಲಿದ್ದಾರೆ.
ಪ್ರಧಾನಿ ಮೋದಿಯವರು ಭಾಗವಹಿಸಲಿರುವ ಕಾರ್ಯಮಗಳ ವಿವರ ಇಲ್ಲಿದೆ.
ಶಿವಮೊಗ್ಗ -ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲು ಮಾರ್ಗದ ರೂ. 612.42 ಕೋಟಿ ಹಾಗೂ ಕೋಟೆಗಂಗೂರಿನಲ್ಲಿ ರೂ 76.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಕೋಚಿಂಗ್ ಡಿಪೋ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ರೈಲ್ವೆ ಯೋಜನೆಗಳ ವಿವರ:
- ಶಿವಮೊಗ್ಗ -ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲು ಮಾರ್ಗದ ಯೋಜನೆಯ 1ನೇ ಹಂತದ ಶಿವಮೊಗ್ಗ-ಶಿಕಾರಿಪುರವರೆಗಿನ (42 ಕಿ.ಮೀ) ರೈಲು ಮಾರ್ಗದ ಶಂಕುಸ್ಥಾಪನೆ-ರೂ. 612.42 ಕೋಟಿ.
- ಕೋಟೆಗಂಗೂರಿನಲ್ಲಿ ರೂ 76.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಕೋಚಿಂಗ್ ಡಿಪೋ ನಿರ್ಮಾಣ ಹಾಗೂ ರೂ. 21 ಕೋಟಿಗಳ ಅಂದಾಜು ವೆಚ್ಚದಲ್ಲಿ ಟರ್ಮಿನಲ್ ಸ್ಟೇಷನ್ ಕಟ್ಟಡ ಶಂಕುಸ್ಥಾಪನೆ.
ಸ್ಮಾರ್ಟ್ ಸಿಟಿ ಅಡಿಯಲ್ಲಿ ಒಟ್ಟು ರೂ. 896.16 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 44 ಯೋಜನೆಯ ಕಾಮಗಾರಿಗಳ ಲೋಕಾರ್ಪಣೆ ಮಾಡಲಿದ್ದಾರೆ.
ಸ್ಮಾರ್ಟ್ ಸಿಟಿ ಕಾಮಗಾರಿಗಳ ವಿವರ:
- ಶಿವಮೊಗ್ಗ ನಗರವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ 2016ರಲ್ಲಿ 2ನೇ ಹಂತದಲ್ಲಿ ಕೇಂದ್ರ ಸರ್ಕಾರವು ಆಯ್ಕೆ ಮಾಡಿತ್ತು.
- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ 500 ಕೋಟಿಯಂತೆ ಒಟ್ಟು 1000 ಕೋಟಿಗಳ ವೆಚ್ಚದಲ್ಲಿ ಲೈಟ್ ಹೌಸ್ ಸಿಟಿಗಳಾಗಿ ಮತ್ತು ಭವಿಷ್ಯದ ವಾಸಯೋಗ ನಗರಗಳಾಗಿ 5 ವರ್ಷಗಳಲ್ಲಿ ಅಭಿವೃದ್ಧಿಪಡಿಸುವುದು ಈ ಯೋಜನೆಯ ಗುರಿಯಾಗಿತ್ತು. ತದನಂತರ ಈ ಯೋಜನೆಯ ಕಾಲಾವಧಿಯನ್ನು ಜೂನ್ 2023ರವರೆಗೆ ವಿಸ್ತರಣೆಗೊಂಡಿದೆ.
- ಒಟ್ಟು 71 ಯೋಜನೆಗಳನ್ನು ರೂ. 966.07 ಕೋಟಿ ವೆಚ್ಚದಲ್ಲಿ ಅನುಷ್ಟಾನಗೊಳಿಸಲು ಯೋಜನೆಯನ್ನು ರೂಪಿಸಲಾಗಿತ್ತು. ಈ ಪೈಕಿ ಲೋಕಾರ್ಪಣೆಗೆ ಬಾಕಿ ಉಳಿದಿದ್ದ 44 ಯೋಜನೆಯ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ವತಿಯಿಂದ 7 ರಸ್ತೆ ಯೋಜನೆಗಳಡಿ 101.511 ಕಿ.ಮಿ. ರಸ್ತೆ- ರೂ. 970.90 ಕೋಟಿ ಮೊತ್ತದ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಶಿವಮೊಗ್ಗದ ವಿದ್ಯಾನಗರ ಎಲ್.ಸಿ. 46 ಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮೂಲಕ ದ್ವಿಪಥದ ವೃತ್ತಾಕಾರದ ರೈಲ್ವೆಮೇಲ್ಸೇತುವೆ–ರೂ. 43.90 ಕೋಟಿ ಕಾಮಗಾರಿಯ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಯೋಜನೆ ಅಡಿಯಲ್ಲಿ ಶಂಕುಸ್ಥಾಪನೆ ಆಗಬೇಕಾಗಿರುವ ಕಾಮಗಾರಿಗಳ ವಿವರ:
- ಶಿಕಾರಿಪುರ ಟೌನ್ ನಲ್ಲಿ 6.576 ಕಿಮಿ ಬೈಪಾಸ್ ರಸ್ತೆ ನಿರ್ಮಾಣ – 66.44 ಕೋಟಿ
- ಹೊಸನಗರ ತಾಲ್ಲೂಕು ಮಾವಿನಕೊಪ್ಪ ಸರ್ಕಲ್ ನಿಂದಾ ಆಡುಗೋಡಿವರೆಗೆ ರಾ.ಹೆ.766ಸಿ ರಸ್ತೆಯ ಮಾರ್ಪಡೀಕರಣ – 313.56 ಕೋಟಿ
- ಬೈಂದೂರಿನಿಂದ ನಾಗೋಡಿವರೆಗೆ ರಾ.ಹೆ.766ಸಿ ಅಗಲೀಕರಣ – 394.95 ಕೋಟಿ
- ತೀರ್ಥಹಳ್ಳಿ ಮೇಗರವಳ್ಳಿಯಿಂದ ಆಗುಂಬೆವರೆಗೆ 15.98 ಕಿ.ಮಿ.ನಿಂದಾ 30.75 ಕಿ.ಮೀವರೆಗೆ ರಾ.ಹೆ. 169ಎ ರಸ್ತೆ ಅಗಲೀಕರಣ – ರೂ. 96.20 ಕೋಟಿ.
- ತೀರ್ಥಹಳ್ಳಿ ತಾಲ್ಲೂಕು ಭಾರತೀಪುರ ದಲ್ಲಿ ರಾ.ಹೆ.169ಕ್ಕೆ 54.775 ಕಿ.ಮೀ. ನಿಂದಾ 55.05 ಕಿ.ಮೀ.ವರೆಗೆ ರಸ್ತೆ ಅಭಿವೃದ್ದಿ – 55.56 ಕೋಟಿ.
- ರಾ.ಹೆ.169ರಲ್ಲಿ 0 ಕಿ.ಮಿ. ನಿಂದ 2.48 ಕಿ.ಮೀ.ವರೆಗೆ ರಸ್ತೆ ಅಗಲೀಕರಣ – 37.80 ಕೋಟಿ.
- ಹೊಳೆಹೊನ್ನೂರು ಭದ್ರಾ ಸೇತುವೆ ಪುನರ್ ನಿರ್ಮಾಣ ಹಾಗೂ ರಸ್ತೆ ಅಭಿವೃದ್ಧಿ – 4.60 ಕೋಟಿ
ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ 526.04 ಕೋಟಿ ವೆಚ್ಚದಲ್ಲಿ ಒಟ್ಟು 2,25,700 ಮನೆಗಳಿಗೆ ನಲ್ಲಿ ನೀರು ಸರಬರಾಜು ಸಂಪರ್ಕ ಕಲ್ಪಿಸುವ ಹಾಗೂ ಬಹುಗ್ರಾಮ ಕುಡಿಯುವ ನೀರು ಅಡಿಯಲ್ಲಿ 12 ಕಾಮಗಾರಿಗಳನ್ನು ರೂ. 1,478.70 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಿದ್ದಾರೆ.
ಯೋಜನೆಯ ವಿವರ:
- ಜಲಜೀವನ್ ಮಿಷನ್ – 908 ಕಾಮಗಾರಿ – 213.53 ಕೋಟಿ.
- ಬಹುಗ್ರಾಮ ಕುಡಿಯುವ ನೀರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post