ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಉತ್ತರ ಕನ್ನಡ ಕರ್ಕಿ ಮಠದ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮೀಜಿ ಅವರನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ #K S Eshwarappa ನಿನ್ನೆ ದಾವಣಗೆರೆಯಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಗುರುಗಳು ವಿಶೇಷವಾಗಿ ಹಿಂದೂ ಧರ್ಮ ಕಾರ್ಯಗಳಲ್ಲಿ ಹೆಚ್ಚಿನ ಬೆಂಬಲ ಹಾಗೂ ಎಲ್ಲಾ ಹಿಂದುಳಿದ ಸಮಾಜಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಾ, ಹಿಂದೂ ಸಾಧು ಸಂತರಿಗಿ ಶ್ರದ್ಧೆಯಿಂದ ಗೌರವಿಸಿಕೊಂಡು ಎಲ್ಲಾ ಮಠ ಮಂದಿರಗಳಿಗೂ ಕೂಡ ಹೆಚ್ಚಿನ ಅನುಕೂಲಗಳನ್ನು ಮಾಡುತ್ತಿರುವ ನಿಮಗೆ ಖಂಡಿತ ಉನ್ನತ ಮಟ್ಟದ ಹುದ್ದೆ ಸಿಗಲಿದೆ ಎಂದು ಹಾರೈಸಿದರು.
ಶಿವಮೊಗ್ಗ ನಗರದ ದೈವಜ್ಞ ಸಮಾಜದ ನೂರಾರು ಬಂಧುಗಳು ರಾಜ್ಯ ಸಮಿತಿಯ ಸಾವಿರಾರು ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















