ಶಿವಮೊಗ್ಗ: ಇಡಿಯ ರಾಜ್ಯದಲ್ಲೇ ಭಾರೀ ಪ್ರಖ್ಯಾತಿ ಪಡೆದಿರುವ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಭವ್ಯ ಮೆರವಣಿಗೆಗೆ ಇನ್ನು ಕೇವಲ ಎರಡು ದಿನ ಮಾತ್ರ ಬಾಕಿ ಉಳಿದಿದ್ದು, ಹಿಂದೆಂದಿಗಿಂತಲೂ ಈ ಬಾರಿ ವೈಭವಯುತವನ್ನಾಗಿಸಲು ಸಕಲ ಸಿದ್ದತೆ ನಡೆದಿದೆ.
ಹಸಿರನ್ನೇ ಹೊದ್ದುಕೊಂಡಿರುವ ಶಿವಮೊಗ್ಗ ಈಗ ಅಕ್ಷರಶಃ ಕೇಸರಿಮಯವಾಗಿ ಮಾರ್ಪಾಡಾಗಿದ್ದು, ನಗರದಾದ್ಯಂತ ಎಲ್ಲಿ ನೋಡಿದರಲ್ಲಿ ಕೇಸರಿ ಬಾವುಟಗಳು, ಹಿಂದೂ ಹೃದಯ ಸಾಮ್ರಾಟರ ಭಾವಚಿತ್ರಗಳು ರಾರಾಜಾಜಿಸುತ್ತಿವೆ.
ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಶಿವಪ್ಪನಾಯಕ ವೃತ್ತದ ಗಾಂಧಿಬಜಾರ್ ರಸ್ತೆ ಆರಂಭದಲ್ಲಿ ಬೃಹತ್ ಕೋಟೆ ಮಾದರಿಯ ಗೋಡೆ ನಿರ್ಮಿಸಿದ್ದು, ಇದರ ಮೇಲ್ಬಾಗದಲ್ಲಿ ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜ್ ಅವರ ಬೃಹತ್ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
ಕಳೆದ ಹಲವು ದಿನಗಳಿಂದ ಈ ಪ್ರತಿಮೆಯನ್ನು ಅತಿ ಮುತುವರ್ಜಿಯಿಂದ ನಿರ್ಮಿಸಲಾಗಿದ್ದು, ಇಂದು ಗಾಂಧಿ ಬಜಾರ್ ಆರಂಭದಲ್ಲಿ ಸ್ಥಾಪಿಸಲಾಗಿದ್ದು, ಅಚ್ಚು ಶಿವಾಜಿ ಮಹಾರಾಜರೇ ಕುಳಿತಂತೆ ಭಾಸವಾಗುತ್ತಿದೆ.
ಇನ್ನು, ಕೋಟೆ ರಸ್ತೆ, ಎಸ್’ಪಿಎಂ ರಸ್ತೆ, ಗಾಂಧಿ ಬಜಾರ್, ಶಿವಪ್ಪನಾಯಕ ವೃತ್ತ, ಅಮೀರ್ ಅಹ್ಮದ್ ವೃತ್ತ, ನೆಹರೂ ರಸ್ತೆ, ಗೋಪಿ ಸರ್ಕಲ್, ಬಿಎಚ್ ರಸ್ತೆ ಸೇರಿದಂತೆ ನಗರ ಬಹುತೇಕ ರಸ್ತೆಗಳು ಕೇಸರಿಮಯವಾಗಿದ್ದು, ಎಲ್ಲೆಲ್ಲೂ ಸಂಭ್ರಮ ಮನೆಮಾಡಿದೆ.
Discussion about this post