ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜೆಸಿಐ ಶಿವಮೊಗ್ಗ ಭಾವನಾ ಮಹಿಳಾ ಘಟಕದ ಏರಿಯಾ ಎಫ್, ರೀಜನ್ ಡಿ, ವಲಯ-24ರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಿನ್ನೆ ಸಂಜೆ ಬಸವನಗುಡಿಯಲ್ಲಿರುವ ಸರ್ಕಾರಿ ನೌಕರರ ಸಂಘದ ವಿಕಾಸ ಕೇಂದ್ರದಲ್ಲಿ ನಡೆಯಿತು.
ಮಹಾನಗರ ಪಾಲಿಕೆ ಮಾಜಿ ಸದಸ್ಯೆ ರೇಖಾ ರಂಗನಾಥ್ ಅವರು 2025ರ ಅವಧಿಗೆ ನೂತನ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಚೈತ್ರ ಪಿ.ಸಜ್ಜನ್ ಅಧಿಕಾರ ಸ್ವೀಕರಿಸಿದರು. ಇವರೊಂದಿಗೆ ನೂತನ ಪದಾಧಿಕಾರಿಗಳು ಮತ್ತು ಸಲಹಾ ಸಮಿತಿಯ ಸದಸ್ಯರು ಕೂಡ ಅಧಿಕಾರ ಸ್ವೀಕರಿಸಿದರು.
Also read: ಶಿವಮೊಗ್ಗ | ಇ-ಸ್ವತ್ತು ಜನರ ಪರದಾಟಕ್ಕೆ ಪರಿಹಾರವೇ ಇಲ್ಲವೇ?
ಪದಗ್ರಹಣ ಸಮಾರಂಭವನ್ನು ಜೆಸಿಐ ಭಾರತ ವಲಯ 24ರ ಅಧ್ಯಕ್ಷ ಗೌರೀಶ್ ಭಾರ್ಗವ್ ಕೆ.ವಿ. ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಸೇವಕ ಎಂ.ಶ್ರೀಕಾಂತ್, ಲೇಖಕ ಹಾಗೂ ಚಿಂತಕ ಎನ್. ರವಿಕುಮಾರ್ ಟೆಲೆಕ್ಸ್, ಜೆಸಿಐ ಸೆನೆಟರ್ ವಿನಿತ್ ಆರ್., ನಿಕಟಪೂರ್ವ ಅಧ್ಯಕ್ಷೆ ಜೆಸಿಐ ಸೆನೆಟರ್ ಅನಿಷಾ ಅನಂತ ಕಾತರಕಿ, ಜನ್ಯಾ ರಂಗನಾಥ್, ಜೆ ಎಫ್ ಎಂ. ಶಾರದ ಶೇಷಗಿರಿ ಗೌಡ ಸೇರಿದಂತೆ ಜೆಸಿಐನ ನಿರ್ದೇಶಕರು, ಸಂಚಾಲಕರು, ಸಲಹಾ ಮಂಡಳಿ ಸದಸ್ಯರು ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post