ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀಗಂಧ ಸಂಸ್ಥೆ ಮತ್ತು ರಾಘವೇಂದ್ರ ಸ್ವಾಮಿಗಳ ಭಕ್ತ ವೃಂದದ ನೇತೃತ್ವದಲ್ಲಿ ಬೊಮ್ಮನಕಟ್ಟೆಯ ದೇವಂಗಿ ಬಡಾವಣೆಯಲ್ಲಿ ನಿರ್ಮಿಸಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಶಾಖಾ ಮಠದ ಪ್ರತಿಷ್ಠಾಪನಾ ಕಾರ್ಯಕ್ರಮ ಮಾ.9 ಮತ್ತು 10ರಂದು ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀಗಂಧ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳು, ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠವೇ ಮೂಲಮಠವಾಗಿದ್ದು, ಅದರ ಶಾಖಾ ಮಠ ಈಗ ಶಿವಮೊಗ್ಗದಲ್ಲಿ ನಿರ್ಮಾಣವಾಗಿದೆ. ಮಾ.10ರಂದು ಶ್ರೀ ಮುಖ್ಯಪ್ರಾಣ ದೇವರು ಹಾಗೂ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ವೃಂದಾವನದ ಪ್ರತಿಷ್ಠಾಪನೆಯಾಗಲಿದೆ ಎಂದರು.
ಮಾ.9ರಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಡೆಯಲಿವೆ. ಪರಮಪೂಜ್ಯ ಜಗದ್ಗುರು ಶ್ರೀ 1008 ಸುಬುಧೇಂದ್ರ ತೀರ್ಥ ಶ್ರೀಪಾದ ತೀರ್ಥಂಗಳವರು ನಗರ ಪ್ರವೇಶ ಮಾಡಲಿದ್ದು, ಮಾ.9ರ ಸಂಜೆ 6 ಗಂಟೆಗೆ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಈ ಶೋಭಾ ಯಾತ್ರೆಯು ವಿನೋಬನಗರದ ಡಿವಿಎಸ್ ಶಾಲಾ ಆವರಣದಿಂದ ಅಲಂಕೃತ ರಥದಲ್ಲಿ ನಡೆಯುತ್ತದೆ ಎಂದರು.
ರಾತ್ರಿ 8 ಗಂಟೆಗೆ ಬೊಮ್ಮನಕಟ್ಟೆ ಮಠದ ಆವರಣದಲ್ಲಿ ಶ್ರೀಗಳ ಆಶೀರ್ವಚನ ಇರುತ್ತದೆ. ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಎಸ್. ರುದ್ರೇಗೌಡ, ಡಿ.ಎಸ್. ಅರುಣ್ ಉಪಸ್ಥಿತರಿರುವರು ಎಂದರು.
ಭಕ್ತರು ಸೇವಾಕಾಂಕ್ಷಿಗಳಾಗಿ ಪಾಲ್ಗೊಂಡು ಶ್ರೀ ಮೂಲರಾಮದೇವರ, ಶ್ರೀ ವೇದವ್ಯಾಸರ, ಶ್ರೀ ಮುಖ್ಯ ಪ್ರಾಣರ, ಶ್ರೀ ವಾದಿರಜರ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬಿ.ಆರ್. ಮಧುಸೂದನ್, ಶ್ರೀನಾಥ್ ನಗರಗದ್ದೆ, ರಾಜೇಂದ್ರ, ರಾಘವೇಂದ್ರ, ಎಂ. ಶಂಕರ್, ಎ.ಜೆ. ರಾಮಚಂದ್ರ ಇನ್ನಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post