No Result
View All Result
ಡಯಾಲಿಸಿಸ್ ಅಂತಿಮವಲ್ಲ | ಮೃತ ದಾನಿದಾರ ಕಿಡ್ನಿಯಿಂದ ರೋಗಿಗೆ ಹೊಸ ಬದುಕು
English Articles

A Second Chance at Life Through Deceased Organ Donation

by ಕಲ್ಪ ನ್ಯೂಸ್
February 3, 2026
0

Kalpa Media House  |  Bengaluru, Whitefield  | For 48-year-old Unnikrishnan, life for several years revolved around dialysis sessions, medications, and...

Read moreDetails
Bhaskara Parva: Generations of Journalism Students Reunite to Honour a Teacher Who Shaped Their Lives

Bhaskara Parva: Generations of Journalism Students Reunite to Honour a Teacher Who Shaped Their Lives

February 2, 2026
NITK Surathkal Inaugurates First Annual Sports Festival- ‘Endeavor 2026’

NITK Surathkal Inaugurates First Annual Sports Festival- ‘Endeavor 2026’

February 1, 2026
Samsung Sets Two Guinness World Records with its India

Samsung Sets Two Guinness World Records with its India

January 31, 2026
ಮೈಸೂರು | ಮಹಾರಾಣಿ ಮಹಿಳಾ ವಿದ್ಯಾರ್ಥಿನಿಯರಿಗೆ ಆಹಾರ ಹಾಗು ಆತಿಥ್ಯೋದ್ಯಮ ಕೌಶಲ್ಯ ತರಬೇತಿ

Maharani’s Science College Collaboration Empowers Students with Industry-Ready Skills

January 31, 2026
  • Advertise With Us
  • Grievances
  • About Us
  • Contact Us
Thursday, February 5, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಅಂತರಂಗದ ಅಭಿವ್ಯಕ್ತಿತನ ಕೌಶಲ್ಯಯುಕ್ತ ಬದುಕಿಗೆ ಪ್ರೇರಕ: ಶ್ರೀರಂಜಿನಿ ದತ್ತಾತ್ರಿ ಅಭಿಮತ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 30, 2022
in ಶಿವಮೊಗ್ಗ
0
ಅಂತರಂಗದ ಅಭಿವ್ಯಕ್ತಿತನ ಕೌಶಲ್ಯಯುಕ್ತ ಬದುಕಿಗೆ ಪ್ರೇರಕ: ಶ್ರೀರಂಜಿನಿ ದತ್ತಾತ್ರಿ ಅಭಿಮತ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |

ಅಂತರಂಗದ ಅಭಿವ್ಯಕ್ತಿತನ ಕೌಶಲ್ಯಯುಕ್ತ ಬದುಕಿಗೆ ಪ್ರೇರಣದಾಯಕವಾಗುತ್ತದೆ ಎಂದು ಮನ್ವಂತರ ಮಹಿಳಾ ಮಂಡಳಿ ಅಧ್ಯಕ್ಷೆ ರಂಜಿನಿ ದತ್ತಾತ್ರಿ ಅಭಿಪ್ರಾಯಟಪ್ಟರು.

ಮನ್ವಂತರ ಮಹಿಳಾ ಮಂಡಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜ ಜೀವನದ ಗುರಿಯೇ ಸಾಂಘಿಕ ಜೀವನ. ಪರಸ್ಪರ ಸಹಾಯ, ಸಹಕಾರದಿಂದ ಬದುಕುವುದೇ ಜೀವನದ ಗುರಿ. ಸಮಾಜದ ಸಂಬಂಧಗಳನ್ನು ಜೇಡರಬಲೆಗೆ, ಜೇನುಗೂಡಿಗೆ ಹೋಲಿಸುತ್ತಾರೆ. ಈ ಗೂಡುಗಳ ನಾಯಕಿ, ನಿರ್ವಾಹಕಿ ಆ ಗೂಡಿನ ಹಣ್ಣು ಜೇಡ, ಹೆಣ್ಣು ಜೇನು ಆಗಿರುತ್ತದೆ. ಹಾಗೇ ಸಮಾಜದ ಸಾಂಘಿಕ ಜೀವನದ ನಿರ್ವಾಹಕಿ ಮಹಿಳೆಯೇ ಆಗಿರುತ್ತಾಳೆ. ತನಗೆ ಅರಿವಿಲ್ಲದೆಯೇ ಕುಟುಂಬ – ಸಮಾಜ- ವೈಕ್ತಿಗಳ ನಡುವೆ ಸಂಬಂಧದ ಮಾಲೆ ಹೆಣೆಯುತ್ತಾ ಸ್ವಸ್ತ ಸಮಾಜವನ್ನು ಸಾದರಪಡಿಸುತ್ತಾ ಸಾಗುತ್ತಾಳೆ ಮಹಿಳೆ ಎಂದರು.

ಯಾವುದೇ ದೇಶದಲ್ಲಿ ಸಮನ್ವಯತೆ-ಸಂತುಲನತೆ-ಸಂಭ್ರಮದ ನೆಲೆ ಗಟ್ಟಿಯಾಗಿದೆ ಎಂದರೆ ಅದಕ್ಕೆ ಮಹಿಳೆಯೇ ಕಾರಣ ಎಂದು ಘಂಟಾಘೋಷವಾಗಿ ಹೇಳಬಹುದು. ಕುಟುಂಬವನ್ನು ನಿರ್ವಹಿಸುವ ಮಹಿಳೆ ಮೊದಲು ಕುಟುಂಬದ ಎಲ್ಲರ ಮನಸ್ಸುಗಳನ್ನು ಒಗ್ಗೂಡಿಸಿ, ಪರಸ್ಪರರಲ್ಲಿ ಪ್ರೀತಿ, ಸ್ನೇಹ, ಮಮತೆ ಹಂಚಿ, ಉಣಬಡಿಸಿ, ಅವರಲ್ಲಿಯೂ ಈ ಎಲ್ಲ ಗುಣಗಳನ್ನು ಬೆಳೆಸುತ್ತಾಳೆ. ಕುಟುಂಬದ ಸದಸ್ಯರೆಲ್ಲರೂ ಈ ಎಲ್ಲವನ್ನು ಸಮಾಜಕ್ಕೂ ಉಣಬಡಿಸಬೇಕೆಂದು ಕಲಿಸುತ್ತಾಳೆ ಎಂದು ಅಭಿಪ್ರಾಯಪಟ್ಟರು.

ಸೃಜನಶೀಲತೆ, ಕೌಶಲ್ಯ, ಚಾಕಚಕ್ಯತೆಯ ಹಾದಿಯಲ್ಲಿ ಮುನ್ನಡೆದಿರುವ ಮಹಿಳೆ ಹೊಸ ಮನ್ವಂತರವನ್ನು ಸೃಷ್ಠಿಸಿದ್ದಾಳೆ ಕೂಡ. ತನ್ನ ಬದುಕಿನ ಪ್ರಮುಖ ಘಟ್ಟಗಳಲ್ಲಿ ಆಯ್ಕೆಯ ಸ್ವಾತಂತ್ರ್ಯವನ್ನು ಹೆಚ್ಚಿನ ಮಹಿಳೆಯರು ಪಡೆದಿದ್ದಾರೆ. ಇದು ಮತ್ತಷ್ಟು ಕಾರ್ಯರೂಪಕ್ಕೆ ಬರಬೇಕು. ನಾವು ಗಳಿಸಿದ ಭೌದ್ಧಿಕ ಸಂಪತ್ತು ನಮ್ಮ ಕೌಟುಂಬಿಕ ಜೀವನದ ನೆಮ್ಮದಿಯೊಂದಿಗೆ ಸಾಮಾಜಿಕ ಸವಾಸ್ಥ್ಯ ಕಾಪಾಡುವ ದಿಸೆಯಲ್ಲಿ ಮತ್ತಷ್ಟು ತೀವ್ರವಾಗಬೇಕು. ಹೆಣ್ಣು ಎಂದೂ ಚೈತನ್ಯದ ಚಿಲುಮೆಯೇ. ಕುಟುಂಬ ಮತ್ತು ಸಮಾಜವನ್ನು ಆರೋಗ್ಯವಾಗಿ ಇಡುವಲ್ಲಿ ಅವಳ ದೇಣಿಗೆ ಅಗಾಧ. ಸದ್ವಿಚಾರ, ಸಾಧನೆ, ಅಭಿವೃದ್ಧಿಯ ಕನಸು, ಗುರಿ ಇವುಗಳನ್ನು ಕುಟುಂಬದೊಳಗಿನ ಸದಸ್ಯರಿಗೆ ಕಟ್ಟಿಕೊಡುವವಳು ಮಹಿಳೆಯೇ. ಹಲವು ಕುಟುಂಬದ ಹಲವು ಸಮರ್ಥ ಮಹಿಳೆಯರು ಒಂದೇ ಸೂರಿನಡಿ ಸೇರಿದಾಗ ಮಹಿಳೆಯ ಶಕ್ತಿ, ಸಂಘಟನೆಯ ಶಕ್ತಿ ಹೆಚ್ಚುವುದಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಸ್ನೇಹ, ಸಾಮರಸ್ಯ, ಸಂಬಂಧ, ಸದೃಢತೆಯೆಂಬ ಧ್ಯೇಯದೊಂದಿಗೆ ಮನ್ವಂತರವನ್ನು ಮುನ್ನಡೆಸೋಣ ಎಂದಿದ್ದಾರೆ.

Also read: ಗಮನಿಸಿ! ಮೇ 1ರಂದು ಸೊರಬ ಹಾಗೂ ಗ್ರಾಮಾಂತರದ ಈ ಭಾಗದಲ್ಲಿ ಕರೆಂಟ್ ಇರುವುದಿಲ್ಲ


ಸಹ್ಯಾದ್ರಿ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ವೀರಮ್ಮ ಮಾತನಾಡಿ, ಇದೀಗ ಮಹಿಳೆಯರ ದೃಷ್ಠಿಕೋನ ಬದಲಾಗಿದೆ, ಚಿಂತನೆಯ ಹರಿವು ಹೆಚ್ಚಾಗಿದೆ. ಅಭಿವ್ಯಕ್ತಿಯ ನೆಲೆಯಲ್ಲಿ ಮುನ್ನಡೆದಿದೆ. ಪ್ರತಿಯೊಂದು ಮಹಿಳಾ ಸಂಘಟನೆಗೂ ಅದರದ್ದೇ ಆದ ಸಿದ್ದಾಂತದ ಚೌಕಟ್ಟಿನೊಳಗೆ ತಮ್ಮ ಸಂಸ್ಥೆಯನ್ನು ಆರಂಭಿಸಿಕೊಂಡು ಮುನ್ನಡೆಯುತ್ತವೆ. ಸ್ನೇಹವಿಲ್ಲದೆ ಸಮಾಹಜವಿಲ್ಲ ಸಮಾಜವಿಲ್ಲದೆ ಸ್ನೇಹವಿಲ್ಲ. ಸ್ನೇಹ-ಸೇವೆ ಎಲ್ಲವನ್ನು ಮೀರಿ ನಿಲ್ಲುವಂತದ್ದು. ನಿಮೆಲ್ಲರ ಮನೋಬಲದ ಸಾರಥ್ಯ ಮನ್ವಂತರಕ್ಕೆ ಇರಲಿ. ಸೇವೆ – ಸ್ನೇಹದ ಜೊತೆಗೆ ಆರ್ಥಿಕ ಬಲವನ್ನು ಪಡೆಯಲು ಸಹಕಾರ ತತ್ವದತ್ತಲೂ ನಿಮ್ಮ ಗಮನ ಹರಿಯಲಿ. ಸೇವೆ, ಶಿಕ್ಷಣ, ಸಂಸ್ಕೃತಿ, ಸಂಸ್ಕಾರ ಎಂಬ ಚೌಕಟ್ಟಿನಲ್ಲಿ ನಿಮ್ಮ ಸಂಘಟನೆ ಆರಂಭವಾಗಿದೆ. ಈ ಗುಂಪಿನ ಅಧ್ಯಕ್ಷೆಯಾಗಿ ಶ್ರೀರಂಜಿನಿ ದತ್ತಾತ್ರಿ ಎಲ್ಲರೊಂದಿಗೆ ಬೆರೆತು ಈ ಮನ್ವಂತರ ಮಹಿಳಾ ಮಂಡಲವನ್ನು ಮುನ್ನಡೆಸಬಲ್ಲರು ಎಲ್ಲರಿಗೂ ಶುವಾಗಲಿ ಎಂದು ಶುಭ ಹಾರೈಸಿದರು.

ಗೌರವ ಅಧ್ಯಕ್ಷೆ ಜಯಾ ಸುರೇಶ್‌ರವರು, ಪ್ರಸ್ತುತ ದಿನಗಳಲ್ಲಿ ಮಹಿಳೆ ಒಂದಲ್ಲ ಒಂದು ಸಂಘಟನೆಯಲ್ಲಿ ತೊಡಗಿಕೊಂಡೇ ಇರುತ್ತಾಳೆ. ಸಂಘಟನೆಗಳ ಮೂಲಕ ಸಂಬಂಧಗಳನ್ನು ಗಟ್ಟಿಗೊಳಿಸುತ್ತಾ ಸಾಗುತ್ತಾಳೆ. ಆ ಮೂಲಕ ಅರ್ಥಪೂರ್ಣ ಬದಲಾವಣೆ ನೀಡುತ್ತಾಳೆ. ಬಹಳ ದಿನಗಳಿಂದ ಯೋಜಿಸಿದ್ದ ಮನ್ವತರ ಮಹಿಳಾ ಸಂಘಟನೆಯೂ ಅರ್ಥಪೂರ್ಣ ಕಾರ್ಯಗಳ ಮೂಲಕ ಮುನ್ನಡೆಯೋಣ ಈ ಸಂಘಟನೆಯ ಮೂಲಕ ನಡೆಸುವ ಯಾವುದೇ ಕಾರ್ಯಗಳಿಗೆ ಸದಾ ನನ್ನ ಬೆಂಬಲವಿರುತ್ತದೆ ಎಂದರು.

ಕಾರ್ಯದರ್ಶಿಯಾಗಿ ಸುಲೋಚನಾ ಮೂರ್ತಿ, ಜಂಟಿ ಕಾರ್ಯದರ್ಶಿಯಾಗಿ ಲತಾ ಸೋಮಶೇಖರ್, ಉಪಾಧ್ಯಕ್ಷರಾಗಿ ನೇತ್ರಾವತಿ ಮಂಜುನಾಥ್, ಖಜಾಂಚಿಯಾಗಿ ಉಷಾ ಸುದರ್ಶನ್ ನೇಮಿಸಲ್ಪಟ್ಟರು. ನಿರ್ಧೇಶಕರಾಗಿ ಬೃಂದಾ ಶಾನ್ ಭಾಗ್, ಅರ್ಚನಾ, ಇಂದುಹೆಗ್ಡೆ, ವಿದ್ಯಾ ಅಣ್ಣಪ್ಪ, ಗಂಗಾಂಭಿಕ, ಶ್ವೇತಾಸಂಪತ್ ರವರು ಆಯ್ಕೆಯಾದರು. ಸದಸ್ಯರಾಗಿ ಮೀರಾಕಾಮತ್, ಸವಿತಾ ವೆಂಕಟೇಶ್, ಅನ್ನಪೂರ್ಣ, ರತ್ನಮಲ್ಲಪ್ಪ, ಅಶ್ವಿನಿ, ಸಾವಿತ್ರಿ ಶಿವಸ್ವಾಮಿ, ವಿನಯಾ ಇಂದಿರೇಶ್, ಸ್ವಪ್ನ ಸುರೇಶ್, ವಿಜಯಾ ಹಾಲಸ್ವಾಮಿ, ವಿಜಯಾಶಿವು, ಅಶ್ವಿನಿ ಜಾದವ್, ಕುಸುಮ ಎಣ್ಣೇರ್, ಜ್ಯೋತಿವಾಸುದೇವ್, ಸೀತಾದೇವಿ, ರವಿ, ಇಂದಿರಾ ನಾಗರಾಜ್, ಸುಧಾ, ಗಾಯತ್ರಿ, ಹೆಗ್ಡೆ, ನಾಗರತ್ನ ನಾರಾಯಣ್, ಪುಷ್ಪ ಶಿವಣ್ಣ, ಲತಾ, ವಿನಯ, ವೀಣಾ ಮಂಜುನಾಥ್, ಶಶಿಕಲಾ, ಸಂಧ್ಯಾ ವಿನಯ್, ಸುವರ್ಣ, ಸುಜಾತ, ಆಶಾ, ಅಕ್ಷಯ, ಕವಿತಾ ವೆಂಕಟೇಶ್ ಹೀಗೆ50ಕ್ಕೂ ಹೆಚ್ಚು ಮಹಿಳೆಯರು ಮನ್ವಂತರ ಮಹಿಳಾ ಮಂಡಳದ ಸದಸ್ಯರಾದರು.

ಸುಲೋಚನಾ ಮೂರ್ತಿ ನಿರೂಪಿಸಿ, ಲತಾ ಸೋಮಶೇಖರ್ ಸ್ವಾಗತಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaLocal NewsMalnad NewsNewsinKannadaNewsKannadaShimogaShivamoggaShivamogga Newsಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share199Tweet123Send
Previous Post

ಗಮನಿಸಿ! ಮೇ 1ರಂದು ಸೊರಬ ಹಾಗೂ ಗ್ರಾಮಾಂತರದ ಈ ಭಾಗದಲ್ಲಿ ಕರೆಂಟ್ ಇರುವುದಿಲ್ಲ

Next Post

ಭದ್ರಾವತಿ: ಟಿವಿ ಕೇಬಲ್’ನಲ್ಲಿ ವಿದ್ಯುತ್ ಹರಿದು 4 ವರ್ಷದ ಮಗು ಸಾವು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಭದ್ರಾವತಿ: ಟಿವಿ ಕೇಬಲ್’ನಲ್ಲಿ ವಿದ್ಯುತ್ ಹರಿದು 4 ವರ್ಷದ ಮಗು ಸಾವು

ಭದ್ರಾವತಿ: ಟಿವಿ ಕೇಬಲ್’ನಲ್ಲಿ ವಿದ್ಯುತ್ ಹರಿದು 4 ವರ್ಷದ ಮಗು ಸಾವು

Leave a Reply Cancel reply

Your email address will not be published. Required fields are marked *

  • Trending
  • Latest
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ಗದಗ-ಧಾರವಾಡ ಪ್ಯಾಸೆಂಜರ್ ರೈಲು ಪುನಾರಂಭ? ಕೇಂದ್ರ ಸಚಿವ ಜೋಶಿ ಹೇಳಿದ್ದೇನು?

ಸಾಗರ ಮಾರಿಕಾಂಬಾ ಜಾತ್ರೆಗೆ ಯಶವಂತಪುರ-ತಾಳಗುಪ್ಪ 2 ಸ್ಪೆಷಲ್ ರೈಲುಗಳು | ಹೀಗಿದೆ ಡೀಟೇಲ್ಸ್

January 31, 2026
ಮಾನವ ತನ್ನ ಹೃದಯ ವೈಶಾಲ್ಯ ಬೆಳೆಸಿಕೊಳ್ಳುವ ಮಹತ್ವದ ಕೃತಿ ನಾಕುತಂತಿ: ಸುರೇಶ್ ಋಗ್ವೇದಿ

ಮಾನವ ತನ್ನ ಹೃದಯ ವೈಶಾಲ್ಯ ಬೆಳೆಸಿಕೊಳ್ಳುವ ಮಹತ್ವದ ಕೃತಿ ನಾಕುತಂತಿ: ಸುರೇಶ್ ಋಗ್ವೇದಿ

February 5, 2026
ಶಿವಮೊಗ್ಗ | ಎಸ್’ಎಂಕೆ ಫ್ಲಾಜಾ (ಸುಲ್ತಾನ್ ಡೈಮಂಡ್ಸ್ ಬಿಲ್ಡಿಂಗ್) ಪಾಲಿಕೆ ಸುಪರ್ದಿಗೆ

ಶಿವಮೊಗ್ಗ | ಎಸ್’ಎಂಕೆ ಫ್ಲಾಜಾ (ಸುಲ್ತಾನ್ ಡೈಮಂಡ್ಸ್ ಬಿಲ್ಡಿಂಗ್) ಪಾಲಿಕೆ ಸುಪರ್ದಿಗೆ

February 5, 2026
ಶಿವಮೊಗ್ಗಕ್ಕೆ ಬರ್ತಿದ್ದಾರೆ ಸಂಸದ ತೇಜಸ್ವಿ ಸೂರ್ಯ | ಯಾವತ್ತು? ಏನು ಕಾರ್ಯಕ್ರಮ?

ಶಿವಮೊಗ್ಗಕ್ಕೆ ಬರ್ತಿದ್ದಾರೆ ಸಂಸದ ತೇಜಸ್ವಿ ಸೂರ್ಯ | ಯಾವತ್ತು? ಏನು ಕಾರ್ಯಕ್ರಮ?

February 5, 2026
ಉತ್ತಮ ಕಥೆ ಪುಸ್ತಕಗಳು ಸಮಗ್ರ ವಿಕಾಸಕ್ಕೆ ಬುನಾದಿ: ಪೊಲೀಸ್ ಅಧೀಕ್ಷಕಿ ಸ್ನೇಹ ರಾಜ್

ಉತ್ತಮ ಕಥೆ ಪುಸ್ತಕಗಳು ಸಮಗ್ರ ವಿಕಾಸಕ್ಕೆ ಬುನಾದಿ: ಪೊಲೀಸ್ ಅಧೀಕ್ಷಕಿ ಸ್ನೇಹ ರಾಜ್

February 5, 2026
ಸೊರಬ | ಉಳವಿ ಅಟಲ್‌ಜೀ ಜನಸ್ನೇಹಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ: ಪರಿಶೀಲನೆ

ಸೊರಬ | ಉಳವಿ ಅಟಲ್‌ಜೀ ಜನಸ್ನೇಹಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ: ಪರಿಶೀಲನೆ

February 5, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL