ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಶ್ಮೀರದಲ್ಲಿ ಮೂವರು ಕನ್ನಡಿಗರು ಉಗ್ರರ ದಾಳಿಗೆ ಗುರಿಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಕಾಶ್ಮೀರಕ್ಕೆ ತೆರಳಿ ಮೃತಪಟ್ಟವರ ಶವಗಳನ್ನು ಮರಳಿ ತರುವ ಜೊತೆಗೆ ಅಲ್ಲಿ ಸಿಲುಕಿದ್ದ 178 ಕನ್ನಡಿಗರನ್ನು ತಾಯ್ನಾಡಿಗೆ ಕರೆತಂದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಕೆಪಿಸಿಸಿ ಸಂಯೋಜಕಿ ಕವಿತಾ ಥೊರತ್ ಅವರ ಕುಟುಂಬ ವರ್ಗದಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಎಂ.ಎಲ್.ಸಿ ಎಂ.ಜಿ. ಮುಳೆ, ತಂದೆ ಬೀರಪ್ಪ, ತಾಯಿ ಮಹಾಲಕ್ಷ್ಮಿ ಬಾಯಿ, ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಶಿವಮೊಗ್ಗ ಕಾರ್ಮಿಕ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















