ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹೊಸನಗರದ ಸಮೀಪದ ಶ್ರೀ ರಾಮಚಂದ್ರಾಪುರ ಮಠದ #Shri Ramachandra Mutt ಮಹಾನಂದಿ ಗೋಲೋಕದಲ್ಲಿ ಫೆ.25ರಂದು “ಕೃಷ್ಣಾರ್ಪಣಮ್” #Krishnarpanam ಮತ್ತು “ಗೋದೀಪ” ಮಹೋತ್ಸವ #Godeepa Mahothsava ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ಆಯೋಜಿಸಲಾಗಿದೆ ಎಂದು ಧರ್ಮಚಕ್ರ ಟ್ರಸ್ಟಿನ ಕಾರ್ಯದರ್ಶಿ ಕೃಷ್ಣಪ್ರಸಾದ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೋಸಂರಕ್ಷಣೆ, ಸಂವರ್ಧನೆಯ ಮಹದುದ್ದೇಶದಿಂದ ಅದೇ ಪರಿಕಲ್ಪನೆಯಂತೆ ನಿರ್ಮಾಣಗೊಂಡಿರುವ ಗೋಲೋಕದಲ್ಲಿ 500ಕ್ಕೂ ಹೆಚ್ಚು ಗೋವುಗಳು ಪಾಲನೆಗೊಳ್ಳುತ್ತಿದ್ದು ಜಿಲ್ಲೆಯ ಆಕರ್ಷಕ ಪ್ರವಾಸಿತಾಣವಾಗಿ ರೂಪುಗೊಂಡಿದೆ. ಗೋಲೋಕದ ಕೇಂದ್ರ ಸ್ಥಾನದಲ್ಲಿ ಗೋವರ್ಧನಗಿರಿಧಾರಿ ಗೋಪಾಲಕೃಷ್ಣ ನೆಲೆಗೊಂಡಿದ್ದು ವಿಷ್ಣು ಸಹಸ್ರನಾಮ ಪಠಣ ಅನುಷ್ಠಾನಕ್ಕೆ ಇಲ್ಲಿ ವಿಶೇಷ ಮಹತ್ವವಿದೆ. ಪ್ರತಿ ಶನಿವಾರ ನಾಡಿನ ವಿವಿಧೆಡೆಯಿಂದ ಆಗಮಿಸಿದ ಭಕ್ತರು ಗೋವರ್ಧನಗಿರಿಧಾರಿಯ ಸನ್ನಿಧಿಯ 108 ಮೆಟ್ಟಿಲುಗಳನ್ನು ಏರುತ್ತಾ ವಿಷ್ಣು ಸಹಸ್ರನಾಮದ 108 ಶ್ಲೋಕಗಳನ್ನು ಪಠಿಸುವ “ವಿಷ್ಣುಪದಮ್” ಮೂಲಕ ವಿಷ್ಣುಸಹಸ್ರನಾಮ ಕ್ಷೇತ್ರವಾಗಿ ವಿಕಾಸಗೊಳ್ಳುತ್ತಿದೆ ಎಂದರು.
ಶ್ರೀಗೋವರ್ಧನಗಿರಿಧಾರಿ ಗೋಪಾಲಕೃಷ್ಣನ ಪ್ರತಿಷ್ಠಾ ವರ್ಧಂತಿಯಂದು ನಾಡಿನ ಮೂಲೆ ಮೂಲೆಗಳಿಂದ ಆಗಮಿಸುವ ಸಾವಿರಾರು ಭಕ್ತರು ವಿಷ್ಣು ಸಹಸ್ರನಾಮ ಪಾರಾಯಣ ಸೇವೆ ನೆರವೇರಿಸಲಿದ್ದಾರೆ. ಅಂದು ಬೆಳಗ್ಗೆ 7 ಕ್ಕೆ ಸೋಪಾನ ಪೂಜೆಯೊಂದಿಗೆ ಪ್ರತಿಷ್ಠಾ ವರ್ಧಂತಿ ಕಾರ್ಯಕ್ರಮಗಳು ಆರಂಭವಾಗಲಿದ್ದು ಗೋಲೋಕ ವಿಕಾಸದ ಮಹತ್ಸಂಕಲ್ಪಕ್ಕೆ ಪೂರಕವಾಗಿ ನಡೆಯುತ್ತಿರುವ ವಿಷ್ಣುಸಹಸ್ರನಾಮ ಲೇಖನ ಯಜ್ಞದ ಪುಸ್ತಕ ಸಮರ್ಪಣೆ, ಛತ್ರ ಸಮರ್ಪಣೆ, ಪಾಂಚಜನ್ಯ ಸೇವೆಗಳೊಂದಿಗೆ ಕೃಷ್ಣಾರ್ಪಣಮ್ ಸಂಪನ್ನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















