ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇತ್ತೀಚೆಗೆ ಬಿಡುಗಡೆಯಾಗಿ ಪರಿಸರಾಸಕ್ತರ ಗಮನ ಸೆಳೆದ ‘ಜಲಪಾತ’ Jalapatha ಚಲನಚಿತ್ರದ ಉಚಿತ ಪ್ರದರ್ಶನ ಹಾಗೂ ವೀಕ್ಷಣೆಯನ್ನು ಮಾರ್ಚ್ 3ರಂದು ನಗರದಲ್ಲಿ ಆಯೋಜಿಸಲಾಗಿದೆ.
ಅಂದು ಸಂಜೆ 6.30ಕ್ಕೆ ವಿನಾಯಕ ನಗರದ ನವ್ಯಶ್ರೀ ಸಭಾಂಗಣದಲ್ಲಿ ಉಚಿತ ಪ್ರದರ್ಶನ ಆಯೋಜಿಸಲಾಗಿದ್ದು, ಮಲೆನಾಡಿಗರೇ ನಿರ್ಮಿಸಿ, ನಿರ್ದೇಶಿಸಿದ ಈ ಸಿನಿಮಾದ ಮುಕ್ತ ವೀಕ್ಷಣೆಯನ್ನು ಸಾರ್ವಜನಿಕರು ಹಾಗೂ ಪರಿಸರಾಸಕ್ತರಿಗಾಗಿ ಏರ್ಪಡಿಸಲಾಗಿದೆ.
ಈ ಕುರಿತಂತೆ ಮನವಿ ಮಾಡಿರುವ ನವ್ಯಶ್ರೀ ಈಶ್ವರವನ ಚಾರಿಟೆಬಲ್ ಟ್ರಸ್ಟ್ ಎಂ.ವಿ. ನಾಗೇಶ್, ಮಲೆನಾಡಿನಲ್ಲಿ ಇತ್ತೀಚೆಗೆ ಆಗುತ್ತಿರುವ ಪರಿಸರ ವೈಪರೀತ್ಯಗಳ ಕಾರಣ ಅಲ್ಲಿನ ಜನ ಜೀವನದ ಮೇಲಿನ ಅಡ್ಡ ಪರಿಣಾಮಗಳನ್ನು ಈ ಚಿತ್ರದಲ್ಲಿ ಮನೋಜ್ಞವಾಗಿ ಬಿಂಬಿಸಲಾಗಿದೆ. ಪರಿಸರಪ್ರೇಮಿಗಳು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದ್ದಾರೆ.
Also read: ರಾಮೇಶ್ವರಂ ಕೆಫೆ ಸ್ಪೋಟ | ಸಿಸಿಟಿವಿಯಲ್ಲಿ ರೂವಾರಿ ಚಹರೆ ಪತ್ತೆ | ಅದೇ ಹೊಟೇಲ್’ನಲ್ಲಿ ರವೆ ಇಡ್ಲಿ ತಿಂದಿದ್ದ ಆರೋಪಿ
ಇಂದು ಮಾನವ ಜನಾಂಗಕ್ಕೆ ದೊಡ್ಡ ಸವಾಲಾಗಿ ಎದುರು ನಿಂತಿರುವ ಭೂತಾಕಾರದ ಸಮಸ್ಯೆ ಎಂದರೆ ಅದು ಪರಿಸರ ನಾಶ ಹಾಗೂ ಮಾಲಿನ್ಯ . ನಾವು ಕುಡಿಯುವ ನೀರು, ಸೇವಿಸುವ ಆಹಾರ, ಉಸಿರಾಡುವ ಗಾಳಿ ಪ್ರತಿಯೊಂದು ಕಲುಷಿತಗೊಂಡು ಜೀವನ ದುರ್ಭರವಾಗಿದೆ. ತಾಂತ್ರಿಕವಾಗಿ ಹಾಗೂ ವೈಜ್ಞಾನಿಕವಾಗಿ ಮಾನವ ಎಷ್ಟೇ ಮುಂದುವರೆದರೂ ನಮ್ಮ ಅಸಡ್ಡೆ, ಅಜ್ಞಾನದ ಕಾರಣ ಪರಿಸರ ನಾಶಕ್ಕೆ ನಾವೇ ಕಾರಣರಾಗಿದ್ದೇವೆ. ಈ ಉಚಿತ ವೀಕ್ಷಣೆಗೆ ಆಸಕ್ತರು ತಮ್ಮ ಹೆಸರನ್ನು ನೊಂದಾಯಿಸಲು ಕೋರಲಾಗಿದೆ. 98442 82504, 94481 39271.
ವ್ಯವಸ್ಥೆಯ ದೃಷ್ಟಿಯಿಂದ ಈ ಉಚಿತ ಚಲನಚಿತ್ರ ವೀಕ್ಷಣೆಗೆ ಆಸಕ್ತರು ಕೆಳಗಿನ ಲಿಂಕ್ ಮೂಲಕ CINEMA YES ಎಂದು ಉತ್ತರಿಸಲು ಕೋರಲಾಗಿದೆ. https://wa.me/message/XQL7KGUKMXPUD1
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post