ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಮಮಂದಿರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಅಯೋಧ್ಯೆಯಲ್ಲಿ ಮಠಾಧೀಶರ ಸಭೆ ಕರೆಯಲಾಗಿದ್ದು, ಉಡುಪಿಯಿಂದ ಬೆಂಗಳೂರಿಗೆ ತೆರಳುವ ಮಾರ್ಗಮಧ್ಯೆ ಈಶ್ವರಪ್ಪ Eshwarappa ಅವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಲು ಆಗಮಿಸಿದ್ದೆನೆ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ Pejawara Shri Vishwaprasanna Theertha Swamiji ಹೇಳಿದರು.
ಈಶ್ವರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು ಈಶ್ವರಪ್ಪ ಅವರ ಮೇಲೆ ಬಂದಿರುವ ಆರೋಪದಿಂದ ಆದಷ್ಟು ಬೇಗ ಅವರು ಮುಕ್ತರಾಗಲಿ ಹಾಗೂ ಶ್ರೀರಾಮಚಂದ್ರನ ಶ್ರೀರಕ್ಷೆ ಅವರ ಮೇಲಿರಲಿ ಎಂದು ಹಾರೈಸಿದರು.
ದೇಶದಲ್ಲಿ ಹನುಮ ಜಯಂತಿ ಮತ್ತು ರಾಮನವಮಿ ಆಚರಣೆ ಸಂದರ್ಭಗಳಲ್ಲಿ ಕಲ್ಲುತೂರಾಟ ನಡೆಸಿರುವುದು ತುಂಬಾ ನೋವಿನ ಸಂಗತಿ. ರಾಮ, ಹನುಮ ಹುಟ್ಟಿದ ನಾಡಿನಲ್ಲಿ ಅವರ ಉತ್ಸವಗಳ ಸಂದರ್ಭದಲ್ಲಿ ಈ ರೀತಿಯ ಹಿಂದೂಗಳ ಧಾರ್ಮಿಕ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸಖ್ಯವಲ್ಲ. ಈ ರೀತಿಯ ಪ್ರತಿರೋಧಗಳನ್ನು ವ್ಯಕ್ತಪಡಿಸದೆ ಸಹಬಾಳ್ವೆಯಿಂದ ಜೀವನ ನಡೆಸಬೇಕು ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಪೇಜಾವರ ಶ್ರೀಗಳು ಇಫ್ತಿಯಾರ್ ಕೂಟದಲ್ಲಿ ಭಾಗವಹಿಸುವಂತಹ ನಿಯಮವನ್ನು ಅನುಸರಿಸಿದ್ದರು ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಬದಲಾವಣೆ ಒಬ್ಬರಿಂದ ಸಾಧ್ಯವಿಲ್ಲ. ಗುರುಗಳು ಅವರನ್ನು ಮಠಕ್ಕೆ ಕರೆದು ಸ್ವಾಗತ ಮಾಡಿದರು. ಆದರೆ ಯಾವ ಮಸೀದಿಯಲ್ಲಿ ಮಠಾಧೀಶರನ್ನು ಕರೆದು ಸತ್ಕರಿಸಿಲ್ಲ. ಹೀಗೆ ಒಂದು ಬದಿಯಲ್ಲಿ ಒಲವು ತೋರಿಸುವುದು, ಇನ್ನೊಂದು ಬದಿಯಿಂದ ವಿರೋಧ ವ್ಯಕ್ತಪಡಿಸುವುದು ಎಷ್ಟರಮಟ್ಟಿಗೆ ಸರಿ. ಎರಡೂ ಕಡೆಯಿಂದ ಹೂಂದಾಣಿಕೆ ಅಗತ್ಯ ಎಂದರು.
Also read: ಏ.20, 21ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿವಮೊಗ್ಗಕ್ಕೆ ಭೇಟಿ…
ಸಚಿವ ಈಶ್ವರಪ್ಪ ಮಾತನಾಡಿ ಎಲ್ಲಾ ಸಮಾಜದ ಶ್ರೀಗಳು ಮನೆಗೆ ಆಗಮಿಸಿ ಆಶೀರ್ವದಿಸುತ್ತಿರುವುದು ತನ್ನ ಭಾಗ್ಯವಾಗಿದೆ. ಪೇಜಾವರ ಶ್ರೀಗಳು ಆಗಮಿಸಿರುವುದು ಸಂತಸ ತಂದಿದೆ ಎಂದರು.
ತಮ್ಮ ಮೇಲೆ ಬಂದಿರುವ ಗುರುತರ ಆರೋಪದಿಂದ ಮುಕ್ತರಾಗುವಂತೆ ಶ್ರೀಗಳು ಹಾರೈಸಿರುವುದು, ಸಂಕಷ್ಟದಿಂದ ಆದಷ್ಟು ಬೇಗ ಹೊರ ಬರುತ್ತೇನೆ ಎಂಬ ನಂಬಿಕೆಯನ್ನು ಇನ್ನೂ ಬಲವಾಗಿಸಿದೆ. ಶ್ರೀಗಳು ಪ್ರಸ್ತಾಪಿಸಿರುವ ಹನುಮ ಜಯಂತಿ ಮತ್ತು ರಾಮನವಮಿ ಸಂದರ್ಭದಲ್ಲಿ ನಡೆದಿರುವ ಆಘಾತಕಾರಿ ಕೃತ್ಯಗಳ ಬಗ್ಗೆ ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಳಿ ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post