ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೇಂದ್ರ-ರಾಜ್ಯ ಸರ್ಕಾರಗಳು ಸಣ್ಣ ಉದ್ದಿಮೆದಾರರು, ವ್ಯಾಪಾರಸ್ಥರಿಗೆ ವಿಶೇಷವಾದ ಹಣಕಾಸು ನೆರವನ್ನು ನೀಡುತ್ತಿದ್ದು ಅದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಕೆನರಾ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ನಾಗರಾಜ ಕೆಂಗಣ್ಣವರ್ ಕರೆ ನೀಡಿದರು.
ಅವರು ನಗರದ ಶಂಕರ ಮಠ ರಸ್ತೆಯಲ್ಲಿನ ಓಲೀಕರ್ ಟ್ರ್ಯಾಕ್ಟರ್ಸ್ ನಲ್ಲಿ ಟಿವಿಎಸ್ ಕಂಪನಿಯ ಕಿಂಗ್ ಕಾರ್ಗೋ ಸರಕು ಸಾಗಣೆಯ ತ್ರಿಚಕ್ರ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಟಿವಿಸ್ ಕಂಪನಿಯ ಈ ವಾಹನ ಪರಿಸರ ಸ್ನೇಹಿಯಾಗಿದ್ದು ದಿನಸಿ, ತರಕಾರಿ ಸಂಚಾರಿ ತಿನಿಸು ಅಂಗಡಿ ಮಾಡುವವರಿಗೆ ಯೋಗ್ಯವಾಗಿದೆ. ತಮ್ಮ ಬ್ಯಾಂಕು ಸೇರಿದಂತೆ ಇನ್ನುಳಿದ ರಾಷ್ಟ್ರೀಕೃತ ಬ್ಯಾಂಕುಗಳು, ಖಾಸಗಿ ಹಣಕಾಸು ಸಂಸ್ಥೆಯವರು ಉದ್ದಿಮೆ ಮಾಡಲು ಮುಂದೆ ಬರುವವರಿಗೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲು ಬದ್ಧವಾಗಿವೆ. ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಯಾದ ಆತ್ಮ ನಿರ್ಭರ ಭಾರತಕ್ಕೆ ಇದು ಪೂರಕವಾಗಿದೆ ಎಂದು ತಿಳಿಸಿದರು.
ಓಲಿಕರ್ ಟ್ರ್ಯಾಕ್ಟರ್ಸ್ ನ ಮಾಲೀಕರಾದ ನಿಧಿನ ಓಲಿಕರ್ ಮಾತನಾಡಿ, ಈ ನೂತನ ಕಾರ್ಗೋ ತ್ರಿಚಕ್ರ ವಾಹನ ವ್ಯಾಪಾರಸ್ಥರಿಗೆ, ರೈತರಿಗೆ, ಮನೆವಾರಿಗೆಯವರಿಗೆ ಉಪಯೋಗಕ್ಕೆ ಅತ್ಯುತ್ತಮವಾಗಿದೆ. ಪೆಟ್ರೊಲ್ ಮತ್ತು ಸಿಎನ್ ಜಿ ಗ್ಯಾಸ್ ಎರಡನ್ನೂ ಬಳಸಿ ಈ ವಾಹನ ಬಳಸಬಹುದು. ಅತ್ಯಂತ ಕಡಿಮೆ ಖರ್ಚಿನಲ್ಲಿ ವಾಹನ ಬಳಸಿ ಹೆಚ್ಚಿನ ಆದಾಯವನ್ನು ಗಳಿಸಬಹುದು ಎಂದು ಮಾಹಿತಿ ನೀಡಿದರು.
ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಅಧ್ಯಕ್ಷರಾದ ಯು.ಎಂ. ಶಿವರಾಜು, ಉಜ್ಜೀವನ ಫೈನಾನ್ಸ್ ನ ಖಲೀಮ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post