ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ರೈತರು ಪ್ರಬುದ್ದರಗಬೇಕು, ಜಾತಿ ಮತ ಎಂದು ಹೋಗಬೇಡಿ ನಾವೆಲ್ಲರು ಒಂದೇ ಜಾತಿ ಅದುವೇ ರೈತ ಜಾತಿ, ರೈತರ ಮಕ್ಕಳಾದ ನಾವೆಲ್ಲರೂ ಒಗ್ಗಟ್ಟಿನಿಂದ ಹೋಗಬೇಕು ಎಂದು ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಹೇಳಿದ್ದಾರೆ.
ಭದ್ರಾ ಕಾಡಾ ವ್ಯಾಪ್ತಿಯ ಭದ್ರಾವತಿ ತಾಲೂಕು ಸಿಂಗನಮನೆ ಜಿಲ್ಲಾ ಪಂಚಾಯತ್ ಭಾಗದ ಚಿಕ್ಕಗೊಪ್ಪೇನಹಳ್ಳಿ, ಹೊನ್ನಟಿ ಹೊಸೂರು ಗ್ರಾಮಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.
ಈ ವೇಳೆ ಹೊಲಗಳಿಗೆ ಹೋಗುವ ಮಾರ್ಗಗಳ ರಸ್ತೆಗಳು ಸಂಪೂರ್ಣ ಗುಂಡಿ ಬಿದಿದ್ದು ಅದನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದರು.
ಜೊತೆಗೆ ಚಾನೆಲ್ ಏರಿಗೆ ಸಂಬಂಧ ಪಟ್ಟ ನಾಲೆ 8, 9, 10ರಲ್ಲಿ ನೀರು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೆ ನೀರು ಪೋಲಾಗುತ್ತಿದೆ ಇದರಿಂದ ಜಮೀನಿನ ಕೊನೆ ಭಾಗದವರೆಗೆ ತಲುಪದೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ ಶೀಘ್ರವೇ ಅದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಮುಂದುವರೆದು ಹೊಲಗಳಿಗೆ ಬಸಿ ಗಾಲುವೆ ನಿರ್ಮಿಸಿ ಕೊಡುವಂತೆ, ನೀರು ಸರಿಯಾಗಿ ಹರಿದುಹೋಗಲು ಹೊಲ ಗಾಲುವೇ ಮಾಡಿಕೊಡುವಂತೆ, ಬಾಕಿ ನಿಂತಿರುವ ಕಾಮಗಾರಿಗಳನ್ನು ಶೀಘ್ರವೇ ಚಾಲನೆ ಕೊಡುವಂತೆ ಗ್ರಾಮದ ರೈತರು ಒತ್ತಾಯಿಸಿದರು.
ನಿಮ್ಮ ಹೋರಾಟ ನಮಗೆಲ್ಲ ಸ್ಫೂರ್ತಿದಾಯಕ. ನಿಮ್ಮನ್ನು ಅಧ್ಯಕ್ಷ ಸ್ಥಾನದಲ್ಲಿ ಮುಖ್ಯಮಂತ್ರಿಗಳು ಕೂರಿಸುವುದು ಸ್ವಾಗತಾರ್ಹ. ರೈತರ ನಾಡಿ ಮಿಡಿತ ಬಲ್ಲ ನೀವು ನಮ್ಮ ಸಮಸ್ಯೆಗಳನ್ನು ಬಗೆಹರಿಸಿ ಕೊಡುತ್ತೀರಾ ಎಂದು ಬಲವಾಗಿ ನಂಬಿದ್ದೇವೆ ಎಂದು ರೈತರು ಹೇಳಿದರು.
ಈ ವೇಳೆ ಮಾತನಾಡಿದ ಪವಿತ್ರ ರಾಮಯ್ಯ, ನೀವು ನನ್ನ ಮೇಲೆ ಇಟ್ಟಿರುವ ಅಪಾರವಾದ ನಂಬಿಕೆಗೆ ನಾನು ಆಭಾರಿಯಾಗಿದ್ದೇನೆ. ನಿಮ್ಮ ನಿರೀಕ್ಷೆಗೂ ಮೀರಿ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮೂವತ್ತು ವರ್ಷಗಳ ನನ್ನ ಹೋರಾಟ ರೈತರ ಪರವಾಗಿಯೇ ಮಾಡಿದ್ದು. ನಿಮ್ಮ ಪ್ರತಿಯೊಂದು ಸಮಸ್ಯೆಗಳು ನನ್ನ ಗಮನಕ್ಕೆ ಇದ್ದು, ಅದನ್ನು ಪರಿಹರಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ರೈತರು ಪ್ರಬುದ್ದರಗಬೇಕು, ಜಾತಿ ಮತ ಎಂದು ಹೋಗಬೇಡಿ, ನಾವೆಲ್ಲರು ಒಂದೇ ಜಾತಿ ಅದುವೇ ರೈತ ಜಾತಿ, ರೈತರ ಮಕ್ಕಳಾದ ನಾವೆಲ್ಲರೂ ಒಗ್ಗಟ್ಟಿನಿಂದ ಹೋಗಬೇಕು. ರೈತರು ತಾಳ್ಮೆಯಿಂದ ವರ್ತಿಸಬೇಕು ಎಂದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೂಲತಃ ರೈತರ ಮಗನಾಗಿದ್ದು ಅವರಿಗೆ ರೈತರ ಪ್ರತಿಯೊಂದು ಸಮಸ್ಯೆಗಳ ಬಗ್ಗೆ ಅರಿವಿದೆ. ಭದ್ರಾ ಕಾಡಾ ಪ್ರಾಧಿಕಾರಕ್ಕೆ ಸೂಕ್ತ ಅನುದಾನ ಬಿಡುಗಡೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಶೀಘ್ರವೇ ನಿಮ್ಮ ಪ್ರತಿಯೊಂದು ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು ಎಂದರು.
ಜೊತೆಗೆ ರೈತರ ಆದಾಯ ದುಪ್ಪಟ್ಟು ಆಗಬೇಕು ಎಂಬುದೇ ನನ್ನ ಧ್ಯೇಯ ಉದ್ದೇಶವಾಗಿದ್ದು, ಅದರೆಡೆಗೆ ನನ್ನ ಗಮನ ಕೇಂದ್ರಕರಿಸುತ್ತೇನೆ ಎಂದರು.
ಭದ್ರಾ ಕಾಡಾ ಪ್ರಾಧಿಕಾರವನ್ನು ಮಾದರಿ ಪ್ರಾಧಿಕಾರ ಮಾಡುವುದೇ ನನ್ನ ಕನಸು. ರೈತ ಸ್ನೇಹಿ ಪ್ರಾಧಿಕಾರವಾಗಬೇಕು ಎಂಬುದು ನನ್ನ ಕನಸು ಎಂದರು.
ನಿರ್ದೇಶಕರಾದ ಷಡಾಕ್ಷರಿ ಅವರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮ ಪ್ರಸಾದ್, ತಾಲೂಕು ಅಧ್ಯಕ್ಷರಾದ ಪ್ರಭಾಕರ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post