ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ರಿಪ್ಪನ್’ಪೇಟೆ: ರಿಪ್ಪನ್’ಪೇಟೆ, ಅರಸಾಳು ಹುಂಚ ಭಾಗದ ರೈತರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿ ಕಾಡುತ್ತಿದ್ದ ವಿದ್ಯುತ್ ಕಣ್ಣಾಮುಚ್ಚಾಲೆಗೆ ಶಾಸಕ ಹಾಲಪ್ಪನವರ ಪ್ರಯತ್ನದಿಂದ ಮುಕ್ತಿ ದೊರೆತಿದೆ.
ರಿಪ್ಪನ್’ಪೇಟೆ ಮೆಸ್ಕಾಂ ವ್ಯಾಪ್ತಿಯ ಉಪ ವಿದ್ಯುತ್ ಸ್ಥಾವರದಲ್ಲಿರುವ 10 ಎಂವಿಎ ಟ್ರಾನ್ಸ್’ಫಾರ್ಮರ್’ಗೆ ಓವರ್ ಲೋಡ್ ಸಮಸ್ಯೆ ಉಂಟಾಗಿ ರೈತರು ಹಾಗೂ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿತ್ತು. ಈ ಸಮಸ್ಯೆ ಪರಿಹಾರ ಮಾಡುವಂತೆ ಶಾಸಕ ಎಚ್. ಹಾಲಪ್ಪ ಅವರಿಗೆ ಸ್ಥಳೀಯರು ಮನವಿ ಮಾಡಿದ್ದರು.
ಶಾಸಕರು ಹೆಚ್ಚುವರಿ 10 ಎಂವಿಎ ಪರಿವರ್ತಕ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಾಗೂ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳನ್ನು ಭೇಟಿ ಮನವಿ ಸಲ್ಲಿಸಿದ್ದರು. ಅದರ ಪ್ರತಿಫಲವಾಗಿ ಹೆಚ್ಚುವರಿ 10 ಎಂವಿಎ, ಟ್ರಾನ್ಸ್’ಫಾರ್ಮರ್ ಸೋಮವಾರ ರಿಪ್ಪನಪೇಟೆ ಉಪ ವಿಭಾಗಕ್ಕೆ ಬಂದಿರುವುದ ಗಮನಾರ್ಹ ಸಂಗತಿ.
ಇದರಿಂದ ರಿಪ್ಪನಪೇಟೆ, ಅರಸಾಳು, ಕೆಂಚನಾಳ, ಬಾಳೂರು, ಬೆಳ್ಳೂರು, ಜೇನಿ, ಗರ್ತಿಕೆರೆ, ಹುಂಚ ಗ್ರಾಪಂ ವ್ಯಾಪ್ತಿಯ ರೈತರಿಗೆ, ಸಾರ್ವಜನಿಕರಿಗೆ ವಿದ್ಯುತ್ ಕಣ್ಣಾಮುಚ್ಚಾಲೆಗೆ ಮುಕ್ತಿ ದೊರೆಯಲಿದೆ.
ಶಾಸಕರ ಈ ಕಾರ್ಯಕ್ಕೆ ಸ್ಥಳೀಯರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post