ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಹಲ್ಗಾಮ್ ಉಗ್ರರ ದಾಳಿ #Pahalgam Terror Attack ದೇಶದಲ್ಲಿ ಅಖಂಡತೆಗೆ ಕಾರಣವಾಗಿದೆ. ಪಾಕಿಸ್ತಾನ #Pakistan ತನ್ನ ಶವಕ್ಕೆ ತಾನೇ ಕೊನೆಯ ಮೊಳೆ ಹೊಡೆದುಕೊಂಡು ಅದರ ಅಂತ್ಯಕ್ಕೆ ನಾಂದಿಹಾಡಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ #Eshwarappa ಹೇಳಿದರು.
ಮೃತ ಮಂಜುನಾಥ್ ರಾವ್ #Manjunath Rao ಮನೆಗೆ ಭೇಟಿ ನೀಡಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಸರ್ಕಾರ ಕೇವಲ ಎರಡು ಗಂಟೆಯಲ್ಲಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ಪಾಕಿಸ್ತಾನಕ್ಕೆ ಜಲ ಬಾಂಬ್ ಹಾಕಿದೆ. 1969ರ ಸಿಂಧು ನದಿ ಒಪ್ಪಂದದ ಪ್ರಕಾರ ನಾವು ನೀಡುತ್ತಿದ್ದ ನೀರನ್ನು ನಿಲ್ಲಿಸಿ ಪಾಕಿಸ್ತಾನಿ ಪ್ರಜೆಗಳನ್ನು ಮತ್ತು ರಾಯಬಾರಿಗಳನ್ನು ಕೂಡಲೇ ದೇಶಬಿಡುವಂತೆ ತಾಕೀತು ಮಾಡಿದೆ. ಮೊದಲೇ ತೀರ ಹೀನಾಯ ಸ್ಥಿತಿಯಲ್ಲಿರುವ ಪಾಕಿಸ್ತಾನಕ್ಕೆ ಆರ್ಥಿಕ ಹೊಡೆತ ನೀಡಲು ಈಗಾಗಲೇ ಮೋದಿ ಕ್ರಮ ಕೈಗೊಂಡಿದ್ದಾರೆ ಎಂದರು.
ಇಂದು ಶ್ರದ್ದಾಂಜಲಿ ಅರ್ಪಿಸಿ ಇನ್ಮುಂದೆ ರಾಷ್ಟ್ರಭಕ್ತರು ಏನು ಮಾಡಲಿದ್ದಾರೆ ಕಾದು ನೋಡಬೇಕಿದೆ. ಅಖಂಡ ಭಾರತ ಆಗುತ್ತೆ. ಇಂದಲ ನಾಳೆ ಪಾಕಿಸ್ತಾನ್ ಭೂಪಟದಿಂದ ನಾಶವಾಗಲಿದ್ದು, ದೇಶದಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತವಾಗಿಸಿ ಅಖಂಡ ಭಾರತವಾಗಲು ಇದೊಂದು ಅವಕಾಶ ಎಂದರು.
ಕಾಂಗ್ರೆಸ್ ಮುಖಂಡ ರಾಬರ್ಟ್ ವಾದ್ರಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಆತ ದೇಶದ್ರೋಹಿ. ಆದರೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಈ ಸಂದರ್ಭದಲ್ಲಿ ದೇಶವೊಂದಾಗಿ ಇರಬೇಕು.ಕೇಂದ್ರ ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎನ್ನುವ ಹೇಳಿಕೆಯನ್ನು ನಾನು ಸ್ವಾಗತ ಮಾಡುತ್ತೇನೆ. ಹಿಂದೆ ಕೂಡ ವಾಜಪೇಯಿ ಅವರು ಭಾರತಕ್ಕೆ ಸಂಕಟ ಬಂದಾಗ ಪ್ರಧಾನಿ ಇಂದಿರಾಗಾಂಧಿಯವರನ್ನು ದುರ್ಗೆ ಎಂದು ಹೊಗಳಿ ಬೆಂಬಲ ಸೂಚಿಸಿದ್ದರು. ದೇಶದ ಸಂಕಷ್ಟದ ಸಂದರ್ಭದಲ್ಲಿ ರಾಜಕಾರಣ ಯಾರೂ ಕೂಡ ಮಾಡಬಾರದು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post