ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ KSRTC ನೂತನವಾಗಿ ಪರಿಚಯಿಸಿರುವ ಅತ್ಯಾಧುನಿಕ ಪಲ್ಲಕ್ಕಿ Pallakki ಬಸ್ ಸೇವೆಯನ್ನು ಜಿಲ್ಲೆಯ ಮೂರು ನಗರಗಳಿಂದ ಆರಂಭಿಸಿದೆ.
ಸಾಗರ ಘಟಕದಿಂದ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದ್ದ ಸಾಗರ-ಸೊರಬ-ಶಿಕಾರಿಪುರ-ಶಿವಮೊಗ್ಗ-ಭದ್ರಾವತಿ ಮೂಲಕ ಬೆಂಗಳೂರು ತಲುಪಲಿದೆ.
ಟೈಮಿಂಗ್ ಏನು?
ರಾತ್ರಿ 9 ಗಂಟೆಗೆ ಸಾಗರದಿಂದ ಹೊರಡುವ ಬಸ್ 10 ಗಂಟೆಗೆ ಸೊರಬ, 11ಕ್ಕೆ ಶಿಕಾರಿಪುರ, ಮಧ್ಯರಾತ್ರಿ 12ಕ್ಕೆ ಶಿವಮೊಗ್ಗ, 12.30ಕ್ಕೆ ಭದ್ರಾವತಿ ಮೂಲಕ ತೆರಳಿ ಮುಂಜಾನೆ 6.30ಕ್ಕೆ ಬೆಂಗಳೂರು ತಲುಪಲಿದೆ.
Also read: Bengaluru MP Tejaswi Surya meets DCM Shivakumar: Here is the reason
ಅದೇ ರೀತಿ, ರಾತ್ರಿ 9.35ಕ್ಕೆ ಬೆಂಗಳೂರಿನಿAದ ಹೊರಡುವ ಬಸ್, ನಸುಕಿನ 1.50 ಭದ್ರಾವತಿ, 2.20ಕ್ಕೆ ಶಿವಮೊಗ್ಗ, 3.20ಕ್ಕೆ ಶಿಕಾರಿಪುರ, 5.40ಕ್ಕೆ ಸೊರಬ ತೆರಳಿ 6.40ಕ್ಕೆ ಸಾಗರ ತಲುಪಲಿದೆ.
ಮುಂಗಡ ಬುಕ್ಕಿಂಗ್
ಕೆಎಸ್’ಆರ್’ಟಿಸಿ ಬೇರೆ ಬಸ್’ಗಳಿಗೆ ಮುಂಗಡ ಬುಕ್ಕಿಂಗ್ ಮಾಡುವಂತೆಯೇ ಈ ಬಸ್’ಗೂ ಸಹ ಮುಂಗಡ ಕಾಯ್ದಿರಿಸಬಹುದಾಗಿದೆ. ಪ್ರಯಾಣಿಕರು ಅಧಿಕೃತ ವೆಬ್ ಸೈಟ್ www.ksrtc.in ಗೆ ಭೇಟಿ ನೀಡಿ ರಿಸರ್ವ್ ಮಾಡಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post