ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೇಂದ್ರ ಲೋಕ ಸೇವಾ ಆಯೋಗ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ನಗರದ ಪೃಥ್ವಿ ಎಸ್. ಹುಲ್ಲತ್ತಿ ಅವರು 582ನೆಯ ಗಳಿಸಿದ್ದಾರೆ.
ಅರಬಿಂದೋ ಜ್ಞಾನದೀಪ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮುಗಿಸಿ, ಜೆಎನ್’ಎನ್’ಸಿಇ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವ ಇವರು, ಕೃಷಿಕ ಕುಟುಂಬದ ಹಿನ್ನೆಲೆಯಿಂದ ಬಂದವರು.
2 ನೆಯ ಪ್ರಯತ್ನದಲ್ಲಿಯೇ ಯುಪಿಎಸ್’ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದು ವಿಶೇಷವಾಗಿದ್ದು, 582ನೆಯ ರ್ಯಾಂಕ್ ಗಳಿಸುವ ಮೂಲಕ ಮಲೆನಾಡಿಗೆ ಹೆಮ್ಮೆ ತಂದಿದ್ದಾರೆ.
ಪ್ರದೀಪ್ ಸಿಂಗ್ ದೇಶಕ್ಕೇ ಪ್ರಥಮ
ಇಂದು ಪ್ರಕಟವಾದ ನಾಗರಿಕ ಸೇವಾ ಪರೀಕ್ಷೆಗಳ 2019 ರ ಆಯ್ಕೆ ಪಟ್ಟಿಯಲ್ಲಿ ಪ್ರದೀಪ್ ಸಿಂಗ್ ಪ್ರಥಮ ರ್ಯಾಂಕ್ ಪಡೆದರೆ, ಜತಿನ್ ಕಿಶೋರ್ ಮತ್ತು ಪ್ರತಿಭಾ ವರ್ಮಾ ನಂತರದ ಸ್ಥಾನದಲ್ಲಿದ್ದಾರೆ. ಟಾಪ್-ಟೆನ್ ಪಟ್ಟಿಯಲ್ಲಿ ಮೂರು ಮಹಿಳೆಯರು ಮತ್ತು ಟಾಪ್ -25 ಶ್ರೇಯಾಂಕಗಳಲ್ಲಿ ಕನಿಷ್ಟ ಒಂಬತ್ತು ಮಂದಿ ಇದ್ದಾರೆ.
ಆಯ್ಕೆಯಾದ 829 ಜನರಲ್ಲಿ 304 ಮಂದಿ ಸಾಮಾನ್ಯ ವರ್ಗದವರಾಗಿದ್ದರೆ 78 ಮಂದಿ ಆರ್ಥಿಕವಾಗಿ ಹಿಂದುಳಿದ ವರ್ಗದವರು, 251 ಮಂದಿ ಇತರ ಹಿಂದುಳಿದ ವರ್ಗದವರು (ಒಬಿಸಿ), 129 ಪರಿಶಿಷ್ಟ ಜಾತಿ ಮತ್ತು 67 ಮಂದಿ ಪರಿಶಿಷ್ಟ ಪಂಗಡದವರು. ಯುಪಿಎಸ್ಸಿ 182 ಅಭ್ಯರ್ಥಿಗಳ ಏಕೀಕೃತ ಮೀಸಲು ಪಟ್ಟಿಯನ್ನು ಸಹ ನಿರ್ವಹಿಸಿದೆ. ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ನಂತಹ ವಿವಿಧ ಸೇವೆಗಳು ಒಟ್ಟು 927 ಹುದ್ದೆಗಳನ್ನು ವರದಿ ಮಾಡಿದ್ದು, ಗ್ರೂಪ್ ಎ ಸರ್ವೀಸಸ್ 438 ಹುದ್ದೆಗಳೊಂದಿಗೆ ಅಗ್ರಸ್ಥಾನದಲ್ಲಿದೆ.
Get In Touch With Us info@kalpa.news Whatsapp: 9481252093
Discussion about this post