ಕಲ್ಪ ಮೀಡಿಯಾ ಹೌಸ್
ಆನಂದಪುರಂ(ಸಾಗರ): ಓದಿ ಜೀವನದಲ್ಲಿ ಉನ್ನತ ಹುದ್ದೆಗೇರುವ ಕನಸು ಕಂಡಿದ್ದ ತಾಲೂಕಿನ ಸರಗುಂದದ ವಿದ್ಯಾರ್ಥಿಯ ಬದುಕಲ್ಲಿ ಇದೀಗ ಕತ್ತಲು ಆವರಿಸಿದಂತಾಗಿದೆ.
ಇತರ ವಿದ್ಯಾರ್ಥಿಗಳಂತೆ ಆಟ ಪಾಠ ಕಲಿಯೋಣವೆಂದರೆ ನಡೆಯಲು ಬಾರದ ಪರಿಸ್ಥಿತಿಗೆ ಈ ವಿದ್ಯಾರ್ಥಿ ಈಗ ತಲುಪಿದ್ದಾನೆ ಈ ವಿದ್ಯಾರ್ಥಿ.ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಸರಗುಂದ ಗ್ರಾಮದ ವಿದ್ಯಾರ್ಥಿ ಸ್ಕಂದನ ಎಂಬ ವಿದ್ಯಾರ್ಥಿ ಹತ್ತನೆಯ ತರಗತಿ ಓದುತ್ತಿದ್ದ. ಆತ ಮನೆಯ ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಕೊಳಕುಮಂಡಲ ಹಾವು ಕಚ್ಚಿ ಇದೀಗ ಕಾಲು ಕೊಳೆಯುವಂತಹ ಸ್ಥಿತಿ ಬಂದಿದೆ. ಈತ ಇಂತಹ ಸ್ಥಿತಿಯಲ್ಲೇ ತನ್ನ ಪರೀಕ್ಷೆಯನ್ನೂ ಸಹ ಬರೆದಿದ್ದ.
ಆದರೆ, ಈತನ ಮನೆಯಲ್ಲಿ ನೋಡಿದರೆ ಆರ್ಥಿಕ ಸ್ಥಿತಿ ಹೀನಾಯವಾಗಿದ್ದು ತಂದೆ ಕಳೆದ ಹತ್ತು ವರ್ಷಗಳಿಂದ ಬಿಪಿ-ಶುಗರ್’ನಿಂದ ಹಾಸಿಗೆ ಹಿಡಿದಿದ್ದಾರೆ. ಇದೀಗ ಜೀವನ ನಡೆಸಲು ಮಗ ಆಸರೆಯಾಗುತ್ತಾನೆ ಎಂಬ ತಂದೆತಾಯಿಯ ಕನಸಿಗೆ ಭಗ್ನವುಂಟಾಗಿದೆ.ಇವರ ಸಹೋದರಿಯರು ಕೂಡ ಇನ್ನೂ ವಿದ್ಯಾರ್ಥಿಗಳಾಗಿದ್ದು ಮನೆಯ ಹೆಣ್ಣು ಮಗಳು ದುಡಿದು ಈ ನಾಲ್ವರನ್ನು ಸಾಕುವಂತಹ ಪರಿಸ್ಥಿತಿಗೆ ಈಗ ಈ ಕುಟುಂಬ ತಲುಪಿದೆ.
ಮನೆಯಲ್ಲಿ ಒಂದೊಂದು ರೂಪಾಯಿಗೂ ಕೂಡ ಪರಿತಪಿಸುವಂತಹ ಪರಿಸ್ಥಿತಿಗೆ ಈ ಕುಟುಂಬ ಈಗ ತಲುಪಿದ್ದು ಈ ಹುಡುಗನ ಚಿಕಿತ್ಸೆಗೂ ಕೂಡ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ.
ಯಾರಾದರೂ ದಾನಿಗಳು ಸಹಾಯಕ್ಕೆ ಮುಂದಾದರೆ ಸಾಕು ಅನ್ನುವಂಥ ಪರಿಸ್ಥಿತಿಯಲ್ಲಿ ಈ ಕುಟುಂಬ ಈಗ ಪರಿತಪಿಸುತ್ತಿದೆ.
ಜನಪ್ರತಿನಿಧಿಗಳು ಹಾಗೂ ನೆರೆಹೊರೆಯವರು ಈಗ ಈ ಕುಟುಂಬ ಆರ್ಥಿಕ ಸಹಾಯವನ್ನು ನೀಡುವಂತೆ ಅಂಗಲಾಚುತ್ತಿರುವ ದೃಶ್ಯವಂತೂ ನಿಜಕ್ಕೂ ಮನ ಕಲಕುವಂತಿದೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಯಾರಾದರೂ ಈ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವವರು ಈ ಖಾತೆ ಸಂಖ್ಯೆ ಹಾಗೂ ಗೂಗಲ್ ಪೇ ಸಂಖ್ಯೆಯನ್ನು ಸಂಪರ್ಕಿಸಿ.
NAGARATHNA.B.
3151108002280
CANARA BANK ANANDAPURA.
IFSC CODE: CNRB0003151
GOOGLE PAY : 7618731747.(SUSHMITHA.B )
(ವರದಿ: ಪವನ್ ಕುಮಾರ್ ಕಠಾರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post