ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದ ಗಾಂಧಿಬಜಾರ್ Shivamogga Gandhi Bazar ಕರಿ ದೇವರ ಬೀದಿಯಲ್ಲಿ ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳು ಮನೆಯೊಂದರ ಮೇಲೆ ದಾಳಿ ನಡೆಸಿ, ತಪಾಸಣೆ ನಡೆಸಿದ್ದಾರೆ. 2 ಬಲೇರೋ ವಾಹನದಲ್ಲಿ 8 ಅಧಿಕಾರಿಗಳು ಬಂದು ಇಲ್ಲಿನ ರಂಗನಾಥ ನಿಲಯ ಎಂಬ 5 ಅಂತಸ್ತಿನ ಮನೆಯೊಂದರಲ್ಲಿ ತಪಾಸಣೆ ನಡೆಸುತ್ತಿದ್ದಾರೆ.
ಬಿಬಿಎಂಪಿಯಲ್ಲಿ ಇಂಜಿನಿಯರ್ BBMP Engineer ಎಂದು ಹೇಳಲಾಗುವ ಅಧಿಕಾರಿಗೆ ಸಂಬಂಧಪಟ್ಟ ಕಟ್ಟಡವಾಗಿದ್ದು, ಅಧಿಕಾರಿ ಹೆಸರು ಹೇಳಲು ಲೋಕಾಯುಕ್ತ ಅಧಿಕಾರಿಯವರು ನಿರಾಕರಿಸಿದ್ದಾರೆ.
Also read: ಬೆಂಗಳೂರಿನಲ್ಲಿ ಟ್ಯಾಂಕರ್ ಲಾಬಿ, ಬಾಯ್ ಬೆಂಗಳೂರು ಎನ್ನುತ್ತಿರುವ ಜನರು: ಆರ್. ಅಶೋಕ ಟೀಕೆ
ಈ ವೇಳೆ ಶಿವಮೊಗ್ಗದ ಗಾಂಧಿಬಜಾರಿನ ಖಾಸಗಿ ಚಿನ್ನಾಭರಣ ಅಂಗಡಿಯಿಂದ ತೂಕಮಾಡುವ ಯಂತ್ರ ಮತ್ತು ಬೀಗ ಒಡೆಯುವ ವ್ಯಕ್ತಿಗಳನ್ನು ಕೂಡ ಅಧಿಕಾರಿಗಳು ಕರೆಸಿದ್ದು ಕುತೂಹಲಕ್ಕೆ ಕಾರಣವಾಗಿದೆ. ಅದರಂತೆ ಹೊಸನಗರ ತಾಲ್ಲೂಕಿನ ಮರಳಿ ಗ್ರಾಮದ ಅಬಕಾರಿ ಅಧಿಕಾರಿಯ ತೋಟದ ಮನೆಯ ಮೇಲೂ ದಾಳಿಯಾಗಿದ್ದು, ರಾಜ್ಯದಲ್ಲೆಡೆ 50ಕ್ಕೂ ಹೆಚ್ಚು ಕಡೆ ಲೋಕಾಯುಕ್ತ ದಾಳಿಯಾದ ಬಗ್ಗೆ ಮಾಹಿತಿ ಬಂದಿದೆ.
ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post