Read - 2 minutes
ಅತ್ಯಂತ ಅದ್ಭುತ ಚೇತನಗಳನ್ನು ಪಡೆದ ಶಿವಮೊಗ್ಗದ ನೆಲ ಕರ್ನಾಟಕದ ಸಾಹಿತ್ಯಿಕ ರಾಜಧಾನಿಯಾಗಿದೆ ಎಂದು ಖ್ಯಾತ ವಾಗ್ಮಿ ಪ್ರೊ. ಕೃಷ್ಣೇಗೌಡ Prof. Krishne Gowda ಅಭಿಪ್ರಾಯಪಟ್ಟರು.
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅತ್ಯಂತ ಅದ್ಭುತ ಚೇತನಗಳನ್ನು ಪಡೆದ ಶಿವಮೊಗ್ಗದ ನೆಲ ಕರ್ನಾಟಕದ ಸಾಹಿತ್ಯಿಕ ರಾಜಧಾನಿಯಾಗಿದೆ ಎಂದು ಖ್ಯಾತ ವಾಗ್ಮಿ ಪ್ರೊ. ಕೃಷ್ಣೇಗೌಡ Prof. Krishne Gowda ಅಭಿಪ್ರಾಯಪಟ್ಟರು.
ಮಂಗಳವಾರ ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತಮಹೋತ್ಸವದ ಪ್ರಯುಕ್ತ ಪ್ರತಿ ತಿಂಗಳು ನಡೆಸಿಕೊಂಡು ಬರುತ್ತಿರುವ ಉಪನ್ಯಾಸ ಸರಣಿಯ ಎಂಟನೇ ಮಾಲಿಕೆಯಲ್ಲಿ ‘ಗುಣಾತ್ಮಕ ಜೀವನ’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಜಗತ್ತಿನಲ್ಲಿ ದೊಡ್ಡವರು ಹಾಗಾಗಿಯೇ ಹುಟ್ಟುವುದಿಲ್ಲ. ಅಂತಹವರನ್ನು ಪಡೆಯಲು ಅಲ್ಲಿನ ನೆಲ ತಪಸ್ಸು ಮಾಡಿರಬೇಕು. ಅಂತಹ ಹೆಮ್ಮೆಯ ತಪೊಭೂಮಿ ಶಿವಮೊಗ್ಗ. ಮಾತು ಎಂಬುದು ಮನುಷ್ಯ ಜಗತ್ತಿನ ಕಾಂತಿಯುತ ತೇಜಸ್ಸು. ಅಂತಹ ಮಾತು ಕೇವಲ ತೋರಿಕೆಗೆ ಬೂಟಾಟಿಕೆಗೆ ಸೀಮಿತವಾಗಬಾರದು. ಜಗತ್ತಿನಲ್ಲಿ ಎಲ್ಲಾ ವಿಷಯವು ನಮ್ಮ ಗ್ರಹಿಕೆಯ ಆಧಾರದ ಮೇಲೆ ಒಂದು ದೃಷ್ಟಿಕೋನ ರೂಪಗೊಳ್ಳುತ್ತದೆ. ಅದರೇ ಯಾವ ನಿಲುವುಗಳು ವಸ್ತು ನಿಷ್ಟವಲ್ಲ. ನಮ್ಮ ನಿರೀಕ್ಷೆಗಳು ಕೇವಲ ಭ್ರಮೆಯಷ್ಟೆ.
ಇಂದಿನ ಶಿಕ್ಷಣ ವ್ಯವಸ್ಥೆ ಕೇವಲ ಮೆದುಳಿಗೆ ಪಾಠ ಮಾಡುತ್ತಿದೆ. ಓದು ಕೇವಲ ಸಂರ್ದರ್ಭದ ಸಿಮಿತತೆಗೆ ಒಳಪಡುತ್ತಿದೆ. ನಮ್ಮ ಕಲಿಕೆ ಸಿಮಿತತೆಗೆ ಮೀರಿದ ಅಧ್ಯಯನ ನಡೆಸಬೇಕಿದೆ. ಸಮಾಜ ನಮಗೆ ತಿಳಿಸುವ ಪಾಠ ಎಲ್ಲವನ್ನೂ ಮೀರಿದ್ದು. ಈ ಸಮಾಜದಲ್ಲಿ ಎಲ್ಲವೂ ಕಾಣುತ್ತದೆ, ಕೇಳಿಸುತ್ತದೆ, ಅದರೇ ಏನನ್ನು ಕೇಳಬೇಕು ನೋಡಬೇಕು ಎಂಬ ತೀರ್ಮಾನವನ್ನು ನಾವು ಮಾಡಬೇಕಿದೆ. ಪಂಚೇಂದ್ರಿಯಗಳಿಗೆ ಪೂರಕವಾದ ಸಮಾಜಮುಖಿ ವಿಚಾರಗಳ ಅವಶ್ಯಕತೆ ನಮಗಿದೆ.
ಸಂಪಾದನೆಯ ಹಿಂದೆ ಹೋಗಿ ಗುಣಾತ್ಮಕ ಜೀವನವನ್ನು ಕಳೆದುಕೊಂಡಿದ್ದೇವೆ. ಗುಣಾತ್ಮಕ ಜೀವನ ಬೆಳೆಯುವುದು ಹೊಟ್ಟೆ ಕಿಚ್ಚಿನಿಂದಲ್ಲ, ಇನ್ನೊಬ್ಬರನ್ನು ನೆಮ್ಮದಿಯಾಗಿ ಬದುಕುವಂತೆ ಮಾಡುವುದರಿಂದ ಎಂದು ಹೇಳಿದರು.
ಸ್ಲೋ ಲಿವಿಂಗ್ ಚಳುವಳಿ ಅವಶ್ಯಕತೆಯಿದೆ:
ಜಗತ್ತಿನಲ್ಲಿ ಸ್ಲೋ ಲಿವಿಂಗ್ ಚಳುವಳಿ ಶುರುವಾಗಿದೆ. ಓಟದ ಜೀವನ ಅವಶ್ಯಕವಿಲ್ಲ. ಬದುಕನ್ನು ವ್ಯವದಾನದ ಆನಂದದಿಂದ ಅನುಭವಿಸೋಣ. ಅಂತಹ ಅನುಭವಿ ಜೀವನಕ್ಕೆ ಸ್ಲೋ ಲೀವಿಂಗ್ ಚಳುವಳಿ ಹೆಚ್ಚಾಗಬೇಕಿದೆ. ಶ್ರೀಮಂತಿಕೆ ಹೆಚ್ಚಾದಂತೆ ಆತಂಕದ ಕ್ಷಣಗಳು ಹೆಚ್ಚಾಗುತ್ತಿದೆ. ನಮ್ಮ ಪೂರ್ವಿಕರಿಗೆ ಬಡತನವೆಂಬುದೇ ತಿಳಿದಿರಲಿಲ್ಲಾ ಎಂದು ಹೇಳಿದರು.
ಜಗತ್ತಿನಲ್ಲಿ ಸ್ಲೋ ಲಿವಿಂಗ್ ಚಳುವಳಿ ಶುರುವಾಗಿದೆ. ಓಟದ ಜೀವನ ಅವಶ್ಯಕವಿಲ್ಲ. ಬದುಕನ್ನು ವ್ಯವದಾನದ ಆನಂದದಿಂದ ಅನುಭವಿಸೋಣ. ಅಂತಹ ಅನುಭವಿ ಜೀವನಕ್ಕೆ ಸ್ಲೋ ಲೀವಿಂಗ್ ಚಳುವಳಿ ಹೆಚ್ಚಾಗಬೇಕಿದೆ. ಶ್ರೀಮಂತಿಕೆ ಹೆಚ್ಚಾದಂತೆ ಆತಂಕದ ಕ್ಷಣಗಳು ಹೆಚ್ಚಾಗುತ್ತಿದೆ. ನಮ್ಮ ಪೂರ್ವಿಕರಿಗೆ ಬಡತನವೆಂಬುದೇ ತಿಳಿದಿರಲಿಲ್ಲಾ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿಗಳಾದ ಡಿ.ಜಿ ರಮೇಶ್, ನಿರ್ದೇಶಕರಾದ ಮೈಲಾರಪ್ಪ, ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಮಧುರಾವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Discussion about this post